Saturday, June 21, 2025

Latest Posts

‘ಕಾಂಗ್ರೆಸ್ ನಲ್ಲಿ ಪೊಲ್ಯೂಷನ್ ಜಾಸ್ತಿಯಾಗಿದೆ. ಪಾರಿವಾಳಗಳು ಹಾರಿ ಹೋಗುವ ಕಾಲ ಬರ್ತಿದೆ’

- Advertisement -

Political News: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿದ್ದು, ದೇಶ, ಕರ್ನಾಟಕದ ಜನ ಬಿಜೆಪಿ ಕಾರ್ಯಕರ್ತರು ಸಂಭ್ರಮ ಪಡುವ ಸುದಿನ. ನಾಲ್ಕು ರಾಜ್ಯದ ಪ್ರಜ್ಞಾವಂತ ಮತದಾರರಿಗೆ ಅಭಿನಂದನೆ ಎಂದಿದ್ದಾರೆ.

ಮೋದಿ ಬಗ್ಗೆ ಪ್ರೀತಿ ಇಟ್ಟಿದೀರಿ. ನಮ್ಮ ಮೋದಿ, ನಮ್ಮ ಬಿಜೆಪಿ ಅಂತಾ ಪ್ರೀತಿ ಕೊಟ್ಟಿದ್ದೀರಾ. ಫಲಿತಾಂಶ ಈ ದೇಶದ ಯಾರ ಕೈಯಲ್ಲಿ ಇರಬೇಕು ಎಂಬುದನ್ನು ಹೇಳಿದೆ. ಮೂರು ರಾಜ್ಯಗಳಲ್ಲಿ ನಿಚ್ಚಳ ಫಲಿತಾಂಶ ಬಂದಿದೆ‌. ಕಾಂಗ್ರೆಸ್ ಗ್ಯಾರಂಟಿ ಗೆ ವಾರಂಟಿ ಇಲ್ಲಾ. ಚೈನಾ ಮಾಡೆಲ್ ಗೆ ಗ್ಯಾರಂಟಿ ಇಲ್ಲಾ ಅನ್ನೋದು ಈ ಚುನಾವಣೆ ಇಂದ ಅರ್ಥ ಆಗಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಮೋದಿ ದೇಶ ಮುನ್ನೆಡೆಸವ ರೀತಿ ಜನಾ ಮೆಚ್ಚಿದೀರಾ. ವಿಶ್ವ ಗುರು ಆಗಲು ಮೋದಿಯಿಂದ ಸಾಧ್ಯ. ಕಾಂಗ್ರೆಸ್ ಕೀಳು ಮಟ್ಟಕ್ಕೆ ಹೋಗಿದೆ. ಕ್ರಿಕೆಟ್ ನೋಡೋ ವಿಚಾರದಲ್ಲಿ ಕೀಳು ಮಟ್ಟಕ್ಕೆ ಹೋಗಿದೆ. ಮೋದಿ ಮ್ಯಾಚ್ ನೋಡಿದ್ದಕ್ಕೆ ‘ಪನೋತಿ’ ಅಪಶಕುನ ಎಂದಿದ್ದಾರೆ. ಕೋರ್ಟ್ ಲಿ‌ ಕೇಸ್ ಇದ್ಯಂತೆ ಹಾಗಾಗಿ ನಾನು ಪಪ್ಪು ಅನ್ನಲ್ಲಾ. ಯಾರು ಪನೋತಿ ಅಂತಾ ಜನಾ ತೀರ್ಮಾನ ಮಾಡ್ತಾರೆ. ಐರನ್ ಲೆಗ್ ಯಾರು ಅನ್ನೋದನ್ನಾ ಜನ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ನಮ್ಗೆ ಹೆಚ್ಚಿನ ಸೀಟ್ ಕಳೆದ ಬಾರಿಗಿಂತ ಹೆಚ್ಚು. ಅಲ್ಲಿ ಕಾಂಗ್ರೆಸ್ ಗ್ಯಾರಂಟಿ ವರ್ಕ್ ಆಗಿಲ್ಲಾ. ಬಿಆರ್ ಎಸ್ ಕುಟುಂಬ ರಾಜಕಾರಣದಿಂದ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಬಂದಿದೆ. ಇದು ಕಾಂಗ್ರೆಸ್ ನ ಸ್ವಂತದ ಗೆಲುವು ಅಲ್ಲಾ. ಈ ಫಲಿತಾಂಶ ನಮ್ಮ‌ ಕಾರ್ಯಕರ್ತರಲ್ಲಿ ಸಂಭ್ರಮ ತಂದಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ಈ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಅಂತ ಯಾತ್ರೆ ಮಾಡಿದ್ರು. ಅಲ್ಲಿನ ಜನ ಕಾಂಗ್ರೆಸ್ ಛೋಡೋ(ಕಾಂಗ್ರೆಸ್ ಬಿಡಿ) ಅಂತ ಹೇಳಿ ಈ ಫಲಿತಾಂಶ ಕೊಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಪಲ್ಯೂಷನ್ ಜಾಸ್ತಿಯಾಗಿದೆ. ಪಾರಿವಾಳಗಳು ಹಾರಿ ಹೋಗುವ ಕಾಲ ಬರ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

‘ತೆಲಂಗಾಣದಲ್ಲಿ ಕಾಂಗ್ರೆಸ್ ಮೈನಾರಿಟಿ ವೋಟ್‌ಗಳನ್ನ ಖರೀದಿ ಮಾಡಿದೆ’

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ವಿಜಯೇಂದ್ರ

ಮೂರು ಸಹಕಾರಿ ಬ್ಯಾಂಕ್ಗಳ ಹಗರಣ ಸಿಬಿಐ ತನಿಖೆಗೆ : ಸಿದ್ದರಾಮಯ್ಯ

- Advertisement -

Latest Posts

Don't Miss