Saturday, December 6, 2025

Latest Posts

ಮೊದಲ ಬಾರಿ ಪ್ರೀತಂಗೌಡರ ಜೊತೆ ಮಾತನಾಡುತ್ತೇನೆ ಎಂದು ಹೇಳಿ, ಸ್ನೇಹ ಹಸ್ತ ಚಾಚಿದ ಪ್ರಜ್ವಲ್ ರೇವಣ್ಣ..

- Advertisement -

Hassan News: ಹಾಸನ : ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್‌ರೇವಣ್ಣ, ನಾನೂ ಐದು ವರ್ಷದಲ್ಲಿ ಎಲ್ಲಾ ಭಾಗಕ್ಕೂ ಹೋಗಿದ್ದೀನಿ, ಎಲ್ಲಾ ಕಡೆ ಚೆನ್ನಾಗಿದೆ, ಎಲ್ಲಾ ಕಡೆ ಒಳ್ಳೆಯ ವಿಶ್ವಾಸ ಇದೆ, ಎರಡು ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ ಎಂದಿದ್ದಾರೆ.

ಅಲ್ಲದೇ, ನಾವು ಖಂಡಿಯವಾಗಿಯೂ ಒಳ್ಳೆಯ ಲೀಡ್‌ನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಗೆಲ್ತೀನಿ. ನನಗೆ ಬಂದಿರುವ ಮಾಹಿತಿ ಪ್ರಕಾರ ಭಾನುವಾರ ಅಥವಾ ಸೋಮವಾರ ಬಿಜೆಪಿ-ಜೆಡಿಎಸ್ ಟಿಕೆಟ್ ಅನೌನ್ಸ್ ಮಾಡ್ತಾರೆ. ಇನ್ನೇರಡು, ಮೂರು ದಿನಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಟಿಕೆಟ್‌ಗಳನ್ನು ಘೋಷಣೆ ಮಾಡ್ತಾರೆ. ಜೆಡಿಎಸ್‌ಗೆ ಎಷ್ಟು ಟಿಕೆಟ್ ಕೊಡಬೇಕು ಎಂದು ಎರಡು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಟಿಕೆಟ್ ಕೊಟ್ಟ ಮೇಲೆ ಕೆಲಸ ಮಾಡೋಣ ಎಂದಿದ್ದಾರೆ.

ಈಗಾಗಲೇ ಒಂದು ರೌಂಡ್ ಎಲ್ಲಾ ಪಂಚಾಯಿತಿಗೆ ಹೋಗಿದ್ದೀನಿ, ಹಳ್ಳಿಗಳಿಗೆ ಭೇಟಿ ನೀಡಿದ್ದೀನಿ. ಒಂದು ರೌಂಡ್ ಕ್ಯಾನ್ವಾಸ್ ಕೂಡ ಆಗಿದೆ. ಏನಾದರೂ ಸರಿಪಡಿಸಿಕೊಳ್ಳುವುದಿದ್ದರೆ ಸರಿಪಡಿಸಿಕೊಳ್ತಿನಿ. ನಾವು ಎಲ್ಲರ ಜೊತೆ ಟಚ್‌ನಲ್ಲಿ ಇದ್ದೀನಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದೀನಿ. ನಿನ್ನೆಯೂ ಕೂಡ ಬಿಜೆಪಿ ನಾಯಕರು ಕರೆ ಮಾಡಿದ್ರು ಎಂದು ಪ್ರಜ್ವಲ್ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಶ್ರೇಯಸ್‌ಪಟೇಲ್‌ಗೆ ಟಿಕೆಟ್ ಘೋಷಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್, ನಾನು ಅದರ ಬಗ್ಗೆ ಚರ್ಚೆ ಮಾಡಲ್ಲ. ಕೆಲಸ‌ ಮಾಡಿರುವವರು ಬಂದರೆ ಮಾತನಾಡಬಹುದು. ಕೆಲಸ ಮಾಡದೇ ಸುಮ್ಮನೆ ಓಡಾಡಿಕೊಂಡು ಬರುವವರ ಬಗ್ಗೆ ನಾನೇನು ಮಾತನಾಡಲಿ..? ಎಂದು ಪ್ರಜ್ವಲ್ ಮರುಪ್ರಶ್ನಿಸಿದ್ದಾರೆ.

ಮಂಡ್ಯ ಹಾಗೂ ಕೋಲಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ವಿಚಾರದ ಬಗ್ಗೆ ಪ್ರಜ್ವಲ್ ಪ್ರತಿಕ್ರಿಯಿಸಿದ್ದು,  ಅಲ್ಲಿ ಯಾರೂ ನಿಲ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕುಮಾರಣ್ಣ ಸ್ಪರ್ಧಿಸಿದರೆ ಒಳ್ಳೆಯದೇ ಆಗುತ್ತೆ. ಕುಮಾರಣ್ಣ ನಿಂತರೆ ಹಳೇಮೈಸೂರು ಭಾಗದಲ್ಲಿ ಒಂದು ಅಲೆ‌ ಎದ್ದೇಳುತ್ತೆ. ಕುಮಾರಸ್ವಾಮಿ ನಿಂತರೆ ನಮಗೆ ಒಳ್ಳೆಯದೇ ಆಗುತ್ತೆ. ಕುಮಾರಣ್ಣ ಸ್ಪರ್ಧೆಯನ್ನು ಸ್ವಾಗತ ಮಾಡುತ್ತೇನೆ. ಐದು ವರ್ಷ ಸಂಸದನಾಗಿ ಒಳ್ಳೆಯ ಅನುಭವ ನೀಡಿದೆ. ಎಲ್ಲಾ ಕಡೆ ಹೋಗಲು ಆಗಲ್ಲ, ಆದರೂ ಬಹುತೇಕ ಭೇಟಿ ನೀಡಿ ಕೆಲಸ ಮಾಡಿದ್ದೀನಿ. ರೈತರುಗಳಿಗೆ, ಸಾರ್ವಜನಿಕರಿಗೆ ಅನ್ಯಾಯವಾಗದ ರೀತಿ ‌ಕೆಲಸ ಮಾಡಿದ್ದೀನಿ. ಐದು ವರ್ಷ ವಿಶೇಷವಾದ ಅನುಭವವಾಗಿದೆ. ಎಲ್ಲರೂ ಬಹಳಷ್ಟು ಅನುಭವ ಕೊಟ್ಟಿದ್ದಾರೆ. ಮುಂದೆಯೂ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಟಿಕೆಟ್ ಅನೌನ್ಸ್ ಆದ್ಮೇಲೆ ಎರಡು ಪಕ್ಷದವರು ಸೇರಿ ಎಲ್ಲಾ ಭಾಗದಲ್ಲೂ ಸಭೆ ಮಾಡ್ತಿವಿ. ಕಡೂರಿನಲ್ಲಿ ಬೆಳ್ಳಿಪ್ರಕಾಶ್ ಅಣ್ಣನ ಜೊತೆ ಮಾತನಾಡಿದ್ದೀನಿ. ಬೇಲೂರು ಶಾಸಕ ಎಚ್.ಕೆ.ಸುರೇಶಣ್ಣ, ಸಕಲೇಶಪುರ ಶಾಸಕ ಸಿಮೆಂಟ್ ಮಂಜಣ್ಣನ ಜೊತೆ ಮಾತನಾಡಿದ್ದೀನಿ. ಅರಕಲಗೂಡು ಯೋಗರಮೇಶ್ ಅಣ್ಣ ಜೊತೆ ಮಾತನಾಡುತ್ತೇನೆ. ಎಲ್ಲರ ಜೊತೆ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಲ್ಲದೇ, ಮೊದಲ ಬಾರಿ ಪ್ರೀತಂಗೌಡರ ಜೊತೆ ಮಾತನಾಡುತ್ತೀನಿ ಎಂದು ಹೇಳುವ ಮೂಲಕ, ಪ್ರಜ್ವಲ್, ಪ್ರೀತಂಗೌಡರ ಬಳಿ ಸ್ನೇಹ ಹಸ್ತ ಚಾಚಿದ್ದಾರೆ.

ಮೊದಲು ಸ್ಥಳೀಯ ಮಟ್ಟದಲ್ಲಿ ಸಭೆ ಮಾಡುತ್ತೇವೆ. ನಂತರ ದೊಡ್ಡಮಟ್ಟದ ರ್ಯಾಲಿ ಮಾಡುತ್ತೇವೆ. ಯಡಿಯೂರಪ್ಪ ಅವರು, ವಿಜಯೇಂದ್ರ ಅಣ್ಣ, ಕುಮಾರಣ್ಣ ಬರಬೇಕಾದರೆ ರ‌್ಯಾಲಿಗೂ ಮುನ್ನ ಪೂರ್ವಭಾವಿ ಸಭೆ ಮಾಡ್ತೇವೆ. ನಮ್ಮ ಪಕ್ಷದ ಪೂರ್ವಭಾವಿ ಸಭೆಗಳು ನಡೆದಿವೆ. ಈಗ ಜಂಟಿ ಪೂರ್ವಭಾವಿ ಸಭೆಗಳು‌ ನಡೆಯಬೇಕು. ಮಾ.12-15 ರೊಳಗೆ ಚುನಾವಣೆ ಅನೌನ್ಸ್ ಆಗಬಹುದು. ದೇವೇಗೌಡರು ಎಲ್ಲಾ ಕಡೆ ಪ್ರಚಾರ ಮಾಡುತ್ತಾರೆ. ದೇವೇಗೌಡರಿಗೆ ಹೆಚ್ಚು ಅನುಭವವಿದೆ. ಎಲ್ಲದ್ದನ್ನೂ ಸರಿ ಮಾಡುವ ಕೆಲಸ ಮಾಡ್ತಿನಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಬೆಂಗಳೂರಿನ ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಅಂದ್ರೆ, ಕೊಡಬೇಕಂತೆ 1 ಸಾವಿರ ರೂಪಾಯಿ..

ಲೋಕಸಭಾ ಸಮರಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್..

ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ: ಮೋಹನ್ ಲಿಂಬಿಕಾಯಿ

- Advertisement -

Latest Posts

Don't Miss