ಹಾಸನ : ಹಾಸನ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನೂರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ತೆರಳಿ ಮತಯಾಚನೆ ಮಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಬರುವುದು, ಹೋಗುವುದು ಸಹಜ. ನಾನು ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಜನರ ಜೊತೆ ನಿಂತಿದ್ದೆ. ಹಾಸನ 25 ವರ್ಷದಲ್ಲಿ ಯಾವೆಲ್ಲಾ ಅಭಿವೃದ್ಧಿಯನ್ನು ಕಾಣಬೇಕಿತ್ತು, ಆ ಅಭಿವೃದ್ಧಿ ಮಾಡಿದ್ದಾನೆ ಒಬ್ಬ ಯುವಕ ಅಂತ ಎಲ್ಲರೂ ಆಶೀರ್ವಾದ ಮಾಡ್ತಿದ್ದಾರೆ. ಈ ಜನ ಬೆಂಬಲ ನೋಡಿ ಒಂದು ಮಾತನ್ನು ಹೇಳ್ತಿನಿ. ಯಾರೇ ಚುನಾವಣೆ ರಾಜಕಾರಣದಲ್ಲಿ ಇರುವವರಿಗೆ ಅವರ ಚುನಾವಣೆ ಸಂದರ್ಭದಲ್ಲಿ ಏನು ಸಪೋರ್ಟ್ ಬೇಸ್ ಎಸ್ಟಾಬ್ಲಿಷ್ ಆಗುತ್ತೆ, ಆಗ ಮಾತ್ರ ನಾವು ಮಾಡಿರುವ ಕೆಲಸದ ಸಾರ್ಥಕತೆ ಅರ್ಥ ಆಗುತ್ತೆ ಎಂದು ಪ್ರೀತಂಗೌಡ ಹೇಳಿದ್ದಾರೆ.
ಹಾಸನದಲ್ಲಿ ಜೆಡಿಎಸ್ ಬೃಹತ್ ರೋಡ್ ಶೋ ಹಾಗೂ ದಳಪತಿಗಳು ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರೀತಂಗೌಡ, ನಾಮಿನೇಷನ್ ನಿನ್ನೆ ಮುಗಿತು . ನಾನೊಂದು ಶಪಥವನ್ನು ಮಾಡಿದ್ದೀನಿ. ವಿರೋಧ ಪಕ್ಷದ ಅಭ್ಯರ್ಥಿಯ ಹೆಸರು ಹೇಳದ ರೀತಿಯಲ್ಲಿ ಯಾವ ಮುಖಂಡರ ಹೆಸರನ್ನು ತೆಗೆದುಕೊಳ್ಳದೆ ನಮ್ಮ ಚುನಾವಣೆ ಮಾಡ್ತಿನಿ. ಇಲ್ಲಿಯವರೆಗೂ ನಾಮಿನೇಷನ್ ಇತ್ತು ಯಾರು ಅಭ್ಯರ್ಥಿ ಆಗ್ತಾರೆ ಏನು ಅಂತ ಮಾತನಾಡಬೇಕಿತ್ತು. ನಾನು ಒಂದು ಶಪಥ ಮಾಡಿದ್ದೀನಿ. ಅಭ್ಯರ್ಥಿ ಹೆಸರಾಗಲಿ, ನನ್ನ ವಿರೋಧ ಪಕ್ಷದ ಯಾವುದೇ ಮುಖಂಡರ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ಮಾಡಿರುವ ಕೆಲಸಕ್ಕೆ ಆಶೀರ್ವಾದ ಮಾಡಿ ಅಂತ ಕೈಮುಗಿದು ಕೇಳಿ ಕೊಳ್ಳುವ ತೀರ್ಮಾನಕ್ಕೆ ಬಂದಿದ್ದೀನಿ ಎಂದು ಪ್ರೀತಂ ಹೇಳಿದ್ದಾರೆ.
ಅಲ್ಲದೇ, ನಾನು ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿ, ಯಾವುದೇ ಅಭ್ಯರ್ಥಿ, ಯಾವುದೇ ಪಕ್ಷದ ಬಗ್ಗೆ ಮಾತನಾಡಲ್ಲ. ಪ್ರೀತಂಗೌಡ ಕೆಲಸ ಮಾಡಿದ್ದಾನೆ ಕಣ್ಮುಂದೆ ಇದೆ. ಆಶೀರ್ವಾದ ಮಾಡಿ ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಅಂತ ಕೈಮುಗಿದು ಮತದಾರರಲ್ಲಿ ಪ್ರಾರ್ಥನೆ ಮಾಡ್ತಿನಿ ಎಂದು ಪ್ರೀತಂ ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಸದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರೀತಂ, ನಿನ್ನೆಗೆ ನಾಮಿನೇಷನ್ ಮುಗಿತು, ನಾನು ಇನ್ನೇನು ಮಾತನಾಡುವುದಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾನು. ನನಗೆ ಜನರು ಮತ ಹಾಕಿ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಅಂತ ಮಾತ್ರ ಕೇಳಿಕೊಳ್ಳುತ್ತಿನಿ. ನಿನ್ನೆ ನಿನ್ನೆಗೆ, ಇವತ್ತಿಂದ ಚುನಾವಣೆ. ಮುಗಿದ ಅಧ್ಯಾಯದ ಬಗ್ಗೆ ಮಾತನಾಡಲ್ಲ. ಕೈಮುಗಿದು ಆಶೀರ್ವಾದ ಮಾಡಿ ಅಂತ ಕೇಳ್ಕತಿನಿ ಅಷ್ಟೇ.. ಎಂದು ಪ್ರೀತಂ ಹೇಳಿದ್ದಾರೆ.