Kolar News: ಕೋಲಾರ: ಕೋಲಾರದಲ್ಲಿಂದು ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಬಿಜೆಪಿ ಪರ, ಮೋದಿ ಪರ ಬ್ಯಾಟ್ ಬೀಸಿದ್ದಾರೆ. ರಾಜ್ಯದಲ್ಲಿ ಐದು ತಂಡಗಳಾಗಿ ಪ್ರವಾಸ ಮಾಡುತ್ತೇವೆ. ಕೋವಿಡ್ ಸಂದರ್ಭದಲ್ಲಿ ವ್ಯಾಕ್ಸಿನ್ ಕೊಟ್ಟಿದ್ದೇವೆ. ಮೋದಿ ಬಿಟ್ಟು ಯಾರೇ ಇದ್ರು ಈ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ರೈತರಿಗೆ ವರ್ಷಕ್ಕೆ 10 ಸಾವಿರ ಹಣ ನೀಡಲಾಗಿದೆ. ಮೋದಿಯವರು ರಸ್ತೆಗಳ ಅಭಿವೃದ್ಧಿಗೆ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಅಶೋಕ್ ಹೇಳಿದರು.
ಇನ್ನು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಅಶೋಕ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮದದಿಂದ ಜನರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಕಾಂಗ್ರೆಸ್ ನವರು 10 ಕೆಜಿ ಅಕ್ಕಿ ಕೊಡುತ್ತೇನೆಂದು ಈಗ 5 ಕೆಜಿಗೆ ಬಂದಿದ್ದಾರೆ. ಏಕಾಏಕಿ ವಿದ್ಯುತ್ ಬಿಲ್ ಏರಿಕೆ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತದೆ. ಕೋಲಾರ- ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದಿದ್ದೇವೆ. ಆದ್ರೆ ಕೆಲವೊಂದು ಏರುಪೇರಾದ ಕಾರಣ ನಮ್ಮ ಅಭ್ಯರ್ಥಿಗಳು ಗೆದ್ದಿಲ್ಲ. ಆದ್ರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಇರಲ್ಲ. ಮೋದಿಯವರು ಅಕ್ಕಿ ಕೊಡಲಿಲ್ಲ ಅಂತ ಸಿದ್ದರಾಮಯ್ಯ ಹೇಳ್ತಾರೆ. ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸರ್ಕಾರವನ್ನು ಕೇಳಿ ಮಾಡಿದ್ರಾ ? ಘೋಷಣೆ ಮುನ್ನವೇ ಯೋಚನೆ ಮಾಡಿ ಹೇಳಬೇಕಿತ್ತು. ಉಚಿತ ಘೋಷಣೆ ಮಾಡುವಾಗ ನಿಮಗೆ ಜ್ಞಾನ ಇರಲಿಲ್ಲವಾ ? ಈಗ ಏಕೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತೀರಾ ? ಮೋದಿಯವರು ಬೇರೆ ರಾಜ್ಯಗಳಿಗೆ ಏನಾದ್ರು ಅಕ್ಕಿ ಕೊಟ್ಟಿದ್ದಾರಾ ? ಸಿದ್ದರಾಮಯ್ಯನವರೇ ನೀವೇನೂ ಆಕಾಶದಿಂದ ಇಳಿದು ಬಂದಿದ್ದೀರಾ? ಎಂದು ಅಶೋಕ್ ಸಿದ್ದರಾಮಯ್ಯ ವಿರುದ್ಧ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಯಾರೋ ಮ್ಯಾನೇಜರ್ ಕೊಟ್ಟ ಪತ್ರವನ್ನು ಪದೇ ಪದೇ ತೋರಿಸುತ್ತಿದ್ದಾರೆ. ನೀವು ಪೀವೊನ್ಗೆ ಲೆಟರ್ ಕಳಿಸಿದ್ದೀರಾ ಅವರು ರೀಪ್ಲೆ ಮಾಡಿದ್ದಾರೆ ಅಷ್ಟೇ. ಸೂಲಿಬೆಲೆ ದೇಶದ ಬಗ್ಗೆ ಪಠ್ಯ ಬರೆದಿದ್ದಾರೆ. ಇನ್ನು ಹೆಡ್ಗೆವಾರ್ ಅವರು ದೇಶದ ಬಗ್ಗೆ ಹೇಳಿದ್ದಾರೆ ಅಷ್ಟೇ. ಸೂಲಿಬೆಲೆ ಭಗತ್ ಸಿಂಗ್ ಬಗ್ಗೆ ಬರೆದಿದ್ದಾರೆ, ಅವರ ಜೀವನ ಚರಿತ್ರೆ ಬರೆದಿಲ್ಲ. ಕಾಂಗ್ರೆಸ್ ನವರಿಗೆ ಎಲ್ಲವೂ ಟಿಪ್ಪು ಮಯ. ಟಿಪ್ಪು ಜಯಂತಿ ಮಾಡಲು ಹೋಗಿ ಟ್ರಿಪ್ಪು ಡ್ರಾಪ್ ನಿಂದ ಕೆಳಗೆ ಬಿದ್ದಿದ್ದಾರೆ. ಬಿಜೆಪಿ ತಂದಿರುವ ಕಾಯ್ದೆಗಳ ಬಗ್ಗೆ ಕಾಂಗ್ರೆಸ್ಗೆ ದ್ವೇಷ ಇದೆ. ಟಿಪ್ಪು ಲಕ್ಷಾಂತರ ಜನರನ್ನು ಮತಾಂತರ ಮಾಡಿದ. ನಾವು ಹಿಂದೂಗಳು, ಕ್ರಿಶ್ಚಿಯನ್, ಮುಸ್ಲಿಮರು ಹೇಗಿದ್ದಾರೋ ಹಾಗೇ ಇರಿ ಅಂತಿದ್ದೇವೆ. ಯಾವುದೇ ಮತಾಂತರ, ಲವ್ ಜಿಹಾದ್ ಬೇಡ ಎನ್ನುತ್ತಿದ್ದೇವೆ ಎಂದು ಆರ್.ಅಶೋಕ್ ಕೋಲಾರದಲ್ಲಿ ಹೇಳಿದ್ದಾರೆ.
ಕಾಂತಾರಾ-2ಗೆ ಕುದುರೆ ಸವಾರಿ, ಕಲರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಬ್ಯುಸಿ.!
ವಿದ್ಯುತ್ ದರ ಏರಿಕೆ ವಿರುದ್ಧ ಹುಬ್ಬಳ್ಳಿಯಲ್ಲಿ ಚಿಮಿಣಿ ಹಿಡಿದು ಪ್ರತಿಭಟಿಸಿದ ಕೈಗಾರಿಕೋದ್ಯಮಿಗಳು..
‘ಯೋಜನೆ ಜಾರಿಯಾಗಲು ವಿಳಂಬವಾಗಬಹುದು. ಆದರೆ ನಾವು ಅಕ್ಕಿ ಕೊಟ್ಟೇ ಕೊಡುತ್ತೇವೆ’