State News:
ರಾಜಸ್ಥಾನದ ಜೈಸಿಂಗಾಪುರ್ ಖೋರ್ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಸ್ಥಳೀಯ ಪೊಲೀಸರು ಬೆಂಗಳೂರಿನ ತಹಶೀಲ್ದಾರ್, ಕರ್ನಾಟಕ ಪೊಲೀಸ್ ಇನ್ಸ್ಪೆಕ್ಟರ್, ಪ್ರೊಫೆಸರ್ ರಮೇಶ್ ಸೇರಿದಂತೆ 84 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 13 ಮಹಿಳೆಯರು ಸೇರಿದ್ದಾರೆ. ಬಂಧಿತರ ಪೈಕಿ ತಹಸೀಲ್ದಾರ್ ಹೆಸರು ನಾಥ್, ಇನ್ಸ್ಪೆಕ್ಟರ್ ಹೆಸರು ಅಂಜಯ್ಯ ಮತ್ತು ಪ್ರೊಫೆಸರ್ ಹೆಸರು ಕೆ.ಎಲ್.ರಮೇಶ್ ಎಂದು ತಿಳಿದು ಬಂದಿದೆ.
ರಾಜಸ್ಥಾನದ ಸಾಯಿಪುರ ಭಾಗ್ ಅರಮನೆಯಲ್ಲಿ ಅಕ್ರಮವಾಗಿ ಜೂಜು ಅಡ್ಡೆ ನಡೆಸಲಾಗುತ್ತಿದೆ ಎಂಬ ಮಾಹಿತಿಯ ಮೇಲೆ ಶನಿವಾರ ತಡರಾತ್ರಿ ದಾಳಿ ನಡೆಸಿದ ಪೊಲೀಸರು, 13 ಮಹಿಳೆಯರು ಸೇರಿದಂತೆ 84 ಮಂದಿಯನ್ನು ಬಂಧಿಸಿದ್ದಾರೆ. ಹಾಗು 9 ಹುಕ್ಕಾ, 44 ಐಎಂಎಫ್ಎಲ್ ಬಾಟಲ್ಗಳು, 14 ಐಶಾರಾಮಿ ಕಾರುಗಳು, ಒಂದು ಟ್ರಕ್ ಮತ್ತು 23.78 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ ಓರ್ವ ಬೆಂಗಳೂರು ಮೂಲದವನು ಹಾಗು ಉಳಿದ ಆರು ಜನ ಕೋಲಾರದವರು ಎಂದು ತಿಳಿದು ಬಂದಿದೆ. ಇವರು ತಲಾ 2 ಲಕ್ಷ ರೂ. ಪ್ರವೇಶ ಶುಲ್ಕ ಕೊಟ್ಟು ಜೂಜಾಡಿದ್ದರು ಎಂದು ತಿಳಿದು ಬಂದಿದೆ. ಕೋಲಾರದ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆಂಜಿನಪ್ಪ, ಉಪನ್ಯಾಸಕ ಪ್ರೊ.ರಮೇಶ್, ಟೊಮೆಟೋ ವ್ಯಾಪಾರಿ ಸುಧಾಕರ್ಗೌಡ, ಆರ್ಟಿಒ ಸಿಬ್ಬಂದಿ ಶಬರೀಶ್, ನಗರಸಭೆ ಸದಸ್ಯ ಸತೀಶ್ ಮತ್ತು ಕೆಎಎಸ್ ಅಧಿಕಾರಿ ಶ್ರೀನಾಥ್ ಬಂಧಿತರು. ಮತ್ತೊಬ್ಬ ವ್ಯಕ್ತಿ ಬೆಂಗಳೂರಿನವರು ಎನ್ನಲಾಗಿದೆ. ಇವರಲ್ಲಿ ಇನ್ಸ್ಪೆಕ್ಟರ್ ಆಂಜಿನಪ್ಪ ಅವರನ್ನು ಅಮಾನತು ಮಾಡಿ ಕೇಂದ್ರವಲಯ ಐಜಿಪಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ. ಇವರು ಮೂರು ದಿನ ರಜೆ ಹಾಕಿ ರಾಜಸ್ಥಾನಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.