ಮಂಡ್ಯ: ಮಾಜಿ ಶಾಸಕ ರಮೇಶ್ ಬಾಬು ವಿರುದ್ದ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ. ಬಡವರಿಗೆ ನ್ಯಾಯ ಕೊಡಿಸೋಕ್ಕೆ ನಾನು ಶಾಸಕನಾಗಿದ್ದೇನೆ. ಮುಖ್ಯಮಂತ್ರಿ ಬಳಿ ಹಲ್ಲು ಗಿಂಚಿಕೊಂಡು ಸೈಟ್ ಬರಸಿಕೊಳ್ಳಕ್ಕಲ್ಲ. ಕಾಂಗ್ರೆಸ್ ಅಭ್ಯರ್ಥಿ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದಾರೆ. ನಿಮ್ಮ ಬಗ್ಗೆ ಜನರಿಗೆ ಗೊತ್ತಿದೆ ಯಾವ ಯಾವ ನಾಟಕ ಆಡ್ತಿದ್ದೀರಿ ಅಂತಾ. ನನ್ನ ಮನೆಯನ್ನ ವಾಟ್ಸ್ ಆಪ್ ಮೂಲಕ ವಿಡಿಯೋ ಮಾಡಿ ಬಿಡ್ತಿರಾ. ಸಾರ್ವಜನಿಕ ಹಣನ ನೀವು ಎಷ್ಟು ಲೂಟಿ ಮಾಡಿದ್ದಿರಿ? ಅಕ್ರಮವಾಗಿ ಲೂಟಿ ಮಾಡಿ ಸೈಟ್ ಮಾಡಿದ್ದಿರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿಮ್ಮನ್ನು ಇವತ್ತು ಸಿಬಿಐ ಹುಡುಕಾಡುತ್ತಿದೆ. ನೀವು ಮಾಡಿರೋ ಭ್ರಷ್ಟಚಾರಕ್ಕೆ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಿಯ. ನೀವೇಲ್ಲ ಅದೃಷ್ಟದ ಮೇಲೆ ರಾಜಕೀಯ ಹಿಡಿದವರು. ನಾನು ಹೋರಾಟ ಮಾಡಿ ಯೋಗ್ಯತೆ ಮೇಲೆ ಅಧಿಕಾರಕ್ಕೆ ಬಂದೆ. ನನ್ನ ನಾಯಕ ಎಸ್.ಎಂ.ಕೃಷ್ಣಗೆ ಕಾಂಗ್ರೆಸ್ ಅವಮಾನ ಮಾಡಿದಕ್ಕೆ, ನಾನು ಕಾಂಗ್ರೆಸ್ ಪಕ್ಷ ಬಿಟ್ಟೆ. ನನ್ನ ನಾಯಕನಿಗೆ ತೆಜೋವಧೆ ಆಗಿದ್ದಕ್ಕೆ ರಾಜೀನಾಮೆ ಕೊಟ್ಟೆ. ಗೌರವದಿಂದ ಪಕ್ಷ ಬಿಟ್ಟು ಬಂದಿದ್ದೇವೆ ಎಂದು ರವೀಂದ್ರ ಹೇಳಿದ್ದಾರೆ.
ಇವರು ಜೆಡಿಎಸ್ ಪಕ್ಷದಿಂದ ಹೇಗೆ ಬಂದ್ರು? ಕಾಂಗ್ರೆಸ್ ಗೆ ಬಂದು ತಪ್ಪು ಮಾಡಿದೆ ಅಂತ ಹೇಳ್ತಾರೆ. ದುಡ್ಡು ಇಸ್ಕೊಂಡು ಕುಮಾರಣ್ಣಗೆ ಮೋಸ ಮಾಡಿದ ಅಂತ ಜನ ಹೇಳ್ತಿದ್ದಾರೆ. ಕುಮಾರಣ್ಣನ ಬೆನ್ನಿಗೆ ಚೂರಿ ಹಾಕಿ, ಕಾಂಗ್ರೆಸ್ ಸೇರಿ ಆ ಪಕ್ಷದಲ್ಲಾದರು ನಿಯತ್ತು ಇದ್ಯಾ? ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ನಿಷ್ಟೆಯಿಂದ ಇದ್ರಾ? ಅಲ್ಲೂ ಮೋಸ ಮಾಡಿ ಇನ್ನೊಬ್ಬರ ಹತ್ರ ವ್ಯವಹಾರ ಮಾಡ್ತಿರಾ. ಹೈದರಾಬಾದ್ ನಿಂದ ವ್ಯವಹಾರ ಮಾಡ್ತಾರೆ. ನೀವು ಯಾವ ಪಕ್ಷಕ್ಕೂ ನಿಷ್ಠೆ ಇಲ್ಲ ನಿಮಗೆ. ಇಂದಿರಾಗಾಂಧಿ ಕಾಂಗ್ರೆಸ್ ಪಕ್ಷ ದೊಡ್ಡ ಕೊಡುಗೆ ಕೊಟ್ಟಿದೆ ಅಂತ ಹೊಗಳಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಆಗಿ ಚಿಹ್ನೆ ಬಿಟ್ಟು ನನಗೆ ಮತ ಕೊಡಿ ಅಂತಾರೆ. ಎಲ್ಲಿದೆ ನಿಮಗೆ ನಿಯತ್ತು?ಜನ ಹೇಗೆ ನಂಬಿ ಓಟ್ ಕೊಡ್ತಾರೆ? ಜೆಡಿಎಸ್ ಕಾಂಗ್ರೆಸ್ ಗೆ ಮೋಸ ಮಾಡ್ತಿದ್ದಾರೆ ಇವಾಗ ಕಣ್ಣಿರು ಹಾಕ್ತಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ.
‘ಹೊಳೆನರಸೀಪುರಕ್ಕೆ ಬಂದು ಟೀ ಕುಡಿದು ದೋಸೆ ತಿನ್ನೋದು ಬಿಡಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ’