ಮಂಡ್ಯ: ದಳಪತಿಗಳ ವಿರುದ್ಧ ಮಂಡ್ಯದಲ್ಲಿ ಬಂಡಾಯ ನಾಯಕರ ಸಮರ ಮುಂದುವರೆದಿದ್ದು, ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆ ದಿನವಾದ ಹಿನ್ನೆಲೆ, ಕಣದಲ್ಲಿ ಉಳಿಯುವ ಬಗ್ಗೆ ಬೆಂಬಲಿಗರ ಜೊತೆ ಮಹತ್ವದ ಸಭೆ ಮಾಡಲಾಗಿತ್ತು. ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಸ್ವಾಭಿಮಾನಿ ಪಡೆ ಹೆಸರಲ್ಲಿ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆಯಲು ಎಂ.ಶ್ರೀನಿವಾಸ್ ಬಣ ತಯಾರಿ ನಡೆಸಿದೆ.
ಜೆಡಿಎಸ್ನಿಂದ ಟಿಕೇಟಿ ಕೈ ತಪ್ಪಿದ ಹಿನ್ನೆಲೆ, ಮೂವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಎಸ್.ವಿಜಯಾನಂದ, ಹೆಚ್.ಎನ್.ಯೋಗೇಶ್ ಹಾಗೂ ಮಹಾಲಿಂಗೇಗೌಡರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಕಾರ್ಯಕರ್ತರ ಸಲಹೆ ಪಡೆಯಲು ಅಂತಿಮವಾಗಿ ಒಬ್ಬರು ಕಣದಲ್ಲಿ ಉಳಿಯುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಚರ್ಚೆ ನಡೆಸಿ ಕೊನೆಗೆ ಕೆ.ಎಸ್.ವಿಜಯಾನಂದ ಕಣಕ್ಕೆ ಇಳಿಸಲಾಗಿದೆ ಎಂದು ಎಂ.ಶ್ರೀನಿವಾಸ್ ಘೋಷಣೆ ಮಾಡಿದ್ದಾರೆ. ಹಾಗಾಗಿ ಶ್ರೀನಿವಾಸ್ ಅಳಿಯ ಹೆಚ್.ಎನ್.ಯೋಗೇಶ್, ಮಹಾಲಿಂಗೇಗೌಡ ನಾಮಪತ್ರ ವಾಪಸ್ಸು ಪಡೆಯಲು ತೀರ್ಮಾನ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ವಿರುದ್ಧ ಬಂಡಾಯ ಸ್ಪರ್ಧಿಯಾಗಿ, ವಿಜಯಾನಂದ್ ಸ್ಪರ್ಧಿಸುತ್ತಿದ್ದು, ಸ್ವಾಭಿಮಾನಿ ಪಡೆ ಹೆಸರಲ್ಲಿ ಚುನಾವಣೆ ಎದಿರಿಸಲು ನಿರ್ಧರಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲೂ ತಕ್ಕ ಪಾಠ: ರಾಜೀವ್ ಚಂದ್ರಶೇಖರ್ ವಿಶ್ವಾಸ..
ಸುಧಾಕರ್ ಬೆಂಬಲಿಸಿ ಬಿಜೆಪಿ ಸೇರ್ಪಡೆಯಾದ ಜನ, ಚಂದನ್ ಶೆಟ್ಟಿ ಜೊತೆ ಸಿಎಂ ಕ್ಯಾಂಪೇನ್..