ಹಾಸನ : ಎಚ್.ಡಿ.ರೇವಣ್ಣ ಹಾಗೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ನಡುವಿನ ಸಂಭಾಷಣೆ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ, ಹಾಸನದಲ್ಲಿ ಮಾತನಾಡಿದ ರೇವಣ್ಣ, ಅರಸೀಕೆರೆ ಶಾಸಕ, ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೆನ್ನೆ ಅರಸೀಕೆರೆಯಲ್ಲಿ ಪಕ್ಷದ ಮುಖಂಡರ ಸಭೆ ಬಳಿಕ ಮಾತನಾಡಿದ ರೇವಣ್ಣ, ಆ ಹುಡುಗ ಆಡಿಯೋ ರೆಕಾರ್ಡ್ ಮಾಡಿಕೊಂಡಿರೋದು ನನಗೆ ಗೊತ್ತಿಲ್ಲ. ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರೋದು ಸತ್ಯ ಅಲ್ಲಾ ಅಂಥ ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಿಲಿ. ರಾಗಿ ಕಳ್ಳ ಅಂದ ಕೂಡಲೇ ಸತ್ಯ ಮಾಡಲಿಲ್ವಾ..? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಕಳೆದ ಒಂದು ವರ್ಷದಿಂದ ಇದು ನಡಿತಿದೆ. ಕುರುಬರು, ಲಿಂಗಾಯಿತರು, ಒಕ್ಕಲಿಗರು ನನಗೆ ಓಟು ಹಾಕಲ್ಲ ಆ ಆಡಿಯೋದಲ್ಲೇ ಹೇಳಿದ್ದಾರೆ. ನಾನೇನಾದರು ಒಂದು ಪದ ಎಡಿಟ್ ಮಾಡಿರೋದನ್ನ ತೋರ್ಸಿದ್ರೆ ಆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ. ಇಲ್ಲವಾದರೆ ಆ ದೇವರು ಅವರನ್ನ ನೋಡಿಕೊಳ್ಳಲಿ. ಬಂದು ದೇವರ ಮೇಲೆ ಸತ್ಯ ಮಾಡಲಿ ಬನ್ನಿ ಹೋಗೋಣ ಎಂದು ರೇವಣ್ಣ ಚಾಲೆಂಜ್ ಹಾಕಿದ್ದಾರೆ.
ಅಲ್ಲದೇ, ಇನ್ ಫ್ರಂಟ್ ದೇವೇಗೌಡರು ಅರಸೀಕೆರೆ ಜನ ದುಡ್ಡು ಇಲ್ಲದೆ ಓಟು ಹಾಕಲ್ಲ ಅಂತಾರೆ. ಹಾಗಾದ್ರೆ ಹದಿನೈದು ವರ್ಷ ಅರಸೀಕೆರೆ ಜನ ದುಡ್ಡು ತಗೊಂಡು ಓಟು ಹಾಕಿದ್ರಾ..? 250 ಕೋಟಿ ಕೊಟ್ಟಿದ್ದೇವೆ .ಹದಿನಾಲ್ಕು ತಿಂಗಳಿನಲ್ಲಿ, ಯಾರೂ ಕಂಟ್ರಾಕ್ಟರ್..? ನಾನು ಒಂದು ಬಿಡಗಾಸು ತಗಂಡಿದಿನಿ ಅಂದ್ರೆ ರಾಜಕೀಯ ಬಿಟ್ಟು ಹೋಗ್ತಿನಿ. ಯಾರು ಕಂಟ್ರಾಕ್ಟ್ ಮಾಡವ್ರೆ ಹೇಳಲಿ. ದೇವರು ಅನ್ನೋನು ಇದ್ರೆ ಇದೆಲ್ಲಾ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.
ಇನ್ನು ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲೇಬೇಕು ಅಂತ ಹೊರಟರು ಏನಾಯ್ತು..? ಈತ ಗಂಡಸಿಲಿ ಹದಿನೇಳು ಓಟಲ್ಲಿ ಸೋತಿದ್ದ. ರಾಜಕೀಯ ವಿದ್ಯಾಮಾನ ಏನಾಯ್ತು ಸಮಯ ಬಂದಾಗ ಹೇಳ್ತಿನಿ. ಇನ್ನೊಂದು ಸ್ವಲ್ಪ ಬಿಚ್ಚೋದು ಐತೆ, ಎಳೆಎಳೆಯಾಗಿ ಬಿಚ್ತಿನಿ. ಹದಿನೈದು ವರ್ಷದಲ್ಲಿ ನಮ್ಮದು ಏನೈನ್ ಐತೆ ಬಿಚ್ಚಕೆ ಹೇಳಿ. ಬರಲಿ ಧರ್ಮಸ್ಥಳದ ಮುಂದೆ. ಕೌಶಿಕ್ ಮುಖರ್ಜಿ ಹತ್ತಿರ ಕರೆದುಕೊಂಡು ಹೋಗಿ 360 ಹಳ್ಳಿಗೆ ಕುಡಿಯುವ ನೀರು ಮಂಜೂರು ಮಾಡಿಸಿಕೊಟ್ಟೆ, ಆಗ ಬಿಜೆಪಿ ಗೌರ್ನಮೆಂಟ್ ಇತ್ತು. ಇದೇ ಈಶ್ವರಪ್ಪ ಬಂದು ಅಡಿಗಲ್ಲಿ ಹಾಕಿದ್ರು. ಸುಳ್ಳು ಜಾಸ್ತಿ ದಿನ ನಡೆಯಲ್ಲಾ ರೀ, ಜನ ಮೆಚ್ಚಿಸಕ್ಕೋಸ್ಕರ ನಾಟಕ. ಸುಳ್ಳು ಜಾಸ್ತಿ ದಿನ ನಡೆಯಲ್ಲ ಯಾವತ್ತಾದರೂ ಒಂದು ದಿನ ಅಂತ್ಯವಾಗುತ್ತೆ.
ಈಗ ನಾನು ಸ್ಮಾಲ್ ಬಿಚ್ಚಿದಿನಿ. ನನ್ನ ಕೈಲಿ ಆದದ್ದನ್ನು ಮಾಡಿದಿನಿ, ಈತನನ್ನು ರಾಜಕೀಯ ಮೇಲೆ ತರಲು ಏನೇನ್ ಶಕ್ತಿ ತುಂಬಬೇಕು ತುಂಬಿದಿನಿ. ಈಗ ಅವರು ಸ್ವಲ್ಪ ದೃಢವಾಗಿದ್ದಾರೆ, ಹಣಕಾಸಿದೆ. ನೀನೆ ಸಾಕಿದ ಗಿಣಿ ಹದ್ದಾಕಿ ಕುಕ್ಕಿತಲ್ಲೋ ಆ ಪರಿಸ್ಥಿತಿ ನಮಗೆ ಬಂದಿದೆ ಈಗ. ಇನ್ನೂ 45 ದಿನ ಪರದೆ ಇದೆ, ಅದರ ಮೇಲೆ ಎಳೆಎಳೆಯಾಗಿ ತರ್ತಿನಿ. ಅರಸೀಕೆರೆ ಮಹಾಜನತೆ ಸ್ವಾಭಿಮಾನದವರು. ನೀವು ದುಡ್ಡು ತಗೊಂಡು ಹದಿನೈದು ವರ್ಷ ಓಟು ಹಾಕಿದ್ರಾ ಅಂತ ಕೇಳ್ತಿನಿ ಎಂದು ರೇವಣ್ಣ ಹೇಳಿದ್ದಾರೆ..
ಅರಸೀಕೆರೆ ನಗರಸಭೆ ಏಳು ಜನ ಅನರ್ಹ ಪ್ರಕರಣದ ಬಗ್ಗೆ ಮಾತನಾಡಿದ ರೇವಣ್ಣ, ಅವರು ಪಾಪದವರು, ಅದರಲ್ಲಿ ನಂದೇ ತಪ್ಪಿದೆ. ನನ್ನದೇ ತಪ್ಪು, ನಾನು ಅವರ ಕ್ಷಮೆ ಕೇಳುತ್ತೇನೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ನೀಡಲಿಲ್ಲ. ಕೋರ್ಟ್ನಲ್ಲಿ ಕೇಸ್ ಇದೆ ಅಂತ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ಎರಡು ವರ್ಷದಿಂದ ಶಿವಲಿಂಗೇಗೌಡರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಲೇ ಇದ್ದರು. ಇನ್ನೊಂದು ದಿನ ದೇವೇಗೌಡರ ಮುಂದೆ ಕುಳಿತಿದ್ದು. ಆಗ ಯಾರೋ ಫೋನ್ ಮಾಡಿ ಎನ್ ಸಾರ್ ರಾಮಸ್ವಾಮಿ ಇಲ್ಲೇ ಉಳ್ಕತರೆ ಅಂದ್ರು. ಹೇ ಕಾಂಗ್ರೆಸ್ನವರು ಅವನ್ ಒದ್ದು ಓಡ್ಸಿದ್ದಾರೆ, ಅದಕ್ಕೆ ನಿಮ್ಮೆ ಮನೆ ಬಾಗಿಲಿಗೆ ಬಂದಿದ್ದಾರೆ ಎಂದು ಶಿವಲಿಂಗೇಗೌಡ ಹೇಳ್ದಾ. ಶಿವಲಿಂಗೇಗೌಡರಿಗೆ ಭಗವಂತ ಒಳ್ಳೆಯದು ಮಾಡಲಿ. ಅವರ ಹತ್ರ ದುಡ್ಡು ಇದೆ ಎಂದು ರೇವಣ್ಣ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಮನೆಗೆ ಹೋಗಲು 10 ಸಾವಿರ ಕಾಂಗ್ರೆಸ್ ಕಾರ್ಯಕರ್ತರ ನಿರ್ಧಾರ.. ಯಾಕೆ ಗೊತ್ತಾ..?
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಟಿಕೇಟ್ ಆಕಾಂಕ್ಷಿ ಶ್ರೀನಿವಾಸ್ ಹೇಳಿಕೆ..
‘ಅಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ ಎಂಬಂತೆ ಸಿದ್ದರಾಮಯ್ಯ ಪರಿಸ್ಥಿತಿ ಆಗಿದೆ’