Friday, April 18, 2025

Latest Posts

ಬಾಲಿವುಡ್​​ ಸಿನಿಮಾಗಳ ಬಗ್ಗೆ ರಿಷಬ್ ಬೇಸರ

- Advertisement -

ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್​ ಮಂದಿ ಮೇಲೆ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ನಮ್ಮ ದೇಶವನ್ನ ತುಂಬಾ ಕೆಟ್ಟದಾಗಿ ತೋರಿಸುತ್ತಾರೆಂಬುದು. ದೇಶವನ್ನ ಪಾಸಿಟಿವ್​ ಆಗಿ ತೋರಿಸಬಹುದಲ್ಲ ಎಂದಿದ್ದಾರೆ. ಇಷ್ಟಕ್ಕೂ ರಿಷಬ್ ಹೀಗೆ ಹೇಳಿದ್ದೇಕೆ? ಮತ್ತು ಯಾರ ಬಗ್ಗೆ ಹೀಗೆ ಮಾತಾಡಿದ್ದಾರೆ ಎಂಬ ಪ್ರಶ್ನೆ ಎಲ್ಲೆಡೆ ಜೋರಾಗಿ ಗಿರಕಿ ಹೊಡೆಯುತ್ತಿದೆ.

ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾದಲ್ಲಿ ರಿಷಬ್ ನಟನೆಗಾಗಿ ಅತ್ಯುತ್ತಮ ಪ್ರಶಸ್ತಿ ಅವಾರ್ಡ್​, ಜೊತೆಗೆ ಸಿನಿಮಾಗೆ ಅತ್ಯುತ್ತಮ ಸಿನಿಮಾ ಅವಾರ್ಡ್​ ಕೂಡ ದೊರೆತ್ತಿದ್ದು, ಈ ಬಗ್ಗೆ ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಸದ್ಯ ನಟ ರಿಷಬ್​ ಶೆಟ್ಟಿ ನಿರ್ಮಾಣದ ಪ್ರಮೋದ್​ ಶೆಟ್ಟಿ ನಟನೆಯ ‘ಲಾಫಿಂಗ್​ ಬುದ್ಧ’ ಸಿನಿಮಾದ ಪ್ರಮೋಶನ್​ನಲ್ಲಿ ರಿಷಬ್​ ಬ್ಯುಸಿಯಾಗಿದ್ದು, ಈ ಸಿನಿಮಾದ ಪ್ರಚಾರದ ವೇಳೆ ರಿಷಬ್​ ಒಂದು ಬಾಲಿವುಡ್​ ಸಿನಿಮಾಗಳ ಬಗ್ಗೆ ಮಾತ್ನಾಡಿದ್ದಾರೆ. ಬಾಲಿವುಡ್​ನವರು ಸಿನಿಮಾ ಮಾಡುವುದಕ್ಕೂ, ದಕ್ಷಿಣ ಭಾರತದವರು ಸಿನಿಮಾ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ‘ಇಂಡಿಯನ್​ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ. ಇದೇ ಸಿನಿಮಾ ಮಾಡೋ ಆರ್ಟ್ಸ್​ ಅಂತ ಅವರು ಅಂದುಕೊಂಡು ಹೊರ ದೇಶಗಳಿಗೆ ಹೋಗಿ ಅವಾರ್ಡ್​ಗಳನ್ನು ಗೆದ್ದು ಬಂದಿದ್ದನ್ನು ಸಹ ನಾನು ನೋಡಿದ್ದೇನೆ. ನಮ್ಮ ದೇಶ, ನಮ್ಮ ಹೆಮ್ಮೆ, ನನ್ನ ರಾಜ್ಯ, ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ. ನಮ್ಮಲ್ಲಿರೋದನ್ನು ಪಾಸಿಟಿವ್ ನೋಟ್​ನಲ್ಲಿ ತೋರಿಸಬಹುದಲ್ಲ’ಯಾಕೆ ನೆಗೆಟಿವ್​ ಆಗಿ ತೋರಿಸುತ್ತಾರೆ. ಇದನ್ನೇ ನಾನು ಮಾಡಲು ಪ್ರಯತ್ನಿಸುತ್ತಿದ್ದೇನೆ ಅಂತ ಹೇಳಿದ್ದಾರೆ.

ರಿಷಬ್ ಶೆಟ್ಟಿ ಅವರ ಈ ಹೇಳಿಕೆಯ ಕ್ಲಿಪ್​ವೊಂದು ಎಲ್ಲೆಡೆ ವೈರಲ್ ಆಗಿದ್ದು, ಅನೇಕರು ರಿಷಬ್ ಹೇಳಿಕೆಯನ್ನು ನೋಡಿ ಸರಿಯಾಗಿಯೇ ಮಾತನಾಡಿದ್ದಾರೆ ಎಂದಿದ್ದಾರೆ. ರಿಷಬ್​ ಶೆಟ್ಟಿ ಹೊಸಬರಿಗೆ ಅವಾಕಾಶಗಳನ್ನ ನೀಡುವುದರ ಜೊತೆಗೆ ಹೊಸ ಹೀರೋಗಳ ಸಿನಿಮಾಗಳಿಗೆ ನಿರ್ಮಾಣವನ್ನ ಮಾಡುತ್ತಿರುತ್ತಾರೆ. ಇದರಿಂದಾಗಿಯೇ ರಿಷಬ್​ ಎಲ್ಲರಿಗೂ ಹತ್ತಿರವಾಗುತ್ತಾರೆ.

-ಸ್ವಾತಿ.ಎಸ್.

- Advertisement -

Latest Posts

Don't Miss