Saturday, June 21, 2025

Latest Posts

Sandalwood News: ತಮ್ಮ ಮೇಲಿನ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ರಚಿತಾ ರಾಮ್

- Advertisement -

Sandalwood News: ನಟಿ ರಚಿತಾರಾಮ್ ಸಂಜು ವೆಡ್ಸ್ ಗೀತಾ ಪಾರ್ಟ್ 2ನ ಪ್ರಮೋಷನ್‌ಗೆ ಆಗಮಿಸುತ್ತಿಲ್ಲ. ಆಕೆ ಯಾವುದೇ ಕಾರ್ಯಕ್ರಮಕ್ಕೂ ಬರುತ್ತಿಲ್ಲವೆಂದು, ಚಿತ್ರದ ನಿರ್ದೇಶಕ ನಾಗಶೇಖರ್ ಆರೋಪ ಮಾಡಿದ್ದರು. ಇದೀಗ ಈ ಆರೋಪಕ್ಕೆ ರಚಿತಾ ರಾಮ್ ಸ್ಪಷ್ಟನೆ ನೀಡಿದ್ದಾರೆ.

ಕೆಲ ದಿನಗಳಿಂದ ಚಿತ್ರತಂಡ ನನ್ನ ಮೇಲೆ ಮಾಡುತ್ತಿರುವ ಆರೋಪ, ಬಳಸುತ್ತಿರುವ ಪದಗಳಿಂದ ನನಗೆ ಬೇಸರವಾಗಿದೆ. ಈಗ ಕೆಲ ದಿನಗಳ ಹಿಂದೆ ಅಷ್ಟೇ ನಾನು ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿದಾಗ, ನ್ನನ ಬಗ್ಗೆ ತುಂಬಾ ಉತ್ತಮವಾದ ಮಾತನಾಡಿದ್ದರು. ತುಂಬಾ ಸಪೋರ್ಟಿವ್, ನಿಮ್ಮಿಂದ ನಮಗೆ ಸ್ಪೂರ್ತಿ ಸಿಗುತ್ತಿದೆ ಥ್ಯಾಂಕ್ಯೂ ಎಂದು ಬಾಯಿ ತುಂಬ ನನ್ನ ಪ್ರಶಂಸೆ ಮಾಡಿದ್ದರು. ಆದರೆ ಅದೇ ಟೀಂ ಈಗ ನನ್ನನ್ನು ಬೈಯ್ಯುತ್ತಿದೆ ಎಂದು ರಚಿತಾ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಇನ್ನ“ಂದು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾಗ, ಸಂಜು ವೆಡ್ಸ್ ಗೀತಾ ಟೀಂ ಪ್ರಮೋಷನ್‌ಗಾಗಿ ನನ್ನನ್ನು ಕರೆದಿತ್ತು. ಆದರೆ ನಾನು ಸ್ವಲ್ಪ ಬ್ಯುಸಿ ಎಂದು ಅವರಿಗೆ ಇನ್‌ಫರ್ಮ್ ಮಾಡಿದ್ದೆ. ಅಲ್ಲದೇ, ಮ್ಯಾನೇಜರ್‌ಗೆ ಕರೆ ಮಾಡಿದಾಗಲೂ ಹೇಳಿದ್ದರು. ಅಲ್ಲದೇ, ನಾನು ಆ ಸಿನಿಮಾ ಪ್ರಮೋಷನ್‌ಗೆ ಹೋಗಲು ನಾಗಶೇಖರ್ ಅವರು ನನಗೆ ಬಿಡುತ್ತಿರಲಿಲ್ಲ. ಯಾಕೆ ಅವರು ಪ್ರೋಡ್ಯುಸರ್ ಅಲ್ವಾ..? ಅವರದ್ದು ಸಿನಿಮಾ ಅಲ್ವಾ..? ಅವರದ್ದು ದುಡ್ಡಲ್ವಾ..? ಎಂದು ರಚಿತಾ ಪ್ರಶ್ನಿಸಿದ್ದಾರೆ.

ನನಗೆ ಎರಡೂ ಸಿನಿಮಾ ಜವಾಬ್ದಾರಿ ಇದೆ. ಆದರೆ ಸಂಜು ವೆಡ್ಸ್ ಗೀತಾ ತಂಡದವರು ಪದೇ ಪದೇ ಪ್ರಿರಿಲೀಸ್ ಈವೆಂಟ್ ಡೇಟ್ ಚೇಂಜ್ ಮಾಡಿದ್ರೆ ನಾವು ಜಾಬ್ದಾರಿನಾ ಅಂತಾ ರಚಿತಾ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss