Santosh Lad : ಡ್ರಗ್ಸ್ ಪ್ರಕರಣ ಗಂಭೀರವಾಗಿ ಪರಿಗಣಿಸದಿದ್ದರೆ ನಾನೇ ಪೊಲೀಸ್ ಠಾಣೆಗೆ ಬರುತ್ತೇನೆ : ಸಚಿವ ಸಂತೋಷ್ ಲಾಡ್

Dharawad News :  ಡ್ರಗ್ಸ್ ಪೂರೈಕೆ ಆಗುತ್ತಿರುವುದು ಗೊತ್ತಿದ್ದರೂ ಪೊಲೀಸರು ಅದರ ಮೇಲೆ ಕ್ರಮ ಕೈಗೊಳ್ಳದೆ ಹೋದರೆ ನಾನೇ ಪೊಲೀಸ್ ಠಾಣೆಗೆ ಬಂದು ಮಾಹಿತಿ ಪಡೆದು ಸರ್ಕಾರ ಹಂತದಲ್ಲಿ ಕ್ರಮ ಕೈಗೊಳ್ಳುವಂತೆ ಮಾಡಬೇಕಾಗುತ್ತದೆ ಎಂದು ಧಾರವಾಡದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪೊಲೀಸರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪೊಲೀಸರಿಗೆ ಅವರು ಈ ಎಚ್ಚರಿಕೆ ನೀಡಿದ್ದಾರೆ. ಹುಬ್ಬಳ್ಳಿ ಧಾರವಾಡದ ಪೊಲೀಸರು ಮಾದರಿಯಾಗಬೇಕು ನಮ್ಮ ಸಹಕಾರ ಪೊಲೀಸರಿಗೆ ಯಾವತ್ತಿದ್ದರೂ ಇದೆ ಇಪ್ಪತ್ತು ಮೂವತ್ತು ವರ್ಷದಿಂದ ಒಂದೇ ಠಾಣೆಯಲ್ಲಿರುವ ಪೊಲೀಸರಿಗೆ ಡ್ರಗ್ಸ್ ಜಾಲದ ಬಗ್ಗೆ ಗೊತ್ತಿದೆ.

ಅದು ಯಾರು ಡ್ರಗ್ಸ್ ಕೊಡುತ್ತಾರೆ? ಎಲ್ಲಿಂದ ಎಲ್ಲಿಗೆ ಪೂರೈಕೆ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಇದಕ್ಕೆ ಎಲ್ಲರೂ ಸೇರಿ ಕಡಿವಾಣ ಹಾಕೋಣ. ಮುಂದಿನ ನನ್ನ ಸಭೆಗೆ ಆ ಕುರಿತು ಮಾಹಿತಿ ಬರುತ್ತದೆ. ಅದನ್ನು ನಾನೇ ತರಿಸಿಕೊಳ್ಳುತ್ತೇನೆ.ಇದರ ಬಗ್ಗೆ ಹೆಚ್ಚಿನ ಒತ್ತು ನೀಡಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಸಚಿವ ಲಾಡ್ ಖಡಕ್ ಸೂಚನೆ ನೀಡಿದರು.

Transfer : 211 ಇನ್ಸ್ ಪೆಕ್ಟರ್‌ಗಳ ವರ್ಗಾವಣೆ : ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಇನ್ಸಪೆಕ್ಟರ್‌ ಕಾಡದೇವರ ಮಠ ಧಾರವಾಡಕ್ಕೆ ವರ್ಗಾವಣೆ

Santosh Lad : ದಶಕಗಳ ಕನಸು ನನಸು ಮಾಡಲು ಹೊರಟ ಸಚಿವ ಸಂತೋಷ ಲಾಡ್…!

Parking : ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್ : ಫುಟ್ ಪಾತ್ ಮೇಲೆ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್..!

About The Author