Thursday, July 31, 2025

Latest Posts

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸವದಿ..

- Advertisement -

Belagavi Political News: ಚಿಕ್ಕೋಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಸವದಿ ಹೆಸರು ಪ್ರಸ್ತಾಪ ಹಿನ್ನೆಲೆ, ಲಕ್ಷ್ಮಣ್ ಸವದಿ ಕರ್ನಾಟಕ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅದೆಲ್ಲವೂ ಉಹಾಪೋಹ ಅಷ್ಟೇ. ಈ ಕುರಿತಂತೆ ಪಕ್ಷದ ವರಿಷ್ಠರು, ಸಿಎಂ, ಡಿಸಿಎಂ ನನ್ನ ಜತೆ ಚರ್ಚೆ ಮಾಡಿಲ್ಲ. ಇದೆಲ್ಲವೂ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗ್ತಿದೆ. ನಾನು ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿದ್ದು ಕೇವಲ ಕ್ಷೇತ್ರದ ಅಭಿವೃದ್ಧಿಗೊಸ್ಕರ ಅಷ್ಟೇ. ಅಲ್ಲಿ ಯಾವುದೇ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿಲ್ಲ. ಪದಾಧಿಕಾರಿಗಳ ಪುರ್ನರಚನೆ ಮಾಡೋದು ಕೇಂದ್ರದ ಹಾಗೂ ರಾಜ್ಯಾಧ್ಯಕ್ಷರು ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಡಿಕೆಶಿ ಹಾಗೂ ಸತೀಶ ಜಾರಕಿಹೊಳಿ ಮುಸಕಿನ‌ ಗುದ್ದಾಟ ವಿಚಾರದ ಬಗ್ಗೆ ಮಾತನಾಡಿದ ಸವದಿ, ಡಿಕೆ ಶಿವಕುಮಾರ್ ಹುಕ್ಕೇರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ರು. ಬೆಳಗಾವಿಯ ಯಾವುದೇ ಶಾಸಕರಿಗಾಗಲೀ, ಸಚಿವರಿಗಾಗಲೀ ಡಿಕೆಶಿ ಬರ್ತಿದ್ದಾರೆ ಅನ್ನೊದು ಗೊತ್ತಿರಲಿಲ್ಲ. ಅವರ ಪ್ರವಾಸದ ವಿವರದ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಅವತ್ತು ನಾನು ಸಹ ಬೇರೆ ಯಾವುದೋ ಕೆಲಸದ ಮೇಲೆ ಬೆಂಗಳೂರಿನಲ್ಲಿದ್ದೆ. ನಾನು ಸಹ ಹೋಗಿರಲಿಲ್ಲ ಹೀಗಾಗಿ ಅಪಾರ್ಥ ತಿಳಿದುಕೊಳ್ಳುವುದು ಬೇಡ. ಹುಕ್ಕೇರಿಗೆ ನವರಾತ್ರಿ ಸಂಬಂಧಪಟ್ಟಂತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದಿದ್ರು. ಅದು ಯಾವುದೇ ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ ಎಂದು ಸವದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಮುಗಿಯೋದ್ರೊಳಗೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ಈಶ್ವರಪ್ಪನವರು ಹಂಗೇ… ಮೊದಲಿನಿಂದಲೂ ಅವರು ಅದನ್ನೆ ಹೇಳುತ್ತಾ ಬಂದವರು. ಯಾವಾಗ್ಲೂ ಇಂತಹ ಹೇಳಿಕೆ ಕೊಟ್ಟು ಜನರ ಗಮನ ಬೇರೆಡೆ ಸೆಳೆಯುತ್ತಾರೆ. ಈ ರಾಜ್ಯದ ಜನತೆ ಕಾಂಗ್ರೆಸ್‌ಗೆ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದೆ. ಯಾರೇ ಬಂದ್ರೂ, ಏನೇ ಪ್ರಸಂಗವಾದ್ರೂ ಮುಂದಿನ ಐದು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರಲಿದೆ. ಮುಂದಿನ ಸಲವೂ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೇರಲಿದೆ. ಬಿಜೆಪಿ ಸತತ ಹತ್ತು ವರ್ಷಗಳ ಕಾಲ ವಿರೋಧಪಕ್ಷದಲ್ಲಿರಬೇಕು ಎನ್ನೋದು ನಮ್ಮ ಅಪೇಕ್ಷೆ ಎಂದು ಸವದಿ ಹೇಳಿದ್ದಾರೆ.

ಕೊಲೆ ಮಾಡಿ ಕಾಣೆಯಾದಳೆಂದು ಕಥೆ ಕಟ್ಟಿದವರು 3 ವರ್ಷದ ಬಳಿಕ ಅಂದರ್‌..

‘ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ..?’

1150 ಪ್ಯಾಕೇಟ್ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

- Advertisement -

Latest Posts

Don't Miss