ಕನ್ನಡ ಚಿತ್ರರಂಗದಲ್ಲಿ ಲೇಡಿ ಖಳನಟಿ ಅಂತಲೇ ಖ್ಯಾತಿ ಗಳಿಸಿ ತಮ್ಮ ನಟನ ಮೂಲಕ ಅಭಿಮಾನಿಗಳ ಕಣ್ಣರಳಿಸುತ್ತಿದ್ದ ಏಕೈಕ ಖಳನಟಿ ಅಂದ್ರೆ ಅವರು ಮಾರಿಮುತ್ತು. ಬೆಳ್ಳಿತೆರೆಯಲ್ಲಿ ಇವರನ್ನ ಮಾರಿಮುತ್ತು ಅನ್ನೋ ಹೆಸರಿನಿಂದಲೇ ಗುರುತಿಸ್ತಾರೆ, ಆದರೆ ಇವರ ನಿಜವಾದ ಹೆಸರು ಸರೋಜಮ್ಮ. ಉಪೇಂದ್ರ ಸಿನಿಮಾದಲ್ಲಿನ ಇವರ ಪಾತ್ರದ ಹೆಸರು ಮಾರಿಮುತ್ತು ಆಗಿದ್ದು, ಅಲ್ಲಿಂದ ಇವರನ್ನ ಸರೋಜಮ್ಮನ ಹೊರತಾಗಿ ಮಾರಿಮುತ್ತು ಅಂತಲೇ ಕರೆಯೋಕೆ ಎಲ್ಲರೂ ಶುರುಮಾಡಿದ್ರು. ಇದೀಗ ಅವರ ಹಾದಿಯಲ್ಲೇ ಸಾಗ್ತಿದ್ದಾರೆ ಮೊಮ್ಮೊಗಳು ಜಯಶ್ರೀ ಆರಾಧ್ಯ. ಚಿಕ್ಕಂದಿನಿಂದಲೇ ಅಜ್ಜಿಯ ಹಾಗೇ ನಟನೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರೋ ಜಯಶ್ರೀ, ಪುಟ್ಟರಾಜು “ಲವರ್ ಆಫ್ ಶಶಿಕಲಾ” ಸಿನಿಮಾದಿಂದ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ರು.
ಇದೀಗ ಎರಡು ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಜಯಶ್ರೀ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳುವ ಆಸೆ ಹೊಂದಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಸೆಕೆಂಡ್ ಪಿಯುಸಿ ಫೇಲ್ ಆಗಿದ್ರೂ ನಟಿ ಜಯಶ್ರೀ ದಿನಕ್ಕೀಗ ಲಕ್ಷಾಂತರ ರೂ ಆದಾಯ ಗಳಿಸುತ್ತಿದ್ದಾರೆ. ಅಂದ್ಹಾಗೇ ಈ ಆದಾಯ ಬರ್ತಿರೋದು ನಟನೆಯಿಂದಲ್ಲ, ಬದಲಿಗೆ ನಟನೆ ಜೊತೆಗೆ ಹೊಸ ಉದ್ಯಮ ನಟಿ ಜಯಶ್ರೀ ಶುರು ಮಾಡಿದ್ದಾರೆ. ಗ್ಲಾಮ್ ರೂಮ್ ಹೆಸರಿನಲ್ಲಿ 2 ಸಲೂನ್ ಬ್ರಾಂಚ್ಗಳನ್ನ ನಡೆಸುತ್ತಿರೋ ನಟಿ ಜಯಶ್ರೀ ಜೊತೆ ಈ ಕೆಲಸಕ್ಕೆ ತನ್ನ ಪ್ರಿಯಕರ ಸ್ಟೀವನ್ ಅವರೂ ಸಹ ಸಾಥ್ ಕೊಡ್ತಿದ್ದಾರೆ.
ನಟಿಯಾಗಬೇಕಂತ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ದಿನಗಳಲ್ಲಿ ಜಯಶ್ರೀ ಇದ್ದ ಬಗೆಗೆ ಹಲವರು ಕಮೆಂಟ್ಸ್ ಮಾಡ್ತಿದ್ದರಂತೆ, ಆ ಮಾತುಗಳನ್ನೇ ಚಾಲೆಂಜಿಂಗ್ ಆಗಿ ತಗೊಂಡು ಹಲವು ಬ್ಯೂಟಿ ಟ್ರೀಟ್ಮೆಂಟ್ಸ್ ತಾವೂ ಪಡೆದು ಈಗ ಬ್ಯೂಟಿಕ್ವೀನ್ ಆಗಿದ್ದಾರೆ. ಅಲ್ಲದೇ ಎರಡು ದೊಡ್ಡ ಮಟ್ಟದ ಸಲೂನ್ ಶಾಪ್ಗಳನ್ನ ತೆರೆದಿದ್ದಾರೆ. ಅಜ್ಜಿ ಮಾರಿಮುತ್ತು ಅವರ ಹಾದಿಯಲ್ಲೇ ಅವರಂತೆಯೇ ಅಭಿಮಾನಿಗಳ ಮನಸ್ಸನ್ನ ತಮ್ಮ ನಟನೆ ಮೂಲಕ ಗೆಲ್ಲೋ ಆಸೆಯನ್ನ ಸಹ ನಟಿ ಜಯಶ್ರೀ ಹೊಂದಿದ್ದಾರೆ. ಅಜ್ಜಿ ಮಾರಿಮುತ್ತು ಅವರ ಸಿನಿಹಾದಿ ಹಾಗೂ ತಮ್ಮ ಜೀವನದ ಏರಿಳಿತಗಳ ಘಟನೆಗಳನ್ನ ಕರ್ನಾಟಕ ಟಿವಿ ಜೊತೆ ನಟಿ ಜಯಶ್ರೀ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ Exclusive ಸಂದರ್ಶನ ನಿಮ್ಮ ಮುಂದೆ ಬರಲಿದೆ.
ನಳಿನಾಕ್ಷಿ, ಕರ್ನಾಟಕ ಟಿವಿ