ಜಿಲ್ಲಾ ಸುದ್ದಿಗಳು : ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸಿರುವ ಬೆನ್ನಲ್ಲೆ ಮಹಿಳೆಯರು ಪುಣ್ಯ ಕ್ಷೆತ್ರಗಳಿಗೆ ಬೇಟಿ ನೀಡುವುದು ಶುರುವಾಗಿದೆ . ಬಸ್ಸಿನಲ್ಲಿ ನಾಲ್ಕೈದು ದಿನ ಪ್ರಯಾಣ ಬೆಳೆಸುವ ಸಲುವಾಗಿ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಸ್ನಾನ ಮಾಡಿ ದೇವರ ದರ್ಶನ ಮಾಡಿ ಬೇರೆ ಕಡೆ ಹೋಗುವಾಗ ಒಗೆದಿರುವ ಬಟ್ಟೆಗಳನ್ನು ಬಸ್ಸಿನಲ್ಲಿ ಒಣಗಿಸುವ ಸಲುವಾಗಿ ನೇತು ಹಾಕಿದ್ದಾರೆ
ಬಟ್ಟೆಗಳನ್ನು ಬಸ್ಸಿನಲ್ಲಿ ಒಣಗಳು ಹಾಕಿರುವ ಕಾರಣ ಪುರುಷರು ಬಸ್ಸಿನಲ್ಲಿ ಪ್ರಯಾಣ ಮಾಡಲು ಹಿಂಜರಿಯುತಿದ್ದಾರೆ. ಅದಲ್ಲದೆ ನೋಡುಗರಿಗೆ ಬಹಳ ಅಸಹ್ಯವಾಗಿ ಕಾಣುತ್ತಿದೆ. ಸರ್ಕಾರಿ ಯೋಜನೆಗಳನ್ನು ಮನಬಂದಂತೆ ಉಪಯೋಗಿಸಿಕೊಂಡು ನೋಡುಗರಿಗೆ ನಾಚಿಕೆ ಬರುವಂತೆ ಕಾಣುತ್ತಿದೆ.
ಇನ್ನು ಈ ಬಸ್ಸಿ ಸುಬ್ರಮಣ್ಯ ದಿಂದ ಕಾರವಾರಕ್ಕೆ ಹೊರಡುವ ಸರ್ಕಾರಿ ಬಸ್ಸಿನಲ್ಲಿ ಕಂಡುಬಂದಂತಹ ದೃಶ್ಯ ಇದಾಗಿದೆ ಯಾರೋ ಮಾಡುವ ಚಿಕ್ಕ ತಪ್ಪಿಗೆ ಇನ್ನೊಬ್ಬರು ಅಸಹ್ಯ ಪಡುವಂತಗಾಗಿದೆ