political news
ಶಿರಾ :
ಶಿರಾ ಕ್ಷೇತ್ರದ ಬಿಜೆಪಿ ಶಾಸಕರಾದ ಡಾ. ಸಿ. ಎಂ. ರಾಜೇಶ್ ಗೌಡ, ಕಗ್ಗಲಡು ಗ್ರಾಮದಲ್ಲಿ ಸುಮಾರು 8.5 ಕೋಟಿ ವೆಚ್ಚದಲ್ಲಿ ಶಿರಾ – ಚಂಗಾವರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಬಹು ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಸಾರ್ವಜನಿಕರಿಗೆ ಅಡ್ಡಾಡಲು ತುಂಬಾ ಸಮಸ್ಯೆ ಆಗ್ತಿತ್ತು. ಶಿರಾ ನಗರಕ್ಕೆ ಅತಿ ಜನ ಬರುವ ರಸ್ತೆ ಇದಾಗಿದ್ದು, ಬಹು ದಿನಗಳ ಬೇಡಿಕೆಯಂತೆ ಈಗ ಗುದ್ದಲಿ ಪೂಜೆ ನಡೆದಿರೋದ್ರಿಂದ, ಸ್ಥಳೀಯ ಗ್ರಾಮಸ್ಥರು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಗುದ್ದಲಿ ಪೂಜೆ ವೇಳೆ ಮದ್ದೇವಳ್ಳಿ ರಾಮಕೃಷ್ಣಪ್ಪ, ಮದಲೂರು ಮೂರ್ತಿ ಮಾಸ್ಟರ್, ಸೂಡ ಅಧ್ಯಕ್ಷರಾದ ಮಾರುತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಅಧಿಕಾರಿಗಳು ಭಾಗವಹಿಸಿದ್ದರು. ಎಲ್ಲರೂ ಶಾಸಕ ರಾಜೇಶ್ ಗೌಡರಿಗೆ ಧನ್ಯವಾದ ತಿಳಿಸಿದ್ರು.
ಸಾಧುಕೋಕಿಲ ಪಕ್ಷ ಸೇರಿದ ಬೆನ್ನಲ್ಲೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ನೇಮಕ