Sunday, September 8, 2024

Latest Posts

‘ಸಿದ್ದರಾಮಯ್ಯ ಬಹಳ ಚಾಣಾಕ್ಷ. ಅವರಲ್ಲೇ ಗದ್ದಲ ಸೃಷ್ಟಿಸ್ತಾ ಇದ್ದಾರೆ’

- Advertisement -

Hubballi Political News: ಹುಬ್ಬಳ್ಳಿ:  ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಪಕ್ಷದ ನಾಯಕರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ತಾರೆ.  ಕಳೆದ ವಿಧಾನಮಂಡಲದಲ್ಲಿ ಸಮರ್ಪಕವಾಗಿ ಕಾಂಗ್ರೆಸ್‌ನ ಕಟ್ಟಿ ಹಾಕಿದ್ವಿ. ದೇಶದಲ್ಲಿ ಅನೇಕ ನಾಯಕರಿದ್ದಾರೆ, ಯಾವ ಸಮಯದಲ್ಲಿ ಏನು ಮಾಡಬೇಕು ಅಂತ ಅವರಿಗೆ ಗೊತ್ತು. ಲೋಕಸಭಾ ಚುನಾವಣೆ ಒಳಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತೆ ಎಂದು ಬೆಲ್ಲದ ಹೇಳಿದ್ದಾರೆ.

ಇನ್ನು ಯತ್ನಾಳ್ ಸಿಎಂ ಬದಲಾವಣೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಬೆಲ್ಲದ, ಪಕ್ಷದಲ್ಲಿ ನಡೆದ ವಿಚಾರ ನೋಡಿದ್ರೆ ಎಲ್ಲರಿಗೂ ಹಾಗೇ ಅನಿಸ್ತಾ ಇದೆ. ಚುನಾವಣೆ ಗೆದ್ದ ಮೊದಲು ಮೂರು ವರ್ಷ ಗದ್ದಲ ಇರೋದಿಲ್ಲ. ಆದ್ರೆ ಈಗಾಗಲೇ ಕಾಂಗ್ರೆಸ್ ನಲ್ಲಿ ಗದ್ದಲ ನಡೀತಾ ಇದೆ. ಎರಡೂವರೆ ವರ್ಷ ಸಿಎಂ ಬದಲಾವಣೆ ಕುರಿತು ಮಾತಾಗಿದೆ ಅಂತ ತಿಳಿದಿತ್ತು. ಸಿದ್ದರಾಮಯ್ಯ ಬಹಳ ಚಾಣಾಕ್ಷ. ಅವರಲ್ಲೇ ಗದ್ದಲ ಸೃಷ್ಟಿಸ್ತಾ ಇದ್ದಾರೆ. ನಾವು ಸರ್ಕಾರ ಬಿಳಿಸುವ ಅವಶ್ಯಕತೆ ಇಲ್ಲಾ. ಅವರು ತಮ್ಮ ತಪ್ಪಿನಿಂದಲೇ ಅಧಿಕಾರ ಕಳೆದುಕೊಳ್ತಾರೆ. ಅವರ ಆಡಳಿತವನ್ನೂ ನಾವು ಹೊರಗಡೆಯಿಂದ ನೋಡ್ತಾ ಇದ್ದೇವೆ ಎಂದು ಬೆಲ್ಲದ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಎಂಬ ವಿಚಾರದ ಬಗ್ಗೆ ಉತ್ತರಿಸಿದ ಬೆಲ್ಲದ,  ಕುಮಾರಸ್ವಾಮಿ ಅವರದ್ದು ಬೇರೆ ಪಕ್ಷ. ಇನ್ನು ಯಾವ ವಿಚಾರವಾಗಿ ಚರ್ಚೆ ಆಗಿಲ್ಲ. ಮೇಲಿನವರು ನಿರ್ಧಾರ ತೆಗೆದುಕೊಳ್ತಾರೆ. ನಮ್ಮ ಪಕ್ಷದಿಂದಲೇ ವಿರೋಧ ಪಕ್ಷದ ನಾಯಕ ಮಾಡ್ತಾರೆ. ಹಲವು ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಗಮನ ಇಲ್ಲಾ. ಹುಲಿ ಉಗುರು ಅಂತ ಗದ್ದಲ ಹಿಡಿಸಿ ಜನರ ಗಮನ ಬೇರೆಡೆ ಒಯ್ಯುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡ್ತಾ ಇದ್ದೇವೆ. ಅವರು ಅಧಿಕಾರಕ್ಕೆ ಹೊಡೆದಾಡ್ತಾ ಇದ್ದಾರೆ ಎಂದು ಬೆಲ್ಲದ ಹೇಳಿದ್ದಾರೆ.

ರಾಜ್ಯೋತ್ಸವ ಮುಗಿಸಿ ಬರುತ್ತಿದ್ದಾಗ ಬೈಕ್ ಡಿಕ್ಕಿ, ಇಬ್ಬರು ಸಾವು

ತಾಯಿಯನ್ನು ನಿಂದಿಸಿದ ಮಾವನನ್ನು ಇರಿದು ಕೊಂದ ಅಳಿಯ

ಸರಳ ಪೂಜೆಯ ಮೂಲಕ ಸರ್ಕಾರಿ ನಿವಾಸಕ್ಕೆ ಕಾಲಿಟ್ಟ ಸಚಿವ ಸಂತೋಷ್ ಲಾಡ್

- Advertisement -

Latest Posts

Don't Miss