Sunday, September 8, 2024

Latest Posts

ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವುದನ್ನು ಕೈಬಿಡಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ನಾವು ಅಕ್ಕಿ ಕೊಡ್ತೇವೆ ಅಂದ್ರೂ ಖರೀದಿಸೋಕೆ ಸಿದ್ದರಾಮಯ್ಯ ಬಳಿ ದುಡ್ಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ಕ್ಷುಲ್ಲಕ ರಾಜಕಾರಣ ಮಾಡಲು ಹೊರಟಿದ್ದಾರೆ. ನಮಗೆ ಕೇಂದ್ರ ಅಕ್ಕಿ ಪೂರೈಕೆ ಮಾಡಲಿಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕಳೆದ ಬಾರಿ ನಮ್ಮ ಬಳಿ ಅಕ್ಕಿ ಸ್ಟಾಕ್ ಇರಲಿಲ್ಲ. ಕಳೆದ ವರ್ಷ ಓಪನ್ ಮಾರುಕಟ್ಟೆಯಲ್ಲಿ ಅಕ್ಕಿ ನಿಲ್ಲಿಸಿದ್ದೆವು.
ಈಗ 330 ಲಕ್ಷ ಟನ್ ಲಭ್ಯವಿದೆ. ಮುಕ್ತ ಮಾರುಕಟ್ಟೆಯಲ್ಲಿ ಖರೀದಿಗೆ ಅವಕಾಶ ನೀಡಿದ್ದೇವೆ. ಅಕ್ಕಿ ದರ ಕೆ.ಜಿ. ಗೆ 34 ರೂಪಾಯಿಯಿಂದ 28 ರುಪಾಯಿಗೆ ಇಳಿಸಿದ್ದೇವೆ. ಯಾವುದೇ ರಾಜ್ಯ ಸರ್ಕಾರಗಳು ಖರೀದಿಸಬಹುದು. ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವುದನ್ನು ಕೈಬಿಡಬೇಕು ಎಂದು ಜೋಶಿ ಹೇಳಿದ್ದಾರೆ.

ಈಗ ನಾವು ಅಕ್ಕಿ ಕೊಡಲು ಸಿದ್ಧ. ಎಷ್ಟು ಬೇಕಾದ್ರು ಅಕ್ಕಿ ಖರೀದಿಸಿ. ಆದ್ರೆ ಸದ್ಯ ಅವರು ಅಕ್ಕಿ ತಗೋಳಲ್ಲ. ಅವರ ಬಳಿ ಅಕ್ಕಿ ಖರೀದಿಗೆ ಹಣ ಇಲ್ಲ. ಗೃಹಲಕ್ಷ್ಮಿ ಹಣ ಎರಡು ತಿಂಗಳಿಂದ ಕೊಟ್ಟಿಲ್ಲ. ಪೆಟ್ರೋಲ್ ಮತ್ತು ಹಾಲಿನ ದರ ಏರಿಸಲಾಗಿದೆ. ರೈತರಿಗೆ ಕೊಡುತ್ತಿರೋ ಸಬ್ಸಿಡಿ ಹಣ ಕಡಿತ ಮಾಡಿ ರೈತರಿಗೆ ದ್ರೋಹ ಮಾಡಲಾಗಿದೆ. ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡ್ತಿಲ್ಲ.
ಅನೇಕ ಕಾಂಗ್ರೆಸ್ ಶಾಸಕರು ಕೇಂದ್ರದ ಬಳಿ ಹಣ ಕೊಡಿಸಿ ಅಂತ ದುಂಬಾಲು ಬಿದ್ದಿದ್ದಾರೆ. ಭಾರತ ಅಕ್ಕಿ, ಹಿಟ್ಟಿನ ಬಗ್ಗೆ ಸಿದ್ದರಾಮಯ್ಯ ಕಾಮೆಂಟ್ ಮಾಡಿದ್ದಾರೆ. ಜುಲೈ ತಿಂಗಳಿನಲ್ಲಿಯೂ ಇದನ್ನು ಮುಂದುವರಿಸಿತ್ತಿದ್ದೇವೆ. ಸ್ಟಾಕ್ ಇಲ್ಲದೆ ಇರೋದಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿಕ್ಕಿಲ್ಲ. ಭಾರತ ಅಕ್ಕಿ ಮತ್ತು ಹಿಟ್ಟು ನ್ನು ಮುಂದುವರಿಯತ್ತೇವೆ. ಸಿದ್ದರಾಮಯ್ಯ ಅವರು ತಿಳಿದುಕೊಂಡು ಮಾತನಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಪ್ರವಾಹ ತಂಡದ ಬಗ್ಗೆ ಆತಂಕಪಡೋ ಅಗತ್ಯವಿಲ್ಲ. ಪ್ರವಾಹ ತಂಡ ಮಹದಾಯಿ ಯೋಜನೆ ವ್ಯಾಪ್ತಿಗೆ ಭೇಟಿ ಕೊಟ್ಟು ವಸ್ತುಸ್ಥಿತಿ ಅಧ್ಯಯನ ಮಾಡುತ್ತೆ. ಪ್ರವಾಹ ಅನ್ನೋದು ಒಂದು ಪ್ರಾಧಿಕಾರ. ಯಾವುದೇ ಜಲ ಆಯೋಗ ಅಸ್ತಿತ್ವಕ್ಕೆ ಬಂದ ನಂತರ ಪ್ರವಾಹ್ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಿರುತ್ತೆ. ಇದಕ್ಕೆ ಬೇರೆ ಬೇರೆ ರೀತಿಯ ಅರ್ಥ ಕೊಡಬಾರದು. ಅವರು ಬಂದು ಭೇಟಿ ನೀಡಿ ಅಧ್ಯಯನ ಮಾಡುತ್ತಾರೆ. ಆದರೆ ಕೇಂದ್ರಕ್ಕೆ ಯಾವುದೇ ವರದಿಯನ್ನು ಸಲ್ಲಿಸುವುದಿಲ್ಲ ಯೋಜನೆ ಆರಂಭಗೊಂಡ ನಂತರ ನೀರು ಹರಿವಿಗೆ ಕುರಿತು ಅವರು ವರದಿ ಕೊಡುತ್ತಾರೆ. ಮಹದಾಯಿ ಯೋಜನೆ ನೀರನ್ನು ಈಗಾಗಲೇ ಮೂರು ರಾಜ್ಯಗಳಿಗೆ ನಿಗದಿಗೊಳಿಸಲಾಗಿದೆ. ಸದ್ಯ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಯಾರೂ ಆತಂಕ ಪಡೋ ಅವಶ್ಯಕತೆ ಇಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

- Advertisement -

Latest Posts

Don't Miss