ನಾನೇನು ಅಲೆಮಾರಿ ಅಲ್ಲ- ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್

political news :

ನಾನೇನು ಅಲೆಮಾರಿ ಅಲ್ಲ 8 ಕ್ಷೇತ್ರಗಳಲ್ಲಿ ಗೆದ್ದಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸುತ್ತಿರುವ ಸಿದ್ದರಾಮಯ್ಯ ಮಾತನಾಡಿ, ಬೇರೆ ಬೇರೆ ಕ್ಷೇತ್ರದ ನಾಯಕರು 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿಲ್ಲವೇ, ಅವರೆಲ್ಲಾ ನಾಯಕರಲ್ಲವೆ, ಪ್ರಧಾನಿ ಮೋದಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಜನರು ಎಲ್ಲಿ ಪ್ರೀತಿ, ತೋರಿಸುತ್ತಾರೋ ಅಲ್ಲೇ ಸ್ಪರ್ಧೆಗೆ ನಿಲ್ತೇನೆ. ಬಾದಾಮಿಯಲ್ಲಿ 2 ಸಲಿ ಬಂದು ಗೆದಿದ್ದೆ, 1991ರಲ್ಲಿ ಕೊಪ್ಪಳದಲ್ಲಿ ನಿಂತಿದ್ದೆ. ಆಗ ರಾಜೀವ್ ಗಾಂಧಿ ನಿಧನದ ಹಿನ್ನಲೆ ಅಲ್ಲಿ ಸೋಲಬೇಕಾಯ್ತು, ಕೊನೆ ಚುನಾವಣೆ ಅಂತ ಚಾಮುಂಡೇಶ್ವರಿಯಲ್ಲಿ ನಿಂತಾಗ ಅಲ್ಲಿನ ಜನ ನನ್ನನ್ನ ಸೋಲಿಸಿದ್ರು. ಬಾದಾಮಿ ದೂರ ಅಲ್ಲಿಗೆ ಹೋಗೋಜು ಕಷ್ಟ ಹಾಗಾಗಿ ಹತ್ತಿರದ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಶಾಸಕ ಸ್ಥಾನ ಮಾರಿಕೊಂಡಿದ್ದಾರೆ ಹಲವು ಶಾಸಕರು.

ಬಿಜೆಪಿಯ ಭ್ರಷ್ಟಾಚಾರ ಬಗ್ಗೆ ಮಾತನಾಡಿದ ಆಪ್ ಪಕ್ಷ

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಅವರಿಗೆ ತಿಳಿದಿದೆ, ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ : ಆರಗ ಜ್ಞಾನೇಂದ್ರ

About The Author