Sunday, September 8, 2024

Latest Posts

ಆಸ್ತಿ ಬರೆಯಿಸಿಕೊಂಡು ತಾಯಿಗೆ ಮೋಸ ಮಾಡಿದ ಮಗ: ಸಿಎಂಗೆ ದೂರು

- Advertisement -

Bengaluru News: ಬೆಂಗಳೂರು: ‘ನೋಡಪ್ಪಾ ಡಿಸಿ, ತಿಪಟೂರು ತಾಲೂಕಿನ ಮಹಾದೇವಮ್ಮ ನನ್ನ ಬಳಿಗೆ ಬಂದಿದ್ದಾಳೆ. ಅವರಿಗೆ ತಲಾ ಒಬ್ಬರು ಹೆಣ್ಣು, ಗಂಡು ಮಕ್ಕಳಿದ್ದಾರೆ. ಮಗ ತನ್ನ ಹೆಸರಿಗೆ ಆಸ್ತಿ ಬರೆಯಿಸಿಕೊಂಡು ಮೋಸ ಮಾಡಿದ್ದಾನಂತೆ, ಆಸ್ತಿ ವಿಭಾಗದ ತಕರಾರು ಎಸಿ ಕೋರ್ಟ್ ಗೆ ಸಲ್ಲಿಸಿದ್ದಾರೆ. ಪೊಲೀಸರನ್ನು ಕಳಿಸಿ ತಾಯಿ, ಮಗನ ಮುಂದೆ ಕೂರಿಸಿಕೊಂಡು ಸಮಸ್ಯೆ ಬಗೆಹರಿಸಿ’ ತುಮಕೂರು ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಸೂಚನೆಯಿದು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಸ್ಪಂದಿಸಿದ ಬಗೆಯಿದು. ಅದೇ ರೀತಿ ರಾಮನಗರ ಜಿಲ್ಲೆಯ ಸುಗ್ಗನಹಳ್ಳಿಯ ರಾಜಮ್ಮ ತನ್ನ ಜಮೀನು ಒತ್ತುವರಿ ಮಾಡಿಕೊಂಡಿದ್ದು ಬಿಡಿಸಿಕೊಡಿ ಎಂದು ಅಳಲು ತೋಡಿಕೊಂಡರು. ರಾಮನಗರ ಜಿಲ್ಲಾಧಿಕಾರಿಗೆ ಫೋನ್ ನಲ್ಲಿ ಸಂಪರ್ಕಿಸಿದ ಸಿದ್ದರಾಮಯ್ಯ, ಸ್ಥಳ ಸಮೀಕ್ಷೆ ಮಾಡಿ ಒತ್ತುವರಿ ಸಮಸ್ಯೆ ಇತ್ಯರ್ಥಪಡಿಸಲು ತಾಕೀತು ಮಾಡಿದರು.

‘ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ’

ಸೋಮಣ್ಣ ಬಿಜೆಪಿಗೆ ಹೋಗಿದ್ದೇ ವಿಸ್ಮಯ : ಡಿಸಿಎಂ ಡಿ.ಕೆ.ಶಿವಕುಮಾರ್

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ

- Advertisement -

Latest Posts

Don't Miss