Shrinivasan Case: ಕೇರಳದ 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ

National News: ಬಿಜೆಪಿ ಮುಖಂಡ ರಂಜೀತ್ ಶ್ರೀನಿವಾಸನ್ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ, 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

2021ರ ಡಿಸೆಂಬರ್‌್ನಲ್ಲಿ ಬಿಜೆಪಿ ಮುಖಂಡ ರಂಜೀತ್ ಶ್ರೀನಿವಾಸನ್ ಅವರ ಹತ್ಯೆಯಾಗಿತ್ತು. ಪತ್ನಿ ಮಕ್ಕಳ ಎದುರಿಗೆ ರಂಜೀತ್‌ರನ್ನು ಕೊಲೆ ಮಾಡಲಾಗಿತ್ತು. ಈ ಹತ್ಯೆಗೆ ಸಂಬಂಧಿಸಿದಂತೆ 15 ಪಿಎಫ್‌ಐ ಸಂಘಟನೆ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಈ 15 ಮಂದಿ, ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಸಂಬಂಧ ಹೊಂದಿದ್ದರೆನ್ನಲಾಗಿತ್ತು. ಇದೀಗ ಇವರ ಮೇಲಿದ್ದ ಆರೋಪ ಸಾಬೀತಾಗಿದ್ದು, ಈ 16 ಮಂದಿಗೆ ಮರಣದಂಡನೆ ವಿಧಿಸಲಾಗಿದೆ.

ಇದೇ ಮೊದಲ ಬಾರಿ ಕೇರಳದಲ್ಲಿ ಒಂದು ಪ್ರಕರಣದಲ್ಲಿ ಇಷ್ಟು ಜನಕ್ಕೆ ಮರಣದಂಡನೆ ವಿಧಿಸಲಾಾಗಿದೆ. ನಿಜಾಮ್, ಅಜ್ಮಲ್, ಅನೂಪ್, ಅಬ್ದುಲ್ ಕಲಾಂ, ಸಫರುದ್ದೀನ್, ಜಜೀಬ್, ನವಾಜ್, ಮುನ್ಶಾದ್, ಸಲಾಂ, ಅಸ್ಲಾಮ್, ಶಮೀರ್, ಶಮ್ನಾಜ್‌, ನಜೀರ್, ಜಾಕಿರ್ ಹುಸೇನ್, ಶಾಜಿ ಇಷ್ಟು ಜನರಿಗೆ ಶಿಕ್ಷೆ ವಿಧಿಸಲಾಗಿದೆ.

‘ನಾನು ಕೇಸರಿ ಶಾಲು ಹಾಕಿದ್ದೇ ತಪ್ಪಾ? ದಲಿತರ ಕಾರ್ಯಕ್ರಮದಲ್ಲಿ ನೀಲಿ ಶಾಲು ಹಾಕ್ತೀನಿ. ಫೋಟೋ ಬೇಕಾ?’

ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ತಲೆಗೆ 50 ಬಾರಿ ಸುತ್ತಿಗೆಯಿಂದ ಬಡಿದು ಕೊಲೆ

About The Author