Sunday, June 1, 2025

Latest Posts

ಯಾವ ವಯಸ್ಸಿನವರೆಗೆ ಪಾಪ ತಟ್ಟುವುದಿಲ್ಲ..? ಧರ್ಮಶಾಸ್ತ್ರದಲ್ಲಿ ಹೇಳಿದ್ದೇನು..?

- Advertisement -

ಗೊತ್ತಿದ್ದೋ, ಗೊತ್ತಿಲ್ಲದೆಯೋ ಮನುಷ್ಯ ತಪ್ಪು ಮಾಡಿಬಿಡುತ್ತಾನೆ. ಕೆಲವೊಂದು ಕೊಲೆಗಳು ಗೊತ್ತಿಲ್ಲದೆಯೂ ನಡೆಯುತ್ತದೆ. ಆದ್ರೆ ತಪ್ಪು ತಪ್ಪೇ.. ಹಾಗಾದ್ರೆ ಯಾವ ವಯಸ್ಸಿನವರೆಗೆ ಪಾಪ ತಟ್ಟುವುದಿಲ್ಲ. ಈ ಬಗ್ಗೆ ಧರ್ಮಶಾಸ್ತ್ರದಲ್ಲಿ ಹೇಳಿದ್ದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮಕ್ಕಳಿಗೆ ಪಾಪ ತಟ್ಟೋದಿಲ್ಲಾ ಬಿಡು.  ಕೆಲವೊಮ್ಮೆ ಹಿರಿಯರು ಹೀಗೆ ಹೇಳಿದ್ದನ್ನ ಕೇಳಿರಬಹುದು. ಇದು ನಿಜಾನಾ.. ನಮ್ಮ ಧರ್ಮಶಾಸ್ತ್ರದಲ್ಲಿ ಏನು ಹೇಳಿದ್ದಾರೆ ಅನ್ನೋ ಬಗ್ಗೆ ಒಂದು ಕಥೆಯ ಮೂಲಕ ತಿಳಿಯೋಣ..

ಮಾಂಡವ್ಯ ಋಷಿಗಳು ಧ್ಯಾನ ಮಾಡುತ್ತಾ ಕುಳಿತಿದ್ದರು. ಆಗ ಆ ಸ್ಥಳಕ್ಕೆ ಕಳ್ಳರಿಬ್ಬರು ಹೆದರಿ ಓಡುತ್ತಾ ಬಂದರು. ಆಗ ಋಷಿಗಳು, ಯಾರಿಗೆ ಹೆದರಿ ನೀವು ಓಡುತ್ತ ಬರುತ್ತಿದ್ದೀರಿ ಎಂದು ಕೇಳುತ್ತಾರೆ. ಅದರಲ್ಲಿ ಒಬ್ಬ ಕಳ್ಳ, ನಾವು ವ್ಯಾಪಾರಿಗಳು, ನಮ್ಮನ್ನು ಕೊಂದು, ನಮ್ಮ ಬಳಿ ಇರುವ ದುಡ್ಡನ್ನು ಕಸಿದುಕೊಳ್ಳಲು, ಕೆಲ ಕಳ್ಳರು ಓಡಿ ಬರುತ್ತಿದ್ದಾರೆ. ಅವರಿಂದ ತಪ್ಪಿಸಿಕೊಂಡು ನಾವು ಓಡಿ ಬಂದಿದ್ದೇವೆಂದು ಸುಳ್ಳು ಹೇಳುತ್ತಾನೆ.

ಆಗ ಋಷಿಗಳು, ನಿಮ್ಮ ಬಳಿ ಇರುವ ಹಣವನ್ನು ನನ್ನ ಕುಟೀರದಲ್ಲಿ ಬಚ್ಚಿಡಿ. ನಂತರ ನೀವು ಓಡಿ ಹೋಗಿ, ಯಾರು ಬಂದರೂ ನಾನು ನೋಡಿಕೊಳ್ಳುತ್ತೇನೆಂದು ಹೇಳುತ್ತಾರೆ. ಋಷಿಗಳು ಹೇಳಿದಂತೆ, ಕಳ್ಳರು ತಮ್ಮ ಬಳಿ ಇರುವ ಹಣವನ್ನು ಕುಟೀರದಲ್ಲಿ ಇಟ್ಟು ಹೋಗುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ, ಅಲ್ಲಿನ ಸೈನಿಕರು ಆ ಕುಟೀರಕ್ಕೆ ಬರುತ್ತಾರೆ. ಕುಟೀರದಲ್ಲಿದ್ದ ಹಣದ ಜೊತೆ, ಕಳ್ಳರು ಮತ್ತು ಮಾಂಡವ್ಯ ಋಷಿಗಳನ್ನು ಬಂಧಿಸಿ ಕರೆದೊಯ್ಯುತ್ತಾರೆ. ಮತ್ತು ಋಷಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ.

ಆಗ ಋಷಿಗಳು, ನಾನು ಇವರ ಸಹಾಯ ಮಾಡಲು ಹೋಗಿ ಹೀಗಾಯಿತು ಎಂದು ಎಲ್ಲ ಘಟನೆಯನ್ನು ಹೇಳುತ್ತಾರೆ. ಆದರೂ ನಂಬದ ಸೈನಿಕರು ರಾಜನ ಬಳಿ ಒಯ್ಯುತ್ತಾರೆ. ರಾಜ ಋಷಿಗಳಿಗೆ ಗಲ್ಲು ಶುಕ್ಷೆ ವಿಧಿಸುತ್ತಾನೆ. ಮಾಂಡವ್ಯ ಋಷಿಗಳಿಗೆ ಗಲ್ಲಿಗೇರಿಸಲಾಗುತ್ತದೆ. ಆದ್ರೆ ಹಲವು ವರ್ಷಗಳ ತಪಸ್ಸಿನ ಫಲವಾಗಿ, ಮಾಂಡವ್ಯ ಋಷಿಗಳಿಗೆ ಏನೂ ಆಗುವುದಿಲ್ಲ. ಇದನ್ನು ನೋಡಿ ಆಶ್ಚರ್ಯಗೊಂಡ ಸೈನಿಕರು, ರಾಜನಿಗೆ ವಿಷಯ ಮುಟ್ಟಿಸುತ್ತಾರೆ. ರಾಜ, ಋಷಿಗಳಲ್ಲಿ ಕ್ಷಮೆಯಾಚಿಸುತ್ತಾನೆ. ಮಾಂಡವ್ಯ ಋಷಿಗಳು ರಾಜನನ್ನು ಕ್ಷಮಿಸಿ, ತಮ್ಮ ತಪೋಬಲದಿಂದ ಯಮಲೋಕಕ್ಕೆ ಹೋಗುತ್ತಾರೆ.

ಅಲ್ಲಿ ಯಮನನ್ನು ಕುರಿತು, ನಾನೇನು ತಪ್ಪು ಮಾಡಿದ್ದೆನೆಂದು ನನ್ನನ್ನು ಗಲ್ಲಿಗೇರಿಸುವ ಶಿಕ್ಷೆಯಾಯಿತು..? ಎಂದು ಕೇಳುತ್ತಾರೆ. ಆಗ ಯಮ, ನೀವು ಚಿಕ್ಕವರಿದ್ದಾಗ, ಇರುವೆಯ ಹಿಂಭಾಗಕ್ಕೆ ಸೂಜಿಯಿಂದ ಚುಚ್ಚುತ್ತಿದ್ದಿರಿ. ಹೀಗಾಗಿ ನಿಮಗೆ ಇಂಥ ಸ್ಥಿತಿ ಬಂತು ಎನ್ನುತ್ತಾರೆ. ಆಗ ಋಷಿಗಳು, ಹುಟ್ಟಿದಾಗಿನಿಂದ 12 ವರುಷದವರೆಗೂ ಮಕ್ಕಳು ಮಾಡಿದ ತಪ್ಪನ್ನು ತಪ್ಪಾಗಿ ಪರಿಗಣಿಸುವುದಿಲ್ಲ. ಯಾಕೆಂದರೆ, ಆ ಸಮಯದಲ್ಲಿ ಅವರಿಗೆ ಕೆಟ್ಟದ್ದು, ಒಳ್ಳೆಯದರ ಬಗ್ಗೆ ಅರಿವಿರುವುದಿಲ್ಲ. ನೀವು ನಾನು ಗೊತ್ತಿಲ್ಲದೇ ಮಾಡಿದ ತಪ್ಪಿಗೆ, ಇಂಥ ಶಿಕ್ಷೆ ಕೊಟ್ಟಿದ್ದೀರಿ. ನೀವು ಕೂಡ ಮನುಷ್ಯನಾಗಿ ಹುಟ್ಟಿ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ಎಂದು ಯಮನಿಗೆ, ಮಾಂಡವ್ಯ ಋಷಿ ಶಾಪ ಹಾಕುತ್ತಾರೆ. ಹಾಗಾಗಿ ಯಮ, ಮಹಾಭಾರತದ ವಿದುರನಾಗಿ ಜನಿಸುತ್ತಾನೆ.  

ಇನ್ನು ಈ ಕಥೆಯ ಪ್ರಕಾರ ತಿಳಿದ ಸಂಗತಿ ಏನೆಂದರೆ, ಚಿಕ್ಕ ಮಕ್ಕಳಿದ್ದಾಗ ಒಳ್ಳೆಯದು, ಕೆಟ್ಟದ್ದರ ಬಗ್ಗೆ ನಮಗೆ ಅರಿವಿರುವುದಿಲ್ಲ. ಹಾಗಾಗಿ ಆ ಸಮಯದಲ್ಲಿ ಮಾಡಿದ ತಪ್ಪಿಗೆ ಪಾಪ ತಟ್ಟುವುದಿಲ್ಲ.

- Advertisement -

Latest Posts

Don't Miss