Thursday, June 19, 2025

Latest Posts

ಸಿಗಂದೂರು ಚೌಡಮ್ಮ ನೆಲೆನಿಂತಿದ್ದಾದರೂ ಹೇಗೆ..?

- Advertisement -

ಕರ್ನಾಟಕದಲ್ಲಿರುವ ಹಲವು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನವೂ ಒಂದು. ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕಳಸವಳ್ಳಿಯಲ್ಲಿರುವ ಸಿಂಗದೂರು ಚೌಡೇಶ್ವರಿ ದೇವಸ್ಥಾನ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಕರ್ನಾಟಕದಿಂದಷ್ಟೇ ಅಲ್ಲದೇ, ದೇಶದ ವಿವಿಧ ಭಾಗಗಳಿಂದ, ವಿದೇಶಗಳಿಂದಲೂ ಭಕ್ತರು ಈ ದೇವಿಯ ದರ್ಶನ ಮಾಡಲು ಬರುತ್ತಾರೆ. ಈ ದೇವಸ್ಥಾನಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಶೇಷಪ್ಪ ನಾಯಕ ಎಂಬುವವರು ಈ ದೇವಸ್ಥಾನ ಕಟ್ಟಿಸಿದ್ದಾರಂತೆ.

ಒಮ್ಮೆ ಶೇಷಪ್ಪ ನಾಯಕರು ಬೇಟೆಯಾಡಲು ಕಾಡಿಗೆ ಹೋಗಿದ್ದರಂತೆ. ಅಲ್ಲಿ ದಾರಿ ತಪ್ಪಿ, ಒಂದು ಜಾಗದಲ್ಲಿ ಸಿಕ್ಕಿಹಾಕಿಕೊಂಡರಂತೆ. ಆ ಸ್ಥಳದಲ್ಲಿ ಶೇಷಪ್ಪ ನಾಯಕರಿಗೆ ಭಯ ಶುರುವಾಯಿತು. ಆಗ ಅವರು ಕಾಪಾಡಮ್ಮ ಚೌಡಮ್ಮ ತಾಯಿ ಎಂದು ಹೇಳಿ, ಪ್ರಜ್ಞೆ ತಪ್ಪಿ ಬಿದ್ದರಂತೆ. ಅವರ ಕನಸಲ್ಲಿ ಬಂದ ಚೌಡಮ್ಮ. ನಾನು ನಿನ್ನನ್ನು ಕಾಪಾಡಲು ಬಂದಿರುವೆ. ಇನ್ನು ನಾನಿಲ್ಲೇ ನೆಲೆ ನಿಲ್ಲುವೆ. ನನಗೊಂದು ದೇವಸ್ಥಾನ ಕಟ್ಟಿಸು, ನಿನಗೆ ಎಲ್ಲ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾಳೆ. ಅವರಿಗೆ ಎಚ್ಚರವಾದಾಗ, ಅವರ ಎದುರು ಹೊಳೆಯುವ ಕಲ್ಲು ಇತ್ತು.

 ಆದರೆ ಮರುದಿನ ಅವರಿಗೆ ಏನು ಕನಸು ಬಿತ್ತು ಅನ್ನೋದು ನೆನಪಾಗಲಿಲ್ಲ. ಪೂಜೆ ಮಾಡಿ, ಕೆಲಸ ಮುಗಿಸಿ ಮತ್ತೆ ಆ ಸ್ಥಳಕ್ಕೆ ಬಂದಾಗ ಹೊಳೆಯುವ ಕಲ್ಲು ನೋಡಿದರಂತೆ, ಆಗ ತಾಯಿ ಚೌಡೇಶ್ವರಿಗೆ ದೇವಸ್ಥಾನ ಕಟ್ಟಿಸಬೇಕೆಂಬುದು ನೆನಪಾಯಿತು. ನಂತರ ಪ್ರತಿದಿನ ಶೇಷಪ್ಪ ಸ್ನಾನಾದಿಗಳನ್ನು ಮಾಡಿ, ಶುದ್ಧ ಮನಸ್ಸಿನಿಂದ ಆ ಕಲ್ಲನ್ನು ಪೂಜಿಸಲು ಆರಂಭಿಸಿದರು. ನಂತರ ಬ್ರಾಹ್ಮಣ ಪುರೋಹಿತರನ್ನು ಕರೆಸಿ ಅವರಿಂದ ಪೂಜೆ ಮಾಡಿಸಿದರು. ಹೀಗೆ ದಿನಗಳೆದಂತೆ ಅಲ್ಲಿ ದೇವಸ್ಥಾನದ ನಿರ್ಮಾಣವಾಯಿತು.

ಈಗ ಭಕ್ತರು ಲಾಂಚರ್ ಅಥವಾ ರಸ್ತೆಯ ಮೂಲಕ ಸಿಗಂದೂರು ಚೌಡೇಶ್ವರಿಯ ದರ್ಶನ ಮಾಡಬಹುದು. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದವಿರುತ್ತದೆ. ಇಲ್ಲಿ ಅತಿಥಿ ಗ್ರಹ, ಯಾಗಶಾಲೆ, ಗೋಶಾಲೆ, ಕಲ್ಯಾಣ ಮಂಟಪವನ್ನ ನಿರ್ಮಿಸಲಾಗಿದೆ.

- Advertisement -

Latest Posts

Don't Miss