www.karnatakatv.netಕೊರೊನಾ ಕೊರೊನಾ ಕೊರೊನಾ ಈ ಮೂರಕ್ಷರದ ಶಬ್ದ ಬಿಟ್ಟರೆ ಮತ್ಯಾವ ವರ್ಲ್ಡ್ ಕೂಡ ಕಿವಿ ಮೇಲೆ ಕೇಳ್ತಿಲ್ಲ. ಕಣ್ಣುಗಳು ಡೆಡ್ಲಿಕೊರೋನಾ ಅಟ್ಟಹಾಸವನ್ನ ಬಿಟ್ಟರೆ ಬೇರೆನೂ ನೋಡಿಲ್ಲ. ಅದ್ಯಾವಾಗ ನಮ್ಮ ಗವರ್ನಮೆಂಟ್ ಥಿಯೇಟರ್ ಆರಂಭಕ್ಕೆ ಅವಕಾಶ ಕೊಡುತ್ತೋ, ಅದ್ಯಾವಾಗ ನಮ್ಮ ಬಾಸ್ ಮೂವೀಸ್ ಬಿಗ್ಸ್ಕ್ರೀನ್ ಮೇಲೆ ಮೂಡುತ್ತೋ, ನಮ್ಮ ಆರಾಧ್ಯದೈವನ ಹೊತ್ತುಮೆರೆಸೋ ದಿವ್ಯಕ್ಷಣ ಅದ್ಯಾವಾಗ ಕೂಡಿಬರುತ್ತೋ ಅಂತ ಕೋಟ್ಯಾಂತರ ಸಿನಿಮಾ ಪ್ರೇಕ್ಷಕರು ಕೂತೂಹಲದಿಂದ ಕಾಯ್ತಿದ್ದಾರೆ. ಈ ಕಾಯುವಿಕೆಯ ಕೌತುಕದ ಕ್ಷಣದಲ್ಲಿ ಕಿಚ್ಚನ ಅಭಿಮಾನಿಗಳು ಹುಬ್ಬೇರಿಸುವಂತಹ, ಕ್ಯಾಕಿ ಹೊಡೆದು ಸಂಭ್ರಮಿಸುವAತಹ ಸಂತಸದ ಸುದ್ದಿಯೊಂದನ್ನ ವಿಕ್ರಾಂತ್ ರೋಣ ರೂವಾರಿ ಅನುಫ್ ಬಂಡಾರಿಯವರು ಬಿಚ್ಚಿಟ್ಟಿದ್ದಾರೆ. ಆ ಖುಷಿಯ ಧಮಾಕೇದಾರ್ ಸಮಾಚಾರ್ ನಿಮ್ಮ ಮುಂದೆ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರನ್ನ ಮುತ್ತಿನ ತೇರಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡೋದಕ್ಕೆ ಫ್ಯಾನ್ಸ್ ಒಂಟಿಕಾಲಿನಲ್ಲಿ ನಿಂತಿರುತ್ತಾರೆ ಅನ್ನೋದು ಸಾರ್ವಕಾಲಿಕ ಸತ್ಯ. ಮಾಣಿಕ್ಯನ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡೋದೇ ತಡ ಕಿಚ್ಚನ ಫ್ಯಾನ್ಸ್ ನೂರಾರಡಿ ಕಟೌಟ್ ನಿಲ್ಲಿಸಿ ಮುತ್ತಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಸರಪಟಾಕಿ ಹಚ್ಚಿ ತದನಂತರ ಹೆಬ್ಬುಲಿಯನ್ನ ಚಿತ್ರಮಂದಿರಕ್ಕೆ ಬರಮಾಡಿಕೊಳ್ತಾರೆ. ಫಸ್ಟ್ ಡೇ ಫಸ್ಟ್ ಶೋ ಸುನಾಮಿಯಂತೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಥಿಯೇಟರ್ ಹೌಸ್ಫುಲ್ ಮಾಡೋದ್ರ ಜೊತೆಗೆ ಗಲ್ಲಾಪೆಟ್ಟಿಗೆ ಗಹಗಹಿಸುವಂತೆ ಮಾಡ್ತಾರೆ. ಕೋಟಿಕೋಟಿ ಹಣ ನಿರ್ಮಾಪಕರ ಖಜಾನೆಗೆ ಹರಿದುಬರುವಂತೆ, ನಿರ್ದೇಶಕರ ಮೊಗದಲ್ಲಿ ಮಂದಹಾಸ ಮೂಡುವಂತೆ, ಆರಾಧ್ಯದೈವನ ಸಿನಿಮಾ ಮೊದಲ ದಿನವೇ ನಯಾ ದಾಖಲೆ ಬರೆಯುವಂತೆ ನೋಡಿಕೊಳ್ತಾರೆ. ಇಷ್ಟೆಲ್ಲಾ ತಾಕತ್ತಿರೋ ಕಿಚ್ಚನ ಕೋಟ್ಯಾಂತರ ಫ್ಯಾನ್ಸ್ಗೆ ಕಣ್ಣುಬ್ಬು ಎಗರಿಸುವ, ಕಾಲರ್ ಪಟ್ಟಿ ಟೈಟ್ ಮಾಡಿಕೊಳ್ಳುವ ಸುದ್ದಿಯೊಂದನ್ನು ವಿಕ್ರಾಂತ್ ರೋಣ ರೂವಾರಿ ಅನುಫ್ ಬಂಡಾರಿಯವರು ಬಿಚ್ಚಿಟ್ಟಿದ್ದಾರೆ.
ವಿಕ್ರಾಂತ್ ರೋಣ ಈ ಹೆಸರು ಕೇಳಿದಾಕ್ಷಣ ಫ್ಯಾನ್ಸ್ ಥ್ರಿಲ್ಲಾಗ್ತಾರೆ. ಅದಕ್ಕೆ ಕಾರಣ ಆಟೈಟಲ್ಗೆ ಇರುವ ಪವರ್ ಅಂಡ್ ಹೆಬ್ಬುಲಿ ಖದರ್. ಫ್ಯಾಂಟಮ್ ಟೈಟಲ್ನ ವಿಕ್ರಾಂತ್ ರೋಣ ಅಂತ ಅದ್ಯಾವ ಕ್ಷಣದಲ್ಲಿ ಚಿತ್ರತಂಡ ಬದಲಿಸಬಿಡ್ತೋ ಏನೋ ಗೊತ್ತಿಲ್ಲ ಆ ಗಳಿಗೆಯಿಂದ ಈ ಚಿತ್ರಕ್ಕೆ ಮಾಣಿಕ್ಯದಷ್ಟು ತೂಕ ಬಂದಿದೆ. ವಿಕ್ರಾಂತ್ ರೋಣ ಚಿತ್ರದ ಮೇಲಿನ ನಿರೀಕ್ಷೆ ಕೋಟ್ಯಾಂತರ ಅಭಿಮಾನಿಗಳ ಹೃದಯವನ್ನು ದಾಟಿಕೊಂಡು ಆಕಾಶದೆಡೆಗೆ ಲಗ್ಗೆ ಇಟ್ಟಿದೆ. ಅದಕ್ಕೆ ಮೊದಲ ಕಾರಣ ತ್ರಿಡಿ ಟೆಕ್ನಾಲಜಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾವನ್ನು ತೆರೆಗೆ ತರುತ್ತಿರುವುದಾದರೆ, ಎರಡನೇ ಕಾರಣ ಕಿಚ್ಚ ಹಿಂದೆಂದೂ ಎತ್ತಿರದ ಅವತಾರವೆತ್ತಿ ಬಿಗ್ಸ್ಕ್ರೀನ್ ಬೆಚ್ಚಿಬೀಳಿಸೋಕೆ ಹೊರಟಿರುವುದು.
ಪ್ರತಿ ಸಿನಿಮಾದಲ್ಲೂ ಕಿಚ್ಚ ಭಿನ್ನ- ವಿಭಿನ್ನವಾಗಿ ಕಾಣ್ತಾರೆ. ನಯಾ ಪಾತ್ರದ ಮೂಲಕ ಕಿಕ್ಕೇರಿಸ್ತಾರೆ ಅದರಲ್ಲಿ ನೋ ಡೌಟ್. ಆದರೆ, ವಿಕ್ರಾಂತ್ ರೋಣನಾಗಿ ಕಿಚ್ಚನ ಕಮಾಲ್ ಬೇರೆನೆಯಿದೆ. ಈಗಾಗಲೇ ಬಿಡುಗಡೆಯಾಗಿರೋ ಪೋಸ್ಟರ್ ಹಾಗೂ ಮೇಕಿಂಗ್ನಲ್ಲಿ ಹೆಬ್ಬುಲಿಯ ಆಟ- ಆರ್ಭಟ ಎಲ್ಲವನ್ನೂ ನೋಡಿದ್ದೀರಿ. ಇದೀಗ, ವಿಕ್ರಾಂತ್ ರೋಣ ರೂವಾರಿ ಅನುಪ್ ಬಂಡಾರಿಯವರು ರಿವೀಲ್ ಮಾಡಿದ ಸುದ್ದಿಯನ್ನ ಕೇಳಿ ದಂಗಾಗುವ ಸಮಯ. ಹಾಗಾದ್ರೆ, ಆ ಸುದ್ದಿ ಏನು ಅಂತೀರಾ. ವಿಕ್ರಾಂತ್ ರೋಣ ಚಿತ್ರದ ಸೌಂಡ್ ಇಂಜಿನಿಯರ್ ಬೆಚ್ಚಿಬಿದ್ದಿದ್ದು. ರೋಮರೋಮಗಳು ದಡಕ್ಕನೆ ದೇಹದಿಂದ ಎದ್ದುನಿಂತಿದ್ದು, ಏನಾಗ್ತಿದೆ ಅಂತ ಮೈಕೈ ಮುಟ್ಟಿಕೊಳ್ಳುವಷ್ಟರಲ್ಲಿ ಇಡೀ ದೇಹ ಐಸ್ಕ್ಯೂಬ್ನಂತೆ ತಣ್ಣಗಾಗಿದ್ದು. ಅಷ್ಟಕ್ಕೂ ಇಷ್ಟೆಲ್ಲಾ ಆಗಿದ್ದು ಆರಡಿ ಕಟೌಟ್ ಘರ್ಜನೆಯನ್ನು ಕಂಡಮೇಲೆ, ಇಂಟರ್ವಲ್ನಲ್ಲಿ ಹೆಬ್ಬುಲಿ ಹೊಡೆದ ಡೈಲಾಗ್ನ ಕೇಳಿದಮೇಲೆ.
ಯಸ್, ವಿಕ್ರಾಂತ್ ರೋಣ ಖಾರುಬಾರಿಗೆ ಕಿಕ್ಸ್ಟಾರ್ಟ್ ಕೊಡೋದಕ್ಕೆ ಚಿತ್ರತಂಡ ತಯ್ಯಾರಿ ಮಾಡಿಕೊಳ್ತಿದೆ. ಮೊದಲು ಕೋಟಿಗೊಬ್ಬನ ದರ್ಬಾರ್ ಶುರುವಾಗಲಿ ನಂತರ ವಿಕ್ರಾಂತ್ ರೋಣನ ಅಟ್ಟಹಾಸಕ್ಕೆ ಮುಹೂರ್ತ ಫಿಕ್ಸ್ ಮಾಡೋಣ ಅಂತ ನಿರ್ಮಾಪಕ ಜಾಕ್ ಮಂಜು ನಿರ್ಧರಿಸಿದ್ದಾರೆ. ಈ ನಡುವೆ ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಡಬ್ಬಿಂಗ್ ಮುಗಿಸಿಕೊಟ್ಟು ಸೂಪರ್ಹ್ಯಾಪಿ ಫೀಲ್ನಲ್ಲಿರುವ ಸುದೀಪ್, ಹಾಡೊಂದರ ಚಿತ್ರೀಕರಣಕ್ಕೆ ಎದುರುನೋಡ್ತಿದ್ದಾರೆ. ಕಿಚ್ಚನ ಜೊತೆ ಲೆಗ್ ಶೇಕ್ ಮಾಡೋಕೆ ಶ್ರೀಲಂಕಾ ಸುಂದರಿ ಜಾಕ್ಲೀನ್ ಬರ್ತಾರೆನ್ನುವ ಸುದ್ದಿಯಿದೆ ಆದರೆ ಫೈನಲ್ ಆಗಿಲ್ಲ. ಈ ನಡುವೆ ನಿರ್ದೇಶಕ ಅನುಪ್ ಸುದೀಪ್ ಹಾಗೂ ಸೌಂಡ್ ಇಂಜಿನಿಯರ್ ಬಕ್ಕೇಶ್ ಜೊತೆಗಿರುವ ಫೋಟೋವೊಂದನ್ನು ಅಪ್ಲೋಡ್ ಮಾಡಿ ಬಕ್ಕೇಶ್ ಬೆಚ್ಚಿಬಿದ್ದಿರುವ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಈ ಸುದ್ದಿ ತಿಳಿದ ಫ್ಯಾನ್ಸ್, ಕಾಲರ್ ಪಟ್ಟಿ ಟೈಟ್ ಮಾಡಿಕೊಳ್ತಾ, ಕಣ್ಣುಬ್ಬು ಎಗರಿಸುತ್ತಿದ್ದಾರೆ. ಸೌಂಡ್ ಇಂಜಿನಿರ್ರೇ ಶೇಕ್ ಆದ್ಮೇಲೆ ಬಿಗ್ಸ್ಕ್ರೀನ್ ಶೇಕ್ ಆಗದೇ ಇರುತ್ತಾ? ಬಾಕ್ಸ್ಆಫೀಸ್ ಬೆಚ್ಚಿಬೀಳದೇ ಇರುತ್ತಾ? ಹೀಗಂತ ಸುದೀಪ್ ಫ್ಯಾನ್ಸ್ ಮಾತನಾಡಿಕೊಳ್ತಿದ್ದಾರೆ.
ಸುದೀಪ್ ಫ್ಯಾನ್ಸ್ ವಲಯದಲ್ಲಿ ನಡೆಯುತ್ತಿರುವ ಈ ಮಾತುಕತೆ ನಿಜ ಆಗುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ. ಯಾಕಂದರೆ ವಿಕ್ರಾಂತ್ ರೋಣ ಬರೀ ಸಿನಿಮಾ ಅಲ್ಲ ಅದು ಬಂಗಾರದ ಪಂಜರ ಅಂದರೆ ತಪ್ಪಾಗಲ್ಲ. ಕೋಟಿಗೊಬ್ಬನ ಖದರ್ ಎಂತಹದ್ದು ಅನ್ನೋದನ್ನ ಇಂಚಿಚಾಗಿ ತಿಳಿದುಕೊಂಡಿರುವ ನಿರ್ಮಾಪಕ ಜಾಕ್ ಮಂಜು ಅವರು ವಿಕ್ರಾಂತ್ ರೋಣನಿಗೆ ಕೋಟಿ ಕೋಟಿಹಣ ಸುರಿದಿದ್ದಾರೆ. ಹೈದ್ರಬಾದ್ ಅಂಗಳದಲ್ಲಿ ಕಣ್ಣುಕುಕ್ಕುವಂತೆ ಫ್ಯಾಂಟಸಿ ಲೋಕವನ್ನು ನಿರ್ಮಿಸಿ ಚಿತ್ರೀಕರಣ ಮಾಡಿದ್ದಾರೆ. ಆಕ್ಷನ್ ಅಡ್ವೆಂಚರಸ್ ತುಂಬಿರುವ ಫ್ಯಾಂಟಸಿ ಲೋಖವನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಡಬೇಕು ನಿರ್ದೇಶಕ ಅನುಪ್ ಭಂಡಾರಿ ಅಂಡ್ ಟೀಮ್ ಬೆವರು ಹರಿಸಿದ್ದಾರೆ. ಅಣ್ಣ ಅನುಪ್ ಕೈಚಳಕ ಚಿತ್ರದಲ್ಲಿ ಕಿಚ್ಚನ ಜೊತೆಗೆ ಸಂಜೀವ್ ಗಂಭೀರ್ ಪಾತ್ರಕ್ಕೆ ನಿರುಪ್ ಭಂಡಾರಿ ಕೂಡ ಬಣ್ಣ ಹಚ್ಚಿದ್ದಾರೆ. ಪಂಚಭಾಷೆಯಲ್ಲಿ ತಯ್ಯಾರಾಗಿರುವ ವಿಕ್ರಾಂತ್ ರೋಣ ಫ್ಯಾನ್ ಇಂಡಿಯಾ ತುಂಬೆಲ್ಲಾ ಅಬ್ಬರಿಸಿ ಬೊಬ್ಬಿರಿಯೋದಕ್ಕೆ ಸಜ್ಜಾಗಿ ನಿಂತಿದೆ. ಸರ್ಕಾರ ಅನುಮತಿ ನೀಡಿದರೆ ಮೊದಲು ಕೋಟಿಗೊಬ್ಬನ ಆರ್ಭಟ ಶುರುವಾಗಲಿದೆ. ನಂತರ ವಿಕ್ರಾಂತ್ ರೋಣನ ಹವಾ ಮುಗಿಲುಮುಟ್ಟಲಿದೆ. ಅಲ್ಲಿವರೆಗೂ ಒಂಟಿಕಾಲಿನಲ್ಲಿ ಕಾಯ್ತಾರೀ
ವಿಶಾಲಾಕ್ಷಿ ಎಂಟರ್ ಟೈನ್ಮೆಂಟ್ ಬ್ಯೂರೋ ಕರ್ನಾಟಕ ಟಿವಿ