Friday, July 24, 2026

Nikhil Kumar

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರ್‌ಗೆ ಆಹ್ವಾನ..

Movie News: ಜನವರಿ 22ಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆಯಲಿದ್ದು, ನಟ, ರಾಜಕಾರಣಿ ನಿಖಿಲ್ ಕುಮಾರ್‌ಗೂ ಆಹ್ವಾನ ನೀಡಲಾಗಿದೆ. ರಾಮಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಖಿಲ್‌ಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದ್ದು, ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಹೆಚ್,ಡಿ,ಕುಮಾರಸ್ವಾಮಿ ಅವರು ಕೂಡ, ತಮಗೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ...

ಹಾಸನ ನಗರಸಭೆ 16ನೇ ವಾರ್ಡ್ ಉಪ ಚುನಾವಣೆ: ಜೆಡಿಎಸ್ ನವೀನ್ ನಾಗರಾಜ್ ಅವಿರೋಧ ಆಯ್ಕೆ..

ಹಾಸನ: ನಗರಸಭೆ ಸದಸ್ಯರಾಗಿದ್ದ ಪ್ರಶಾಂತ್ ನಾಗರಾಜು ಹತ್ಯೆ ನಂತರ ತೆರವಾಗಿದ್ದ ೧೬ನೇ ವಾರ್ಡಿನ ಸ್ಥಾನಕ್ಕೆ ಸ್ಪರ್ಧಿಸಿ ಅವಿರೋಧವಾಗಿ ನವೀನ್ ನಾಗರಾಜು ಆಯ್ಕೆಯಾಗಿದ್ದಾರೆ. ನಗರಸಭೆ ಸದಸ್ಯರಾಗಿದ್ದ ಪ್ರಶಾಂತ್ ನಾಗರಾಜು ಹತ್ಯೆಯಾದ ನಂತರ ತೆರವಾದ ನಂತರ ಉಪ ಚುನಾವಣೆಯಲ್ಲಿ ೧೬ನೇ ವಾರ್ಡಿನ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸಹೋಧರ ನವೀನ್ ನಾಗರಾಜು ನಾಮಪತ್ರ ಸಲ್ಲಿಸಿದ್ದರು.. ಇಂದು ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು...

ಹುಟ್ಟುಹಬ್ಬದ ಸಂಭ್ರಮದಲ್ಲಿ ಜಾಗ್ವರ್ ಹೀರೋ ನಿಖಿಲ್ ಕುಮಾರ್..ಪತ್ನಿಯೊಂದಿಗೆ ನಿಖಿಲ್ ಮೊದಲ ಬರ್ತ್ ಡೇ ಹೇಗಿತ್ತು..?

ಕನ್ನಡ ಚಿತ್ರರಂಗದ ಜಾಗ್ವರ್ ಹೀರೋ, ಸ್ಟೈಲೀಶ್ ಸ್ಟಾರ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಟ ನಿಖಿಲ್ ಕುಮಾರ್ ಗಿಂದು ಹುಟ್ಟುಹಬ್ಬದ ಸಂಭ್ರಮ. ಇಂದು ಬೆಳಗ್ಗೆಯೇ ಬೆಂಗಳೂರಿನ ಜೆಪಿನಗರದ ನಿವಾಸದಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಿ ತಂದೆ-ತಾಯಿಯ ಆರ್ಶೀವಾದ ಪಡೆದುಕೊಂಡರು. ಬಳಿಕ ಇಡೀ ಕುಟುಂಬದೊಂದಿಗೆ ಯುವರಾಜ ನಿಖಿಲ್ ಕೇಕ್ ಕತ್ತರಿಸಿ ಸಂಭ್ರಮಪಟ್ಟರು. ವಿಶೇಷ ಅಂದ್ರೆ ಈ ವರ್ಷ...

‘ರಾಯಣ್ಣನ ಪ್ರತಿಮೆಗಾಗಿ ಕನ್ನಡಿಗರು ಇಷ್ಟು ಹರಸಾಹಸ ಪಡಬೇಕೇ..?’

ಜಿಎಸ್‌ಟಿ ಪರಿಹಾರ ನೀಡದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಆದ್ರೆ ಇಲ್ಲಿ ಸಿದ್ದರಾಮಯ್ಯ ರಾಜ್ಯಸರ್ಕಾರದ ವಿರುದ್ಧ ಹರಿಹಾಯ್ದರೆ, ಕುಮಾರಸ್ವಾಮಿ ಯಡಿಯೂರಪ್ಪ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ನಷ್ಟ ತುಂಬಿಕೊಡುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ...

ಜೆಡಿಎಸ್ ನೂತನ ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕ- ನಿಖಿಲ್ ಈಗ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ..!

ಬೆಂಗಳೂರು: ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾಗಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಹಾಗೂ ನಿಖಿಲ್ ಕುಮಾರ್ ಗೂ ಪಕ್ಷದಲ್ಲಿ ಉನ್ನತ ಸ್ಥಾನವನ್ನು ಜೆಡಿಎಸ್ ನೀಡಿದೆ. ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾಗಿ ಹಾಸನದ ಸಕಲೇಶಪುರ ಶಾಸಕ ಎಚ್.ಕೆ ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಹಾಗೂ ಯುವಘಟಕದ ರಾಜ್ಯಾಧ್ಯಕ್ಷರಾಗಿ ನಿಖಿಲ್ ಕುಮಾರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಜೆಡಿಎಸ್...

ಅಭಿಮಾನಿಗಳಿಗೆ ಡಿ-ಬಾಸ್ ಸವಾಲ್- ಚಾಲೆಂಜ್ ಸ್ವೀಕರಿಸಿ ಸೈ ಎನಿಸಿಕೊಳ್ತಾರಾ ಫ್ಯಾನ್ಸ್..!

ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಹಾಕ್ತೀನಿ ಮಧ್ಯಾಹ್ನದವರಗೂ ಕಾಯ್ತಾ ಇರಿ ಅಂತ ಹೇಳಿದ್ದ ದಚ್ಚು ಇದೀಗ ಅಭಿಮಾನಿಗಳಿಗೇ ಓಪನ್ ಚಾಲೆಂಜ್ ಹಾಕಿದ್ದಾರೆ. ತಾವು ಹೇಳಿದಂತೆ ಇದೀಗ ಫೇಸ್ ಬುಕ್ ಲೈವ್ ಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲೆಂಜ್ ಯಾರಿಗೆ ಅಂತ ಹೇಳಿದ್ರು. ದಚ್ಚು ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಆಡಿಯೋ ಲಾಂಚ್...

ದಳಪತಿಗಳ ಪಾದಯಾತ್ರೆಗೆ ನಿಖಿಲ್ ಸಾರಥಿ..!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ನಿಖಿಲ್ ಇದೀಗ ಪಕ್ಷದ ಬಹುಮುಖ್ಯ ಜವಾಬ್ದಾರಿಯನ್ನ ಹೊರಲಿದ್ದಾರೆ. ರಾಜ್ಯಾದ್ಯಂತ ಜೆಡಿಎಸ್ ಕೈಗೊಳ್ಳಲಿರೋ ಪಾದಯಾತ್ರೆಯ ನಾಯಕತ್ವವನ್ನು ನಿಖಿಲ್ ಕುಮಾರ್ ವಹಿಸಿಕೊಳ್ಳಲಿದ್ದಾರೆ. ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡು ಪಕ್ಷ ಸಂಘಟನೆಗೆ ಮಾಡಲು ಸಜ್ಜಾಗಿರೋ ಜೆಡಿಎಸ್ ಇದೀಗ ಸಕಲ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ 2 ಹಂತಗಳಲ್ಲಿ ನಡೆಯೋ ಜೆಡಿಎಸ್ ಪಾದಯಾತ್ರೆಯ ಉಸ್ತುವಾರಿ,...

‘ನಿಮ್ಮ ಮಗ ನಿಖಿಲ್ ಸೋತ ಸಿಟ್ಟನ್ನು ಜನರ ಮೇಲೆ ತೋರಿಸ್ತೀರಾ..?’- ಸಿಎಂಗೆ ಈಶ್ವರಪ್ಪ ಚಾಟಿ

ಬೆಂಗಳೂರು: ರಾಯಚೂರಿನಲ್ಲಿ ಗ್ರಾಮವಾಸ್ತವ್ಯದ ವೇಳೆ ಮೋದಿಗೆ ವೋಟ್ ಹಾಕಿ ನನಗೆ ಕೆಲಸ ಹೇಳ್ತೀರಾ ಅನ್ನೋ ಸಿಎಂ ಕುಮಾರಸ್ವಾಮಿ ಹೇಳಿಕೆ ಇದೀಗ ಬಿಜೆಪಿಗೆ ಅಸ್ತ್ರವಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡ ಈಶ್ವರಪ್ಪ ಸಿಎಂಗೆ ಚಾಟಿ ಬೀಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ನಿಮ್ಮ ಮಗ ನಿಖಿಲ್ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತು, ಹಾಸನದಲ್ಲಿ ಪ್ರಜ್ವಲ್ ರೇವಣ್ಣ...

ಸೋತು ಸುಮ್ಮನೆ ಕೂರದ ಜಾಗ್ವಾರ್- ಹಳೇ ಮೈಸೂರು ಭಾಗದಲ್ಲಿ ಪಾದಯಾತ್ರೆಗೆ ನಿಖಿಲ್ ಸ್ಕೆಚ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ವಿರುದ್ಧ ಹೀನಾಯವಾಗಿ ಸೋತಿದ್ದ ನಿಖಿಲ್ ಕುಮಾರ್ ಇದೀಗ ರಾಜಕೀಯದಲ್ಲಿ ಹೊಸ ಹುಮ್ಮಸ್ಸು ತೋರುತ್ತಿದ್ದಾರೆ. ಸೋತ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರೋ ನಿಖಿಲ್ ಇದೀಗ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಸಾಕಷ್ಟು ಪ್ರಾಬಲ್ಯವಿದ್ದರೂ ಮಂಡ್ಯದಲ್ಲಿ ಸೋಲನುಭವಿಸಿದ್ದ ನಿಖಿಲ್ ಕುಮಾರ್ ಗೆ ತೀವ್ರ ಮುಖಭಂಗವಾಗಿತ್ತು....

ಪ್ರಜ್ವಲ್,ನಿಖಿಲ್ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಲಿ- ರೇವಣ್ಣ ಹೇಳಿಕೆ

ಬೆಂಗಳೂರು: ನಿಖಿಲ್ ಹಾಗೂ ಪ್ರಜ್ವಲ್ ಗೆ ಈಗಾಗಲೇ ಸಾಕಷ್ಟು ಪ್ರಚಾರ ಸಿಕ್ಕಿದೆ, ಅವರು ತೆರೆ ಮರೆಗೆ ಸರಿಯೋದು ಸೂಕ್ತ ಅನ್ನೋ ವೈಎಸ್ ವಿ ದತ್ತಾ ಹೇಳಿಕೆಯನ್ನು ಸಚಿವ ಎಚ್.ಡಿ.ರೇವಣ್ಣ ಸಮರ್ಥಿಸಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ, ನಿಖಿಲ್ ಹಾಗೂ ಪ್ರಜ್ವಲ್ ಪಕ್ಷದ ಕಾರ್ಯಕರ್ತರಾಗಿ ದುಡಿಯಲಿ. ಹಾಗೆ ನೋಡಿದ್ರೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ನನನ್ನೇನು...
- Advertisement -spot_img

Latest News

KPSCಯಲ್ಲಿ ಮತ್ತೊಂದು ಹಗರಣ ಬಯಲು – 80 ಲಕ್ಷ ಕೊಟ್ರೆ ನೇರ ಸೀಟ್ ಸಿಗುತ್ತೇ!

ಕರ್ನಾಟಕ ಲೋಕಸೇವಾ ಆಯೋಗದ (KPSC) ಅಕ್ರಮಗಳ ಸರಣಿಗೆ ಕೊನೆಯೇ ಇಲ್ಲದಂತಾಗಿದ್ದು, ಅಭ್ಯರ್ಥಿಗಳ ಆಕ್ರೋಶ ಮುಗಿಲು ಮುಟ್ಟಿದೆ. ಇತ್ತೀಚೆಗಷ್ಟೇ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತಾದ ಬೆನ್ನಲ್ಲೇ,...
- Advertisement -spot_img