Sunday, April 20, 2025

Latest Posts

ತಸ್ತೀಕ್ ಹಣ ವಾಪಾಸ್ ಕೇಸ್: ತಹಶೀಲ್ದಾರರದ್ದೇ ತಪ್ಪು, ಕಣ್ಣನ್ ಅವರ ತಪ್ಪಿಲ್ಲವೆಂದ ಸಿಎಂ

- Advertisement -

Political News: ತಸ್ತೀಕ್ ಹಣ ವಾಪಸ್ ನೀಡುವ ಪ್ರಕರಣದಲ್ಲಿ, ತಹಶೀಲ್ದಾರರದ್ದೇ ತಪ್ಪಿದೆ ಕಣ್ಣನ್ ಅವರ ತಪ್ಪಿಲ್ಲವೆಂದು ಟ್ವೀಟ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಸ್ಥಾನದ ಅರ್ಚಕರಾದ ಹಿರೇಮಗಳೂರು ಕಣ್ಣನ್ ಅವರ ಮೇಲೆ ಹಣಕ್ಕೆ ಸಂಬಂಧಿಸಿದಂತೆ ಆರೋಪ ಬಂದಿತ್ತು. ಆದರೆ ಇದೀಗ, ಅವರಿಗೆ ಸುಮ್ಮನೆ ನೊಟೀಸ್ ನೀಡಲಾಗಿದೆ. ಅವರದ್ದೇನೂ ತಪ್ಪಿಲ್ಲ, ಸರ್ಕಾರದ ಬೊಕ್ಕಸಕ್ಕೆ ಲಾಭ ಮಾಡಲು ಹೋದ, ತಹಶೀಲ್ದಾರರದ್ದೇ ತಪ್ಪಿದೆ ಎಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.

ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಾಸು ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು, ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಕಳೆದ 10 ವರ್ಷಗಳಿಂದ ಕಣ್ಣನ್ ಅವರಿಗೆ ನೀಡಲಾದ 4,74,000 ತಸ್ತೀಕ್ ಹಣವನ್ನು ವಾಪಸ್ ನೀಡುವಂತೆ ತಹಶೀಲ್ದಾರ್, ನೊಟೀಸ್ ನೀಡಿದ್ದರು. ವರ್ಷಕ್ಕೆ 24 ಸಾವಿರ ರೂಪಾಯಿ ನೀಡಬೇಕಿತ್ತು. ಆದರೆ 90 ಸಾವಿರ ರೂಪಾಯಿ ನೀಡಲಾಗಿದೆ. ಇದು ತಹಶೀಲ್ದಾರ್ ಅವರಿಂದಲೇ ನಡೆದ ಎಡವಟ್ಟಾಗಿದ್ದು, ಸರ್ಕಾರಕ್ಕೆ ಬರಬೇಕಾದ ಹಣವನ್ನು ತಹಶೀಲ್ದಾರ್‌ರಿಂದಲೇ ಪಡೆಯುತ್ತೇವೆ ಎಂದು ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಅದೇ ರೀತಿ ಹೇಳಿದ್ದಾರೆ.

ಅನ್ಯಾಯದ ಕಾಡ್ಗಿಚ್ಚನ್ನು ಆರಿಸಿ, ನ್ಯಾಯದ ಹಣತೆ ಬೆಳಗುವ ವರೆಗೆ ನಾವು ವಿರಮಿಸುವುದಿಲ್ಲ: ಸಿಎಂ

ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ಜ. 27, 28ರಂದು ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ

ರಾಮನು ಎಲ್ಲರಿಗೂ ಸೇರಿದವನು, ಆತ ಯಾರ ಆಸ್ತಿಯೂ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

 

- Advertisement -

Latest Posts

Don't Miss