Friday, June 20, 2025

Latest Posts

ಸರಣಿ ಬಾಂಬ್ ಸ್ಪೋಟ ಪ್ರಕರಣದ ಉಗ್ರನನ್ನ ಕರೆತಂದ ಸಿಸಿಬಿ ಅಧಿಕಾರಿಗಳು

- Advertisement -

ದೇವನಹಳ್ಳಿ: ಸರಣಿ ಬಾಂಬ್ ಸ್ಪೋಟ ಪ್ರಕರಣದ ಉಗ್ರನನ್ನ ಸಿಸಿಬಿ ಅಧಿಕಾರಿಗಳು ಕರೆತಂದಿದ್ದಾರೆ. 2008ರಲ್ಲಿ ಸರಣಿ ಬಾಂಬ್ ಸ್ಪೋಟದ ಉಗ್ರ ಶೋಯಬ್‌ನನ್ನು ಕೇರಳದ ಕೊಚ್ಚಿನ್‌ನಿಂದ ಕೆಐಎಎಲ್‌ಗೆ ಕರೆತರಲಾಗಿದೆ. ಅಲ್ಲದೇ, ಕೆಐಎಎಲ್‌ನಿಂದ ಎಫ್ಎಸ್ಎಲ್‌ಗೆ ಜೀಪ್ನಲ್ಲಿ ರವಾನಿಸಲಾಗಿದೆ.

ಬಾಂಬ್ ಸ್ಪೋಟದ ಬಳಿಕ ಉಗ್ರ ಶೋಯಬ್, ಕಣ್ಮರೆಸಿಕೊಂಡಿದ್ದ. ಬರೋಬ್ಬರಿ 12 ವರ್ಷಗಳ ನಂತರ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಆತನನ್ನ ಬಂಧಿಸಿ ಕರೆತಂದಿದ್ದಾರೆ.

ಬೆಳಗ್ಗೆ 06:40 ರ ಇಂಡಿಗೋ ವಿಮಾನದಲ್ಲಿ ಕೇರಳದಿಂದ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
.ನಾಗೇಂದ್ರ, ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss