Political News: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚು ಸೀಟು ಸಿಗದ ಕಾರಣ ನಟ, ಸುನೀಲ್ ಲಾಹಿರಿ ಆಕ್ರೋಶ ಹೊರಹಾಕಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ಸುನೀಲ್, ಲೋಕಸಭೆ ಫಲಿತಾಂಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ಸದಾ ರಾಜನಿಗೆ ದ್ರೋಹವೇ ಆಗಿದೆ. ಈ ಚುನಾವಣೆಯಲ್ಲಿ ನನ್ನಿಷ್ಟದ ಇಬ್ಬರು ವ್ಯಕ್ತಿಗಳು ಗೆದ್ದಿದ್ದಾರೆ. ಜೈ ಶ್ರೀರಾಮ್. ನಾನು ನಿಮಗೆ ಯಾವಾಗಲೂ ಓಟ್ ಮಾಡಿ ಎನ್ನುತ್ತಿದೆ. ಆದರೆ ಈಗ ನೋಡಿ, ಬಹುಮತವಿಲ್ಲದೇ, ಬಿಜೆಪಿ ಸರ್ಕಾರ ರಚಿಸುವಂತಾಗಿದೆ. ಈ ಸರ್ಕಾರ 5 ವರ್ಷ ಇರಬಹುದೇ ಎಂದು ಸುನೀಲ್ ಪ್ರಶ್ನಿಸಿದ್ದಾರೆ.
ಅಲ್ಲದೇ, ಅಯೋಧ್ಯೆಯ ಪ್ರಜೆಗಳು ರಾಮಾಯಣ ಕಾಲದಿಂದರೂ ರಾಜನಿಗೆ ದ್ರೋಹ ಮಾಡುತ್ತಿದ್ದಾರೆ. ಇವರಿಗೆ ನಾವು ಸ್ವಾರ್ಥಿಗಳು ಎನ್ನಬಹುದು. ನಾಚಿಕೆಯಾಗಬೇಕು ಎಂದು ಅಯೋಧ್ಯೆ ಜನರ ವಿರುದ್ಧ ಸುನೀಲ್ ಕಿಡಿಕಾರಿದ್ದಾರೆ.
ನಾನು ಕುಪ್ಪುಸ್ವಾಮಿ ಮಗ, ಕರುಣಾನಿಧಿ ಮಗ ಆಗಿದ್ದರೆ ಗೆಲ್ಲುತ್ತಿದ್ದೆ: ಸೋತರೆಂದು ಟೀಕಿಸಿದವರಿಗೆ ಅಣ್ಣಾಮಲೈ ತಿರುಗೇಟು