ಕಾಡಾನೆಗೆ ಎಸ್ಕಾರ್ಟ್ ಮಾದರಿ ಭದ್ರತೆ ಮಾಡಿಕೊಟ್ಟ ಅರಣ್ಯ ಇಲಾಖೆ..

ಹಾಸನ: ಸಕಲೇಶಪುರದ ಉದೇವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಅರಣ್ಯ ಇಲಾಖೆಯ ವಾಹನ ಆನೆಯ ಮುಂಭಾಗ ಧ್ವನಿವರ್ಧಕದ ಮೂಲಕ ಜನರಿಗೆ ತಿಳುವಳಿಕೆ ನೀಡುತ್ತಾ ಸಾಗುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗಿದೆ.

ಒಂದೆಡೆ ಅರಣ್ಯ ಇಲಾಖೆ ಧ್ವನಿ ವರ್ಧಕದ ಮೂಲಕ ಎಷ್ಟೇ ಪ್ರಚಾರ ನೀಡಿದರೂ ಸಹ ಸಾರ್ವಜನಿಕರು ಮಾತ್ರ ಆನೆಯ ಹಿಂದೆಯೇ ನಡೆದುಕೊಂಡು ಬಂದಿದ್ದು ಮಲೆನಾಡು ಭಾಗದಲ್ಲಿ ಜನರಿಗೆ ಕಾಡಾನೆಗಳ ಭಯವಿಲ್ಲದಂತೆ ಕಂಡುಬಂದಿದ್ದು ವಿಪರ್ಯಾಸ.

ಕೆಲವರು ಈ ವಿಡಿಯೋವನ್ನು ಟ್ರೊಲ್ ಮಾಡಿದ್ದು ಕಾಡಾನೆ ಸಂಚರಿಸಲು ಅರಣ್ಯ ಇಲಾಖೆಯು ಎಸ್ಕಾರ್ಟ್ ರೀತಿ ಕಾರ್ಯನಿರ್ವಹಿಸಿದೆ ಎಂದು ಅಣಕಿಸಿದ್ದಾರೆ.

‘ಕಾಫಿಬೆಳೆಗಾರರಿಗೆ ಹೊಸವರ್ಷಕ್ಕೆ ಬಿಜೆಪಿ ಸರ್ಕಾರ ಉಡುಗೊರೆ ನೀಡಲಿದೆ’

ದಾನ-ಧರ್ಮ, ಪೂಜೆ ಪುನಸ್ಕಾರ ಮಾಡಿದ್ದರೂ ಜನಕರಾಜ ನರಕಕ್ಕೆ ಹೋದ.. ಯಾಕೆ ಗೊತ್ತಾ..?

About The Author