Sunday, September 8, 2024

Latest Posts

ನಿರ್ಮಿತ ಕೇಂದ್ರದ ಯೋಜನಾಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತರು

- Advertisement -

Dharwad News: ಧಾರವಾಡ: ಬೆಳಗಾವಿ ನಿರ್ಮಿತ ಕೇಂದ್ರದ ಯೋಜನಾಧಿಕಾರಿ ನಡೆಸುತ್ತಿರುವ ಪಿಜಿಗಳ ಮೇಲೆ ಲೋಕಾಯುಕ್ತರು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಬೆಳಗಾವಿ ನಿರ್ಮಿತ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಎಂಬುವವರು ಧಾರವಾಡದ ರಾಧಾಕೃಷ್ಣ ನಗರ ಹಾಗೂ ಕೆಸಿಡಿ ಬಳಿ ಎರಡು ಪಿಜಿಗಳನ್ನು ನಡೆಸುತ್ತಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪಿಜಿಗಳ ಮೇಲೆ ದಾಳಿ ನಡೆಸಿದ್ದಾರೆ.

ಈ ಯೋಜನಾಧಿಕಾರಿ ಧಾರವಾಡ ಹಾಗೂ ಕೊಪ್ಪಳದಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಎರಡೂ ಕಡೆಗಳಲ್ಲಿ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಳ್ಳಾವರ ರಸ್ತೆಯಲ್ಲಿರುವ ವರವ ನಾಗಲಾವಿ ಬಳಿ 6 ಎಕರೆ ಜಮೀನು ಹೊಂದಿರುವ ಶೇಖರಗೌಡ ಅಲ್ಲಿ ಫಾರ್ಮ್ ಹೌಸ್ ಕೂಡ ನಿರ್ಮಿಸಿದ್ದಾರೆ.

- Advertisement -

Latest Posts

Don't Miss