ಹಾಸನ : ಹಾಸನದ ಮಸೀದಿಯೊಂದರಲ್ಲಿ ಕಳ್ಳತನವಾಗಿದ್ದು, ಮಸೀದಿಗೆ ನುಗ್ಗಿರುವ ಕಳ್ಳ, ಕಂಪ್ಯೂಟರ್ ಮತ್ತು ಕ್ಯಾಮೆರಾ ಹೊತ್ತೊಯ್ದಿದ್ದಾನೆ.
ಹಾಸನ ನಗರದ, ಶರೀಫ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಖುಬಾ ಮಸೀದಿಯಲ್ಲಿ ಕಳ್ಳತನವಾಗಿದೆ. ಮಸೀದಿಯ ಮುಖ್ಯದ್ವಾರದ ಬೀಗ ಮುರಿದು, ಹುಂಡಿ ಕದಿಯಲು ಪ್ರಯತ್ನಿಸಿದ್ದು, ಕಳ್ಳತನದ ದೃಶ್ಯ, ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಾದ ಬಳಿಕ, ಕಳ್ಳ ಮಸೀದಿಯ ಕಚೇರಿ ಬೀಗ ಮುರಿದು, ಒಳನುಗ್ಗಿದ್ದು, ಕಂಪ್ಯೂಟರ್ ಮತ್ತು ಕೆನೆನ್ ಕ್ಯಾಮೆರಾ ಕದ್ದೊಯ್ದಿದ್ದಾನೆ.
ಕಳ್ಳತನದ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ಇದೇ ಮಸೀದಿಯಲ್ಲಿ ಮೂರನೇ ಬಾರಿ ಕಳ್ಳತನ ನಡೆದಿದೆ. ರಾತ್ರಿ ಮಳೆ ಬರುತ್ತಿದ್ದ ಕಾರಣ ಪ್ರಮುಖ ಪತ್ರಿಕೆಯ ಛಾಯಾಗ್ರಾಹಕ ಕ್ಯಾಮೆರವನ್ನು ಮಸೀದಿಯ ಕಚೇರಿಯಲ್ಲಿಟ್ಟಿದ್ದ. ಇದನ್ನು ಅರಿತಿದ್ದ ಕಳ್ಳ, ಕಳ್ಳತನ ಮಾಡಲು ಟೂಲ್ಸ್ ಸಮೇತ ಬಂದಿದ್ದಾನೆ. ಮತ್ತು ಸುಮಾರು ಮೂರು ಲಕ್ಷ ರೂ ಬೆಲೆ ಬಾಳುವ ಕಂಪ್ಯೂಟರ್, ಕೆಮೆರಾ ಕಳುವು ಮಾಡಿದ್ದಾನೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾಂಗ್ರೆಸ್ ಆಡಳಿತದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಅಶ್ವತ್ಥನಾರಾಯಣ್
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವತಿ ಸಾವಾಗಿದೆ : ಬಸವರಾಜ ಬೊಮ್ಮಾಯಿ