Saturday, July 27, 2024

Latest Posts

ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಶಾಕ್- ಜೂನ್ ನಿಂದ ಬಸ್ ಟಿಕೆಟ್ ದರ ಏರಿಕೆ… !

- Advertisement -

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಇದೀಗ ಬಸ್ ಪ್ರಯಾಣದರವನ್ನ ಏರಿಕೆ ಮಾಡಲು ಚಿಂತನೆ ಮಾಡಿದ್ದು, ಜೂನ್ ತಿಂಗಳಿನಿಂದ ನೂತನ ಬೆಲೆ ಜಾರಿಗೆ ಬರಲಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಪ್ರಯಾಣದರ ಇನ್ನು ಮುಂದೆ ಹೆಚ್ಚಳವಾಗಲಿದೆ. ಈ ಬಗ್ಗೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಕೆಲದಿನಗಳ ಹಿಂದೆ ಶೇ.18 ರಷ್ಚು ದರ ಏರಿಕೆ ಮಾಡಲು ಸಾರಿಗೆ ಇಲಾಖೆ ಸಿಎಂ ಕುಮಾರಸ್ವಾಮಿಗೆ ಅರ್ಜಿ ಸಲ್ಲಿಸಿತ್ತು. ಆದ್ರೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದರಿಂದ ಸಾರಿಗೆ ಇಲಾಖೆಯ ಈ ಪ್ರಸ್ತಾವನೆ ಕುರಿತಾದ ತೀರ್ಮಾನ ಕೈಗೊಳ್ಳಲಾಗಿರಲಿಲ್ಲ. ಇದೀಗ ಜೂನ್ ತಿಂಗಳಿನಿಂದ ಪರಿಷ್ಕೃತ ದರ ಜಾರಿಯಾಗಲಿದ್ದು. ಒಂದು ವೇಳೆ ಇಲಾಖೆ ಪ್ರಸ್ತಾವನೆಯಂತೆ ದರ ನಿಗದಿಪಡಿಸಿದ್ರೆ ಪ್ರಯಾಣಿಕರ ಮೇಲೆ ಹೊರೆಯಾಗಲಿದೆ.

ಧರ್ಮಸ್ಥಳ ಆಯ್ತು ಈಗ ಸಿದ್ಧಗಂಗಾ ಮಠ….. ! ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ತಪ್ಪದೇ ನೋಡಿ.

https://www.youtube.com/watch?v=IpBhsrbDmrI
- Advertisement -

Latest Posts

Don't Miss