- Advertisement -
ಕರ್ನಾಟಕ ಟಿವಿ : ಶಿವಮೊಗ್ಗದಲ್ಲಿ ಇಂದು ಟಿವಿ ಭಾರತ್ ಚಾನಲನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಿದರು. ಜೈಲ್ ರಸ್ತೆಯಲ್ಲಿ ಇರುವ ಟಿವಿ ಭಾರತ್ ಕಚೇರಿಯ ಮುಂಭಾಗದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಲ್ ಇ ಡಿಯಲ್ಲಿ ವಿಟಿ ಪ್ಲೇ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಸಂಸದರಾದ ಬಿ.ವೈ.ರಾಘವೇಂದ್ರ, ಶಾಸಕರಾದ ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಟಿವಿ ಭಾರತ್ ಮುಖ್ಯ ಸಂಪಾದಕ ಆರ್.ಎಸ್.ಹಾಲಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು.
- Advertisement -