Friday, June 20, 2025

Latest Posts

ರಾಯರ ಮಠದಲ್ಲಿ ರೆಡ್ಡಿ ಹೇಳಿದ್ದೇನು..?

- Advertisement -

www.karnatakatv.net : ಮಂತ್ರಾಲಯ : ಶ್ರೀ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ರಾಯರ ಮಠಕ್ಕೆ ದರ್ಶನ ಪಡೆಯಲು ಮಾಜಿ ಸಚಿವ ಜನಾರ್ಧನ ರೆಡ್ಡಿ ಭೆಟಿ ನೀಡಿದ್ರು.  

ಮಾದ್ಯಮಗಳೊಂದಿಗೆ‌ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಲಿಯುಗದ ಕಾಮಧೇನು ಕಲ್ಪವೃಕ್ಷ, ಗುರು ರಾಯರ 350 ನೇ ಆರಾಧನೆಯಲ್ಲಿ ರಾಯರ ದರ್ಶನ ನನಗೆ ಮತ್ತು ನನ್ನ ಕುಟುಂಬಕ್ಕೆ ದೊರೆತಿರುವುದು ಪೂರ್ವ ಜನ್ಮದ‌ ಸುಕೃತ ಪುಣ್ಯ,  ನನ್ನ ಕುಟುಂಬದ ವಿಚಾರದಲ್ಲಿ ಅನೇಕ ರಾಯರ ಪವಾಡಗಳು ನಡೆದಿರುವುದನ್ನ ಮಾತಿನಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ‌, ಹತ್ತು ವರ್ಷಗಳ ಬಳಿಕ ನನ್ನ ಹುಟ್ಟೂರಿಗೆ ನಾನು ಬರಲಿಕ್ಕೆ, ವನವಾಸವನ್ನ ಮುಗಿಸಿ ಬರುವುದಕ್ಕೆ ರಾಯರ ಕೃಪೆ ಅನುಗ್ರಹವೇ ಕಾರಣ ಅಂತ ಹೇಳಿದ್ರು.

ಅನೀಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss