Friday, June 20, 2025

Latest Posts

ಇಂಡಿಯಾ ಘಟಬಂಧನದ ಅಸ್ತಿತ್ವ ಎಲ್ಲಿದೆ..? ತೋರಿಸೋಕಷ್ಟೆ ಇದೆ: ಪ್ರಹ್ಲಾದ್ ಜೋಶಿ ವ್ಯಂಗ್ಯ..

- Advertisement -

Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಾಡಿನ ಜನತೆಗೆ ಸಂಕ್ರಾಂತಿ ಶುಭಾಶಯ ತಿಳಿಸಿದ್ದಾರೆ.

ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆ ಮಾತನಾಡೋಣ. ದೇಶಾದ್ಯಂತ ರಾಮ ಮಂದಿರ ಸಂಭ್ರಮ ಮುಗಿಲು ಮುಟ್ಟುತ್ತಿದೆ. ಸಮೀಪದ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ಕರೆ ನೀಡಿದ್ದಾರೆ. ಇದಕ್ಕೆ ಲಕ್ಷಾಂತರ ದೇವಸ್ಥಾನಗಳಲ್ಲಿ ಈ ಕಾರ್ಯಕ್ರಮ ನಡೀತಾ ಇದೆ. ರಾಮ ಮಂದಿರ ಉದ್ಘಾಟನೆ ರಾಮ ರಾಜ್ಯ ಕನಸಿನತ್ತ ಪ್ರಯತ್ನ ಮಾಡಬೇಕಿದೆ ಎಂದು ಜೋಶಿ ಹೇಳಿದ್ದಾರೆ.

ರಾಮ ಮಂದಿರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ರಾಜಕಾರಣ ಯಾರು ಮಾಡ್ತಾ ಇದ್ದಾರೆ ಅಂತಾ ಎಲ್ಲಾರಿಗೂ ಗೊತ್ತಿದೆ. ಎಲ್ಲರಿಗೂ ಆಹ್ವಾನವನ್ನು ಕೊಟ್ಟಿತು, ಸಹಜವಾಗಿ ಬಂದಿದ್ರೆ ಯಾವ ಚರ್ಚೆನೂ ಆಗ್ತಿರ್ಲಿಲ್ಲ. ಎಲ್ಲಿ ಓಟ್ ಸಿಗುತ್ತೆ ಅಲ್ಲಿ ಹೋಗುವ ವಿಚಾರ ಕಾಂಗ್ರೆಸ್ ನದ್ದು. ಜವಾಬ್ದಾರಿಯುತ ಸ್ಥಾನದಲ್ಲಿರುವಂತವರು ಆ ರೀತಿ ಮಾತನಾಡಬಾರದು. ಅಲ್ಲಿ ಹೋದರೆ ಈ ವರ್ಗದ ಮತಗಳು ನಮಗೆ ನಷ್ಟ ಆಗಬಹುದು ಅಂತ ವಿಚಾರ ಮಾಡ್ತಿದ್ದಾರೆ. ನೀವು ರಾಜಕಾರಣ ಮಾಡ್ತಾ ಇದ್ದಿರಿ ಕಾಂಗ್ರೆಸ್ಸಿಗರೇ. ನಾನು ಅಥವಾ ಯಾವುದೇ ಪ್ರಮುಖ ನಾಯಕರು ಆ ರೀತಿ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ನವರು ಬಂದ್ರೆ ಸಂತೋಷ, ಆದ್ರೆ ಬಂದಿಲ್ಲ ಅಂದ್ರೆ ಓಕೆ. ಕೊತ್ವಾಲ್ ಚೋರ್ ಕೋ ಡಾಟಾ ಎಂಬ ಗಾದೆ ಮಾತಿನಂತೆ. ಇದಕ್ಕೆ ನಾವು ಪ್ರತಿಕ್ರಿಯೆ ನೀಡ್ತಿಲ್ಲ, ಜನ ನೀಡ್ತಾ ಇದ್ದಾರೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳ ಮಸೀದಿ ನಿರ್ನಾಮದ ಬಗ್ಗೆ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ಒಳ್ಳೆ ವಾತಾವರಣದಲ್ಲಿ ರಾಮ ಮಂದಿರ ಉದ್ಘಾಟನೆ ಆಗಬೇಕು. ಇಂತಹ ವಿವಾದಾತ್ಮಕ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳುವ ಮೂಲಕ, ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಲು ಜೋಶಿ ನಕಾರ ಮಾಡಿದ್ದಾರೆ.

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಸರ್ಕಾರದ ತುಷ್ಟಿಕರಣ ರಾಜಕಾರಣ ಇದರಲ್ಲಿ ಸ್ಪಷ್ಟವಾಗಿ ಎದ್ದು ಕಾಣ್ತಿದೆ. ಸಿದ್ದರಾಮಯ್ಯ ಅವರು ನೈತಿಕ ಪೊಲೀಸ್ ಗಿರಿ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡಿದರು. ಹುಡುಗಿಯ ರೇಪ್ ಆಗಿದೆ, ಅದಕ್ಕೆ ಕಂಪ್ಲೇಂಟ್ ಕೊಟ್ಟಿದ್ದಾಳೆ. ಸರ್ಕಾರದ, ಪೊಲೀಸರ, ಗೃಹ ಮಂತ್ರಿಗಳ ಧೋರಣೆ ನೈತಿಕ ಪೊಲೀಸಗಿರಿ. ಇದನ್ನೆಲ್ಲಾ ನೋಡಿದ್ರೆ ಸರ್ಕಾರ ಯಾರನ್ನೋ ರಕ್ಷಿಸಲು ಹೊರಟಿದೆ ಅನ್ನೋದು ಸ್ಪಷ್ಟವಾಗಿ ಕಾಣ್ತಿದೆ. ದಕ್ಷ ಅಧಿಕಾರಿಗಳನ್ನು ನೇಮಿಸಿ, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದೆ ಅನ್ಯಜಾತಿ ಅವರು ಮಾಡಿದ್ರೆ ಇದು ದೊಡ್ಡದಾಗುತ್ತಿತ್ತು. ಆಕೆ ನಮ್ಮ ಸಮುದಾಯದವರೇ ಮಾಡಿದ್ದಾರೆ ಅಂತ ಸ್ಪಷ್ಟವಾಗಿ ಹೇಳಿದ್ದಾಳೆ. ಇದರಲ್ಲಿ ತುಷ್ಠಿಕರಣ ರಾಜಕಾರಣ ವಾಸನೆ ಇದೆ. ಅಪರಾಧಿಗಳು ಯಾವುದೇ ಜಾತಿ ಇರಲಿ ಅಪರಾಧಿಗಳು ಅಪರಾಧಿಗಳೇ. ಸರ್ಕಾರ ತಮ್ಮ ನಿಯತ್ತನ್ನು ಇದರಲ್ಲಿ ತೋರಿಸಲಿ ಎಂದು ಜೋಶಿ ಹೇಳಿದ್ದಾರೆ.

ಇನ್ನು ಕಾಂಗ್ರೆಸ್‌ನ ಐಎನ್‌ಡಿಐಎ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ಇಂಡಿಯಾ ಘಟಬಂಧನದ ಅಸ್ತಿತ್ವ ಎಲ್ಲಿದೆ..? ತೋರಿಸೋಕಷ್ಟೆ ಇದೆ. ಮಹಾರಾಷ್ಟ, ಯುಪಿ, ಪಶ್ಚಿಮ ಬಂಗಾಳದಲ್ಲಿ ಜಗಳ ಆಡುತ್ತಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಇದೆ. ಗಮಂಡಿ ಘಟಬಂಧನದಲ್ಲಿದ್ದವರೇ ಹೇಳಿಕೆ ನೀಡ್ತಾರೆ. ಕಮ್ಯುನಿಸ್ಟ್ ಸರ್ಕಾರ ನಮ್ಮ ಮೇಲೆ ಅತ್ಯಾಚಾರ ಮಾಡ್ತಾ ಇದೆ ನಮ್ಮ ಕಾರ್ಯಕರ್ತರನ್ನ ಹೊಡಿತ ಇದ್ದಾರೆ ಅಂತಾರೆ. ನಿಮ್ಮಲ್ಲೇ ಹೊಂದಾಣಿಕೆ ಇಲ್ಲ. ಮನೆ ಮುರುಕ ಘಟಬಂಧನದಲ್ಲಿ ಸೋತರೆ ಗಾಂಧಿ ಕುಟುಂಬದ ಮೇಲೆ ಬರಬಾರದು ಅನ್ನೋ ಕಾರಣಕ್ಕೆ ಖರ್ಗೆ ಅವರನ್ನ ಬಲಿ ಕೊಡುವ ಪ್ರಯತ್ನ ಇದು ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

ಒಕ್ಕೂಟದಿಂದ ಮಮತಾ ಬ್ಯಾನರ್ಜಿ ಹೊರ ಬರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ಅವರಲ್ಲೇ ಹೊಂದಾಣಿಕೆ ಇಲ್ಲಾ. ಕಾಂಗ್ರೆಸ್ ಅವರು ಯಾವ ಸ್ಥಿತಿಗೆ ಬಂದಿದ್ದಾರೆ ಅಂದ್ರೆ. ಕಾಂಗ್ರೆಸ್ ಪ್ರಮುಖರೊಬ್ಬರೂ ಹೇಳಿದ್ರು ಯುಪಿ ನಲ್ಲಿ ಎರಡೇ ಟಿಕೆಟ್ ಕೊಡಲಿ ಆಲೆನ್ಸ್ ಮಾಡ್ಕೊಟ್ಟಿವಿ ಅಂತಾರೆ. ಆದ್ರೆ ಅವರು ಸೋಲೋದಂತೂ ಗ್ಯಾರೆಂಟಿ, ಜಗ್ಗೇಶ್ ಅವರ ಬಾಷೆಯಲ್ಲಿ ಹೇಳೋದಾದ್ರೆ ಢಮಾರ್ ಆಗೋದು ಗ್ಯಾರಂಟಿ. ಅದಕ್ಕೆ ಇವರನ್ನು ಬಲಿ ಕೊಡ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಭಾರತ ಜೋಡೊಗೆ ಬಿಜೆಪಿ ಅನುಮತಿ ನೀಡಿಲ್ಲ ಎಂಬ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಮಣಿಪುರದಲ್ಲಿ ಅಲ್ಲಿನ ಸರ್ಕಾರ ಅನುಮತಿ ಕೊಟ್ಟಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಉತ್ತರ ಕೊಟ್ಟಿದೆ. ರಾಹುಲ್ ಗಾಂಧಿ ಪ್ರಚಾರ ಮಾಡದೇ ಇರೋದೇ ದುರ್ದೈವ ಅಂದಿದ್ದೆ . ಅವರು ಹೆಚ್ಚು ಓಡಾಡದೇ ಇರೋದೇ ಒಳ್ಳೇದು. ಎಲ್ಲೆಲ್ಲಿ ಹೋಗ್ತಾರೆ ಅವರು ಏನು ಅಂತಾ ಜನ ನೋಡ್ತಾರೆ. ಅವರಿಗೆ ಎಲ್ಲಾ ವ್ಯವಸ್ಥೆಯನ್ನು ನಾವು ಮಾಡ್ತೇವೆ. ಜಗದೀಶ್ ಶೆಟ್ಟರ್ ಘರ್ ವಾಪಸ್ಸಿ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಮಾಡಿಲ್ಲ, ನನಗೆ ಅದು ಸಂಬಂಧನೂ ಇಲ್ಲ ಎಂದು ಜೋಶಿ ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ಮಾತು..

ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ: ಬಿ.ವೈ.ವಿಜಯೇಂದ್ರ

‘ಮಂಜೂರಾಗಿದ್ದ ಅನುದಾನ ವಾಪಸ್ ಪಡೆಯುವಂತೆ ಪತ್ರ ಬರೆದ ಸರ್ಕಾರದ್ದು ಯಾವ ಸೀಮೆ ರಾಜಕೀಯ..?’

- Advertisement -

Latest Posts

Don't Miss