Hubballi News: ಹುಬ್ಬಳ್ಳಿ: ಕರ ಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ ಅಧಿಕಾರಿಯ ಅಮಾನತ್ತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಶಹರ ಠಾಣೆಯ ಇನ್ಸ್ಪೆಕ್ಟರ್ ಎಂ.ಎಂ ತಹಶೀಲ್ದಾರ್ ಅವರೇ ಕರ ಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ ಅಧಿಕಾರಿ. ಸರ್ವಧರ್ಮ ಸಮನ್ವಯತೆ ಮೈಗೂಡಿಸಿಕೊಂಡಿರುವ ಮಹಮ್ಮದ್ ರಫೀಕ್ ತಹಶೀಲ್ದಾರರ ಜೀವನ ಶೈಲಿ ಸಂಪೂರ್ಣ ಹಿಂದೂಮಯವಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಹಳ್ಳಿ ಮೂಲದವರಾದ ಎಂ.ಎಂ.ತಹಶೀಲ್ದಾರ್, ಬನಶಂಕರಿ ದೇವಿಯ ಆರಾಧಕರು. ಮುಸ್ಲಿಂ ಕುಟುಂಬದಲ್ಲಿ ಜನಸಿದ್ರೂ ಮನೆಯಲ್ಲಿ ಎಲ್ಲಾ ಹಿಂದೂ ಹಬ್ಬಗಳನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಗಣೇಶೋತ್ಸವ ವೇಳೆ ಗಜಾನನ ವಿಗ್ರಹ ಪ್ರತಿಷ್ಟಾಪಿಸಿ, ಹಣೆಗೆ ತಿಲಕವಿನ್ನಿಟ್ಟುಕೊಂಡು ಹಬ್ಬವನ್ನು ಆಚರಣೆ ಮಾಡುತ್ತಾರೆ.
ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಅಧಿಕಾರಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಿರಲಿಲ್ಲ. ಎಂ.ಎಂ.ತಹಶೀಲ್ದಾರ್ ಅಲ್ಲಿಗೆ ಹೋದ ಬಳಿಕ ಗಣೇಶ ಪ್ರತಿಷ್ಠಾಪನೆ ಮಾಡಲು ಆರಂಭಿಸಲಾಯ್ತು. ಹಿಂದೂಗಳ ಪ್ರತಿಯೊಂದು ಹಬ್ಬವನ್ನು ಇವರ ಮನೆಯಲ್ಲಿ ಆಚರಣೆ ಮಾಡಲಾಗುತ್ತದೆ. ಇನ್ಸ್ಪೆಕ್ಟರ್ ಎಂಎಂ ತಹಶೀಲ್ದಾರ್ ಹಿಂದೂ ವಿರೋಧಿ ಎಂದು ಆರೋಪಿಸಿರುವ ಬಿಜೆಪಿ ಅಧಿಕಾರಿಯ ಅಮಾನತ್ತಿಗೆ ಆಗ್ರಹಿಸಿದೆ.
‘ಇಂಥವರನ್ನು ಬಂಧಿಸದೇ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ’
ಮಹಿಳೆಗೆ ನೆರವು: ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ ಸಚಿವ ಸಂತೋಷ್ ಲಾಡ್