Sunday, June 1, 2025

Latest Posts

‘ಮುಖ್ಯಮಂತ್ರಿ ಆಗೋದಕ್ಕೆ ನಮ್ಮ ಪಕ್ಷವನ್ನು ಯಾಕೆ ಒಡೆಯುವುದಕ್ಕೆ ಹೋಗ್ತೀರಿ..?’

- Advertisement -

Hassan Political News: ಹಾಸನ : ಹಾಸನದಲ್ಲಿ ನಡೆಯುತ್ತಿರುವ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದ ಬಳಿಕ, ಎಂಎಲ್‌ಸಿ ಬೋಜೇಗೌಡರು, ಮಾಧ್ಯಮದವರೊಂದಿಗೆ ಮಾತನಾಡಿದರು.

ಜೆಡಿಎಸ್ ಶಾಸಕರ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು,  ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕರ ಸಭೆ ನಡೆಯುತ್ತೆ. ಮಾಜಿ ಶಾಸಕರು ಮಾಜಿ ಸಚಿವರು ಹಾಗೂ ಶಾಸಕರು, ಹಾಸನದಲ್ಲಿ ಎಂಟನೇ ತಾರೀಕು ಸೇರಲಿದ್ದೇವೆ. ಹಾಸನಾಂಬ ದೇವಸ್ಥಾನದ ದರ್ಶನ ಮಾಡಿ ಶಾಸಕರ ಸಭೆ ಸೇರಲಿದ್ದೇವೆ. ಹಾಲಿ ೧೯ ಶಾಸಕರು ಸೇರಿದಂತೆ ಎಲ್ಲರು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.

ಡಿಕೆಶಿ ಸಿಎಂ ಆಗೋದಾದ್ರೆ ನಾವು ಬೆಂಬಲ ಕೊಡುತ್ತೇವೆ ಅನ್ನೋ ಹೆಚ್ಡಿಕೆ ಹೇಳಿಕೆ ವಿಚಾರದ ಬಗ್ಗೆ ಬೋಜೇಗೌಡ ಮಾತನಾಡಿದ್ದು, ಮುಖ್ಯಮಂತ್ರಿ ಆಗೋದಕ್ಕೆ ನಮ್ಮ ಪಕ್ಷವನ್ನು ಯಾಕೆ ಒಡೆಯುವುದಕ್ಕೆ ಹೋಗ್ತೀರಿ..? ನಾವೇ ಬೆಂಬಲ ಕೊಡುತ್ತೇವೆ ಅಂತ ಹೇಳಿದ್ದಾರೆ. ಇದನ್ನು ವ್ಯಂಗ್ಯವಾಗಿ ಬೇಕಾದ್ರು ತೆಗೆದುಕೊಳ್ಳಲಿ. ಅಥವಾ ಹೇಳಿಕೆ ಅನ್ನೋ ತರ ತೆಗೆದುಕೊಳ್ಳಲಿ ಎಂದಿದ್ದಾರೆ.

ಇನ್ನು ಶಿವಮೊಗ್ಗದಲ್ಲಿ ಬಾಕ್ಸ್ ಪತ್ತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೋಜೇಗೌಡ, ಈ ಬಾಕ್ಸ್ ಗಳು ಬಾಂಗ್ಲಾದಿಂದ ಬಂದಿದೆ ಎಂದು ಹೇಳುತ್ತಿದ್ದಾರೆ. ತನಿಖೆ ನಡೆಯುತ್ತಿದೆ ತನಿಖಾ ಅಧಿಕಾರಿಗಳು ಚುರುಕು ಆಗಿದ್ದಾರೆ ಮಾಡುತ್ತಾರೆ.  ಈ ತರ ಶಿವಮೊಗ್ಗದಲ್ಲಿ ನಡೆಯುತ್ತಿರುತ್ತವೆ. ನೋಡೊಣ ತನಿಖೆ ಹೇಗೆ ಮಾಡುತ್ತಾರೆ ಎಂದು ಹಾಸನದಲ್ಲಿ ಜೆಡಿಎಸ್ ಎಂಎಲ್‌ಸಿ ಬೋಜೇಗೌಡ ಹೇಳಿದರು.

ದಾಖಲೆ ಇಲ್ಲದೇ 50ಲಕ್ಷ ರೊಕ್ಕ ಸಾಗಿಸುತ್ತಿದ್ದ ಆರೋಪಿ ಅರೆಸ್ಟ್.. ಹಣ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು

ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ?- ಮಾಜಿ ಸಚಿವ ಗೋವಿಂದ ಕಾರಜೋಳ

ಶೆಟ್ಟರ್ ನೇತೃತ್ವದ ಆಪರೇಷನ್ ಹಸ್ತ ಸಕ್ಸಸ್.. ಪ್ರಮುಖ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

- Advertisement -

Latest Posts

Don't Miss