ನೀವು ಕೆಲವರು ಊಟಕ್ಕೆ ಮದ್ದು ಹಾಕಿದ್ರು ಅನ್ನೋ ಮಾತನ್ನು ಕೇಳಿರುತ್ತೀರಿ. ಮದ್ದು ಅಂದ್ರೆ ಕೆಲವು ಕಡೆ ಔಷಧಿ ಅನ್ನೋ ಅರ್ಥವಿದೆ. ಆದ್ರೆ ಇ್ನನೊಂದು ಮದ್ದು ಅಂದ್ರೆ, ಊಟದಲ್ಲಿ ನಿಧಾನಗತಿಯಲ್ಲಿ ಕೊಲ್ಲುವಂಥ ವಿಷ. ಈ ವಿಷವನ್ನು ಒಮ್ಮೆ ಊಟಕ್ಕೆ ಹಾಕಿ ಕೊಟ್ಟರೆ, ಮೊದಲು ವಾಂತಿ, ಬೇಧಿ ಶುರುವಾಗಿ, ಬಳಿಕ ಜ್ವರ ಬಂದು, ನಂತರದಲ್ಲಿ ಮೈತುಂಬ ಗುಳ್ಳೆಗಳಾಗಿ, ಮನುಷ್ಯ ಅನಾರೋಗ್ಯಕ್ಕೀಡಾಗಿ, ಸಾವನ್ನಪ್ಪುತ್ತಾನೆ. ಈ ಬಗ್ಗೆ ಸಂತೋಷ್ ಭಟ್ ಗುರೂಜಿ ವಿವರಿಸಿದ್ದಾರೆ.
ಕೆಲವರು ಸಿಕ್ಕಿ ಸಿಕ್ಕವರಿಗೆ, ಸುಮ್ಮ ಸುಮ್ಮನೆ ಮದ್ದು ಹಾಕುತ್ತಾರೆ. ಇದಕ್ಕೆ ಒಂದು ಭ್ರಮೆಯೋ, ಮೂಢನಂಬಿಕೆಯೋ ಕಾರಣವಾಗಿರಬಹುದು. ಅದೇನೆಂದರೆ, ಒರ್ವ ಮನುಷ್ಯ ಇಂತಿಷ್ಟು ಸಾವಿರ ಜನಕ್ಕೆ ಸುಮ್ಮ ಸುಮ್ಮನಾದರೂ ಮದ್ದು ಹಾಕುತ್ತಾನೆ. ಈ ಕೆಲಸ ಪೂರ್ಣಗೊಳಿಸಿದರೆ, ಅವನಿಗೆ ನಿಧಿ ಸಿಗುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ಆತ ಮದ್ದು ಹಾಕುವುದನ್ನು ಬಿಟ್ಟನೋ, ಅವನ ಮನೆಯಲ್ಲಿ ಸಾವಾಗಲು ಶುರುವಾಗುತ್ತದೆ ಅನ್ನೋ ಮಾತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದು ಯಾರಿಗೂ ಗೊತ್ತಿಲ್ಲ.
ಯಾರಿಗಾದರೂ ಮದ್ದು ಪ್ರಯೋಗವಾಗಿದ್ದರೆ, ಅದನ್ನು ತೆಗೆಯುವ ಶಕ್ತಿ ದೀಪ ಯಕ್ಷಿಣಿ ಆರಾಧಕರಿಗೆ ಇರುತ್ತದೆ. ಸಾಯುವ ಸ್ಥಿತಿಗೆ ಬಂದವರನ್ನೂ ನಾವು ಬದುಕಿಸಿದ್ದೇವೆ ಎನ್ನುತ್ತಾರೆ ಸಂತೋಷ್ ಭಟ್ ಗುರೂಜಿ. ಹಾಗಾದ್ರೆ ಬೇರೆಯವರು ನಮ್ಮ ಊಟಕ್ಕೆ ಹಾಕಿದ ಮದ್ದು ನಮ್ಮ ದೇಹ ಸೇರಬಾರದು. ನಾವು ಯಾರದ್ದಾದರೂ ಮನೆಗೆ ಊಟಕ್ಕೆ ಹೋಗುವ ಮುನ್ನ ಯಾವ ಪರಿಹಾರ ಮಾಡಿಕೊಳ್ಳಬೇಕು ಎಂದು ಸಂತೋಷ್ ಗುರೂಜಿ ಹೇಳಿದ್ದಾರೆ.
ನೀವು ಯಾರದ್ದಾದರೂ ಮನೆಗೆ ಊಟಕ್ಕೆ ಹೋದರೆ, ಊಟವಾದ ತಕ್ಷಣ ಏಲಕ್ಕಿ ತಿಂದು ನೀರು ಕುಡಿಯಿರಿ. ಅಥವಾ ಏಲಕ್ಕಿ ಪುಡಿ ತಿಂದು ನೀರು ಕುಡಿಯಿರಿ. ಹೀಗೆ ಮಾಡುವುದರಿಂದ, ನಮ್ಮ ಊಟದಲ್ಲಿ ಮದ್ದು ಇದ್ದರೆ, ಆ ಮದ್ದಿನ ಪ್ರಭಾವವನ್ನು ಬರೀ 3ರಿಂದ 4 ಗಂಟೆಯೊಳಗೇ ಮುಗಿಸಿಬಿಡುವ ಶಕ್ತಿ ಏಲಕ್ಕಿಯಲ್ಲಿದೆ. ಹಾಗಾಗಿ ಊಟವಾದ ಬಳಿಕ ಏಲಕ್ಕಿ ಸೇವನೆ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
ಕರೆಮಾಡಿ ಗುರೂಜಿ ಜೊತೆ ಮಾತನಾಡಿ: 9742294593, 9742183392




