Friday, October 18, 2024

Latest Posts

‘ನನ್ನನ್ನೂ ಬಂಧಿಸುತ್ತೀರಾ..? ಧೈರ್ಯಾ ಇದೆಯಾ ಈ ಸರ್ಕಾರಕ್ಕೆ..?’

- Advertisement -

Political News: ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್,ಅಶೋಕ್, ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣವನ್ನು ಮತ್ತೆ ಶುರು ಮಾಡಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ, ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗಿಿತ್ತು. ಈ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ, ರಾಮನ ಪ್ರತಿಷ್ಠಾಪನೆಯಾಗುತ್ತಿದೆ. ಇಡೀ ಪ್ರಪಂಚದ ಜನ ಕಾತುರದಿಂದ ಕಾಯುತ್ತಿದ್ದಾರೆ. ಈ ಸಮಯದ ಹಿಂದೆ, ಲಕ್ಷಾಂತರ ಜನರ ಬಲಿದಾನವಾಗಿದೆ.

ಕಾಂಗ್ರೆಸ್ 30 ವರ್ಷದ ಬಳಿಕ, ಹಳೆ ಕೇಸ್ ರಿಓಪೆನ್ ಮಾಡ್ತಿದೆ. ಹೆದರಿಸುವ ಕೆಲಸ ಮಾಡ್ತಿದೆ. ನಿನ್ನೆ ಇಬ್ಬರು ರಾಮಜನ್ಮಭೂಮಿಯ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಜೈಲಿಗೆ ಹಾಕಿದೆ. ಅಂದ್ರೆ ಈ ಮೂಲಕ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡಿ, ಜನರನ್ನು ಭಯಭೀತರನ್ನಾಗಿ ಮಾಡಹೊರಟಿದೆ. ರಾಮಮಂದಿರ ಪ್ರತಿಭಟನೆ ನಡೆಯುವ ವೇಳೆ, ನಾನೂ ಕೂಡ ಕರಸೇವೆಯಲ್ಲಿ ಇದ್ದೆ. ಹಾಗಾದ್ರೆ ನನ್ನನ್ನೂ ಬಂಧಿಸುತ್ತೀರಾ..? ಎಂದು ಆರ್.ಅಶೋಕ್ ಕಾಂಗ್ರೆಸ್ಸಿಗರಿಗೆ ಸವಾಲ್ ಹಾಕಿದ್ದಾರೆ.

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

- Advertisement -

Latest Posts

Don't Miss