Friday, June 20, 2025

Latest Posts

ಹಟ್ಟಿಗೆ ನುಗ್ಗಿ 15 ಕುರಿಗಳನ್ನು ಬಲಿ ಪಡೆದ ತೋಳಗಳು..

- Advertisement -

Gadag News: ಗದಗ: ಗದಗದ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಹತ್ತಿರ ಕುರುಬರ ಹಟ್ಟಿಗೆ ತೋಳುಗಳು ದಾಳಿ ನಡೆಸಿದ್ದು, ತೋಳದ ದಾಳಿಗೆ 15 ಕುರಿಗಳು ಸಾವನ್ನಪ್ಪಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

ಇವು ಲಕ್ಷ್ಮೇಶ್ವರ ಪಟ್ಟಣದ ಮ್ಯಾಗೇರಿ ಓಣಿಯ ಸಾದೇವಪ್ಪ ಉಳ್ಳೆಟ್ಟಿ ಎಂಬುವವರಿಗೆ ಸೇರಿದ ಕುರಿಗಳಾಗಿದ್ದವು. ಹಟ್ಟಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ತೋಳುಗಳು ದಾಳಿ ಮಾಡಿ ಸುಮಾರು 15 ಕುರಿಗಳನ್ನು ಬಲಿ ಪಡೆದಿದೆ. ವಿಷಯ ತಿಳಿಯುತ್ತಿದ್ದಂತೆ, ಮ್ಯಾಗೇರಿ ಓಣಿಯ ಕುರಿಗಾಹಿಗಳು, ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮತ್ತು ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಪಶುವೈದ್ಯರು, ತೋಳದ ದಾಳಿಯಿಂದ ಸಾವನ್ನಪ್ಪಿರುವ ಕುರಿಗಳನ್ನು ಪರಿಶೀಲಿಸಿ, ಇದಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ನೀಲಪ್ಪ ಪಡಗೇರಿ ಮಲ್ಲೇಶ್, ಕುರಿಗಾರರಿಗೆ ಇಂಥ ಅನಾಹುತಗಳು ಆಗದಂತೆ ಅರಣ್ಯ ಇಲಾಖೆಯವರು ಕುರಿಗಾರರಿಗೆ ಸೂಕ್ತ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ಗ್ಯಾರಂಟಿ ಭ್ರಮೆ ಹುಟ್ಟಿಸಿದ್ದು ನೋಡಿದ್ರೆ ಸರಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ’

ಲಿಂಗಾಯಿತ ನಾಯಕರ ನಿರ್ಲಕ್ಷ್ಯ ವಿಚಾರ: ಎಂ.ಬಿ.ಪಾಟೀಲ್- ಯತ್ನಾಳ್ ಮಧ್ಯೆ ಟ್ವೀಟ್ ವಾರ್..

ಕೆರೆಯಲ್ಲಿ ಮುಳುಗಿದ ವ್ಯಕ್ತಿ ಕುಟುಂಬಕ್ಕೆ ಸಾಂತ್ವನ ,ಪರಿಹಾರ ಭರವಸೆ ನೀಡಿದ ಶಾಸಕ ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss