www.karnatakatv.net: ಬೆಳಗಾವಿ : ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕಾಂಪೌoಡ್ ತೆರವುಗೊಳಿಸಲು ತೆರಳಿದ್ದ ಪಿಡಿಒ ಮೇಲೆ ಸ್ಥಳೀಯರು ಹಲ್ಲೆಗೆ ಯತ್ನ ನಡೆಸಿದ್ದರಲ್ಲದೆ ಓರ್ವ ಮಹಿಳೆ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ರಂಪಾಟ ಸೃಷ್ಟಿಸಿದ ಘಟನೆ ಬೆಳಗಾವಿಯ ತುಕ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕಾಂಪೌoಡ್ ತೆರವಿಗೆ ಮುಂದಾಗಿದ್ದ ಪಿಡಿಒ ವೀರಭದ್ರಾ, ಕಾಂಪೌoಡ್ ನಿರ್ಮಿಸಿದ್ದ ಸಿದ್ದಪ್ಪ, ಯಮನಪ್ಪಾ, ವೆಂಕಪ್ಪ ಹುಲಕುಂದ ಎಂಬುವವರನ್ನು ಪ್ರಶ್ನಸಿದ್ರು. ಈ ವೇಳೆ ಮಾತಿನ ಚಕಮಕಿ ಏರ್ಪಪಟ್ಟು ಈ ಇಬ್ಬರೂ ಪಿಡಿಒ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇನ್ನು ಇದನ್ನು ಕಂಡ ಸಿದ್ದಪ್ಪನ ಕುಟುಂಬದ ಮಹಿಳೆ ತಾನು ಉಟ್ಟಿದ್ದ ಸೀರೆಯನ್ನೂ ತಾನೇ ಹರಿದುಕೊಂಡು ಪಿಡಿಒಗೆ ಧಮ್ಕಿ ಹಾಕಿದ್ದಾಳೆ. ಇನ್ನು ಪಿಡಿಒ ತಮ್ಮನ್ನು ಎಳೆದಾಡಿದ್ರು ಅಂತ ದೂರು ನೀಡೋದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಈ ಸಂಬoಧ ಪಿಡಿಒ ವೀರಭದ್ರ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಪ್ರಸಂಗವನ್ನು ವಿಡಿಯೋವನ್ನೂ ಕೂಡ ಪಿಡಿಒ ಪೊಲೀಸರಿಗೆ ನೀಡಿದ್ದಾರೆ.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ