ಬೆಂಗಳೂರು: ಬಿಜೆಪಿ ಪಕ್ಷದಲ್ಲಾಗುತ್ತಿರುವ ಬದಲಾವಣೆಗಳನ್ನ ಕುರಿತು ಮಾತನಾಡಲು, ಇಂದು ಮಾಜಿ ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ತೊರೆದು ಹೋದವರ ವಿರುದ್ಧ ಕಿಡಿಕಾರಿದ್ದಾರೆ.
ಚುನಾವಣೆ ಸೋತರು ಡಿಸಿಎಂ ಸೇರಿ ಎಲ್ಲಾ ಸ್ಥಾನ ಮಾನ ಕೊಟ್ಟಿದ್ದೇವೆ.. ನಾವು ಸವದಿಗೆ ಏನು ಕಡಿಮೆ ಮಾಡಿದ್ವಿ..? ಇನ್ನೂ ಎಂಎಲ್ ಸಿ ಅವಧಿ ಇತ್ತು. ಮುಂದೆ ಸರ್ಕಾರದಲ್ಲಿ ಮತ್ತೆ ಸಚಿವರನ್ನಾಗಿ ಮಾಡ್ತಿದ್ವಿ. ಬಿಜೆಪಿಯಲ್ಲಿ ಎಲ್ಲಾ ಸವಲತ್ತನ್ನ ಪಡೆದು ಕಾಂಗ್ರೆಸ್ ಗೆ ಸೇರಿದ್ದು ವಿಶ್ವಾಸ ದ್ರೋಹ. ಸವದಿ ಗುರುತಿಸಿದ್ದು ಬಿಜೆಪಿ. ಶೆಟ್ಟರ್ ಜನಸಂಘದ ಕಾಲದಿಂದ ಬಿಜೆಪಿಯಲ್ಲಿ ಇದ್ದಾರೆ. ರಾಜ್ಯಾಧ್ಯಕ್ಷ, ಮಂತ್ರಿ, ಮುಖ್ಯಮಂತ್ರಿ ಮಾಡಿದ್ವಿ. ಬಿಬಿ ಶಿವಪ್ಪನವರನ್ನ ಎದುರು ಹಾಕಿಕೊಂಡು ವಿಪಕ್ಷ ನಾಯಕನನ್ನಾಗಿ ಮಾಡಿದ್ವಿ. ನಾನೇ ಮುಂದೆ ನಿಂತು ಮುಖ್ಯಮಂತ್ರಿ ಮಾಡಿದೆ. ಇನ್ನೇನು ಮಾಡಬೇಕಿತ್ತು ಎಂದು ಶೆಟ್ಟರ್ ಮತ್ತು ಸವದಿಗೆ ಬಿಎಸ್ವೈ ಟಾಂಗ್ ನೀಡಿದ್ದಾರೆ.
ಅಲ್ಲದೇ, ಶೆಟ್ಟರ್ ಹೇಳಿಕೆ ನಿರ್ಧಾರ ನಂಬಿಕೊಂಡ ವಿಚಾರಕ್ಕೆ ತದ್ವಿರುದ್ಧವಾಗಿದೆ. ಜಗದೀಶ್ ಶೆಟ್ಟರ್ ಹೆಸರು ಮಾಡಿದ್ದು ಬಿಜೆಪಿಯಿಂದ. ಜೋಷಿ, ಪ್ರಧಾನ್ ಮನೆಗೆ ಭೇಟಿ ಮಾಡಿ ಮಾತನಾಡಿದ್ದಾರೆ. ರಾಜ್ಯಸಭೆ ಸದಸ್ಯ ಮಾಡಿ ಕೇಂದ್ರ ಸಚಿವರನ್ನಾಗಿ ಮಾಡ್ತೀವಿ ಅಂದ್ರು ಕಾಂಗ್ರೆಸ್ ಜೊತೆ ಕೈಜೋಡಿಸುತ್ತಿರೋದು ಅಕ್ಷಮ್ಯ ಅಪರಾಧ. ನಾವೇನು ಕಡಿಮೆ ಮಾಡಿದ್ವಿ. ಇದು ಪಕ್ಷಕ್ಕೆ ಮಾಡಿರುವ ದ್ರೋಹ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನನಗೆ 80 ವರ್ಷ ಆಗಿದ್ರು ದೇಶದಲ್ಲಿ, ರಾಜ್ಯದಲ್ಲಿ ಮೋದಿ ಸರ್ಕಾರ ರಚನೆಗೆ ಸಮಯ ಕೊಟ್ಟಿದ್ದೇನೆ. ಜಗತ್ತಿನ ಯಾವುದೇ ಶಕ್ತಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದನ್ನ ತಡೆಯೋಕೆ ಸಾಧ್ಯವಿಲ್ಲ. ಬಿಜೆಪಿಯಲ್ಲಿ ಹೊಸ ತನ, ಹೊಸಹುರುಪು ಬರಲು ನಾವು ದಾರಿಮಾಡಿಕೊಡಬೇಕು. ಕಾಂಗ್ರೆಸ್ ತುಳಿತಕ್ಕೆ ಒಳಗಾದವರನ್ನ ಕೇವಲ ವೋಟ್ ಬ್ಯಾಂಕ್ ರಾಜಕೀಯ ಮಾಡಿದೆ. ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ .ಸಾಮಾಜಿಕ ನ್ಯಾಯ ಪಾಲಿಸುವನ್ನ ಬಿಜೆಪಿ ಎಂದೂ ಹಿಂದೆ ಬಿದ್ದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
2018ರಲ್ಲಿ ವೀರಶೈವರನ್ನ ಧರ್ಮದ ಹೆಸರಲ್ಲಿ ಒಡೆಯಲು ಮುಂದಾದ್ರು ರಾಜ್ಯದ ಜನ ಇದನ್ನ ತಿರಸ್ಕಾರ ಮಾಡಿದ್ರು. ಅಂಗಾರ, ರಘುಪತಿ ಭಟ್, ಈಶ್ವರಪ್ಪ ಎಲ್ಲರೂ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದಾರೆ.. 2024 ಕ್ಕೆ ಬಿಜೆಪಿ 25 ಲೋಕಸಭಾ ಸ್ಥಾನ ಗೆಲ್ತೇವೆ. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರೋದು ಗ್ಯಾರಂಟಿ. ನಿನ್ನೆ ಶೆಟ್ಟರ್ ಮನೆಗೆ ಭೇಟಿ ಕೊಟ್ಟಿದ್ರು. ನಾನು ಆ ಭಾಗದಲ್ಲಿ ಪ್ರವಾಸ ಮಾಡ್ತೇನೆ. ಜನರಿಗೆ ಸತ್ಯ ತಿಳಿಸ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ..
ಸಿದ್ದರಾಮಯ್ಯಗೆ ಟಿಕೇಟ್ ಸಿಗದ ಕಾರಣ, ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ, ಉದಯ್ ತಲೆಗೆ ಗಾಯ..