Friday, June 20, 2025

Latest Posts

ಪಾನ್ ಮಸಾಲಾ ಜಾಹೀರಾತನ್ನ ರಿಜೆಕ್ಟ್ ಮಾಡಿದ ಯಶ್..!

- Advertisement -

ನಾನ್ ಬರೋವರೆಗೂ ಮಾತ್ರ ಬೇರೆಯವ್ರ್ ಹವಾ..ನಾನ್ ಬಂದ್ಮೇಲೆ ನಂದೇ ಹವಾ. ಈ ಡೈಲಾಗ್ ಬರೀ ಸಿನಿಮಾಗಷ್ಟೇ ಸೀಮಿತವಾಗಿಲ್ಲ,ಬದಲಾಗಿ ನಟ ಯಶ್ ರಿಯಲ್ ಲೈಫ್‌ಗೂ ಕಂಪ್ಲೀಟಾಗಿ ಸೂಟ್ ಆಗಿದೆ. ಚಿತ್ರಮಂದಿರಗಳಿಗೂ ತೂಫಾನ್ ಎಂಟ್ರಿ ಕೊಟ್ಟಾದ್ಮೇಲೆ ಬೇರೆಲ್ಲಾ ಸಿನಿಮಾಗಳ ಸೌಂಡು ಫುಲ್ ಟುಸ್ ಪಟಾಕಿಯಾಗೋಯ್ತು. ಕಳೆದ ಎರಡು ವಾರಗಳಿಂದ ಕೆಜಿಎಫ್-2 ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಅಂದುಕೊಂಡಂತೆ ಬಾಕ್ಸಾಫೀಸ್‌ನಲ್ಲಿ ಸಾವಿರಕೋಟಿ ಕಮಾಲ್ ಮಾಡೇ ಬಿಡ್ತು.

ಈ ಖುಷಿ ಒಂದೆಡೆ ಆದ್ರೆ ರಾಕಿಭಾಯ್ ಫ್ಯಾನ್ಸ್ಗೆ ಇಲ್ಲೊಂದು ಇಂಟ್ರೆಸ್ಟಿಂಗ್ ಸುದ್ದಿಯಿದೆ. ಕೆಜಿಎಫ್ ಸಕ್ಸಸ್ ಖುಷಿಯಲ್ಲಿರೋ ನಟ ಯಶ್, ಇದರ ಬೆನ್ನಲ್ಲೇ ಈಗ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಲುವಾಗಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಯಶ್ ರೀಲ್‌ನಲ್ಲಷ್ಟೇ ಅಲ್ಲದೇ ರಿಯಲ್ ಲೈಫ್‌ನಲ್ಲೂ ಹೀರೋ ಆಗಿದ್ದಾರೆ. ಈಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿ, ಬ್ರ್ಯಾಂಡ್ ಅಂಬಾಸಿಡರ್ ಸಹ ಆಗಿರೋ ಯಶ್ ,ಇದೀಗ ತಮಗೆ ಬಂದ ಹೊಸ ಜಾಹೀರಾತು ಆಫರನ್ನ ಏಕಾಏಕಿ ರಿಜೆಕ್ಟ್ ಮಾಡಿದ್ದಾರೆ.

ಸಮಾಜಕ್ಕೆ ತಮ್ಮ ಸಿನಿಮಾಗಳ ಮೂಲಕ ಒಳ್ಳೇ ಸಂದೇಶ ನೀಡೋ ಯಶ್,ತಾವು ನಟಿಸೋ ಜಾಹೀರಾತುಗಳಿಂದಲೂ ಒಳ್ಳೆಯ ಸಂದೇಶವಿರಬೇಕೆಂಬುದು ಯಶ್ ಆಶಯ. ಅದರಂತೆ ಪ್ರತಿಷ್ಠಿತ ಸಂಸ್ಥೆಯ ಪಾನ್ ಮಸಾಲ ಹಾಗೂ ಎಲೈಚಿ ಬ್ರ್ಯಾಂಡ್ ನ ಬಿಗ್ ಆಫರನ್ನೇ ಯಶ್ ಈಗ ತಿರಸ್ಕರಿಸಿದ್ದಾರೆ. ನಿಮಗೆ ತಿಳಿದಿರಬಹುದು ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವ್‌ಗನ್, ಶಾರುಖ್ಖಾನ್ ಈ ಮೂವರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಾರೆ. ಅದರಲ್ಲೂ ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ ಮೇಲಂತೂ ಇವ್ರನ್ನ “ಗುಟ್ಕಾ ಗ್ಯಾಂಗ್” ಅಂತಲೇ ಕಮೆಂಟ್ಸ್ ಮಾಡ್ತಾರೆ.

ಈಗ ಯಶ್ ಈ ಬಹುಕೋಟಿ ಮೊತ್ತದ ಪಾನ್ ಮಸಾಲ ಆಡ್ ರಿಜೆಕ್ಟ್ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಈ ಜಾಹಿರಾತಿಗೆ 10 ಕೋಟಿಯಿಂದ 99 ಕೋಟಿವರೆಗೂ ಎಷ್ಟು ಬೇಕಿದ್ದರೂ ಅಫರ್ ಮಾಡಿರಬಹುದು ಎನ್ನಲಾಗಿದೆ. ಒಟ್ನಲ್ಲಿ ಕೆಜಿಎಫ್-೨ ಯಶಸ್ಸಿನ ಬಳಿಕ ಯಶ್‌ಗೆ ಈ ಬಹುಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಲು ಬಂದ ಆಫರನ್ನ ಕೊಂಚವೂ ಯೋಚಿಸದೇ ತಿರಸ್ಕರಿಸಿರೋದು ಅಭಿಮಾನಿಗಳಿಗೆ ತೀರಾ ಖುಷಿ ಕೊಟ್ಟಿದೆ.

ನಳಿನಾಕ್ಷಿ, ಕರ್ನಾಟಕ ಟಿವಿ

- Advertisement -

Latest Posts

Don't Miss