Hubballi Political News: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಮ ಮಂತ್ರಾಕ್ಷತೆ ಬಗ್ಗೆ ಕಾಂಗ್ರೆಸ್ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಂತ್ರಾಕ್ಷತೆ ನಾವು ಕೊಡುತ್ತಿದ್ದೇವೆ. ಇದರ ವಿವಾದವನ್ನು ಕಾಂಗ್ರೆಸ್ ಮಾಡ್ತಿದೆ. ನಮಗೆ ರಾಮಮಂದಿರ ಉದ್ಘಾಟನೆ ಸಂಪನ್ನವಾಗಬೇಕು. ನಮ್ಮ ಅಕ್ಕಿ ತಗೊಂಡು ಮಂತ್ರಾಕ್ಷತೆ ಅಂತಾರೆ. ಹೌದಪ್ಪಾ ನೀವ ಎಲ್ಲಿ ಅಕ್ಕಿ ಕೊಟ್ಟಿದ್ದೀರಿ..? ಸುಳ್ಳು ಹೇಳೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಒಂದು ಕಾಳ ಅಕ್ಕಿ ಕೊಟ್ಟಿಲ್ಲ ನೀವು. ಮೊದಲು ಶ್ರೀರಾಮ ಇಲ್ಲ ಎಂದು ಅಪಮಾನ ಮಾಡಿದ್ರೀ.. ಶ್ರೀರಾಮನ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿದ್ರೀ. ಇದೀಗ ಎಲ್ಲ ಆದ ಮೇಲೆ ಕ್ರೇಡಿಟ್ ತಗೋಳದಕ್ಕೆ ನಮ್ಮ ಅಕ್ಕಿ ಅಂತೀದಾರೆ. ನೀವು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಕಾಂಗ್ರೆಸ್ ನವರು ಇಷ್ಟು ದಿನ ರಾಮ ಇಲ್ಲ ಅಂತೀದ್ರು. ಇದೀಗ ಪೂಜೆ ಮಾಡೋಕೆ ಹೇಳಿದ್ದಾರೆ. ಮೊನ್ನೆ ಸಿದ್ದರಾಮಯ್ಯ ಗುಡಿ ಒಳಗೆ ಹೋಗಲಿಲ್ಲ. ಇದನ್ನೆಲ್ಲ ರಿಪೇರಿ ಮಾಡೋಕೆ ಮಾಡಿದಾರೆ. ಕರಸೇವಕರ ಮೇಲೆ ಗುಂಡು ಹಾರಿಸಿದ್ದು ಯಾರೂ ಅನ್ನೋದು ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಸಿದ್ದರಾಮಯ್ಯ ಸರ್ಕಾರ ಐಸಿಸ್ ಆಡಳಿತದ ಹಾಗಿದೆ ಎಂಬ ಬಗ್ಗೆ ಜೋಶಿ ನಿನ್ನೆ ಹೇಳಿಕೆ ನೀಡಿದ್ದರು. ಇಂದು ಆ ಬಗ್ಗೆ ಸಮರ್ಥನೆ ನೀಡಿದ್ದಾರೆ. ಯಾರೂ ರಾಮ ಭಕ್ತರಿದಾರೆ, ಬಿಜೆಪಿ ಪರ ಕೆಲಸ ಮಾಡೋರನ್ನ ಹೊರಗೆ ಹಾಕಬೇಕು ಅಂತಾರೆ. ಆದ್ರೆ ನಾವು ಅಷ್ಟು ಸರಳವಾಗಿ ಹೊರಗೆ ಹೋಗಲ್ಲ. ನಾವು ಹೋರಾಟ ಮಾಡಿ ಇಲ್ಲಿಗೆ ಬಂದಿದ್ದೇವೆ.. ಹುಬ್ಬಳ್ಳಿಯ ಗಲಭೆ ಮಾಡಿದವರು ನಿಮಗೆ ಅಮಾಯಕರು,ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆ ಮಾಡಿದವರು ನಿಮಗೆ ಅಮಾಯಕರು. ಮಂಗಳೂರ ಬಾಂಬ್ ಬ್ಲಾಸ್ಟ್ ಮಾಡಿದವರು ನಿಮಗೆ ಸಹೋದರರು.
ಹೀಗಾಗಿ ನಿಮಗೆ ISIS ಮಾದರಿ ಆಡಳಿತ ಅನ್ನಲಾರದೆ ಏನ ಅನಬೇಕು ಎಂದು ಜೋಶಿ ಕಾಂಗ್ರೆಸ್ಗೆ ಪ್ರಶ್ನಿಸಿದ್ದಾರೆ.
ಇನ್ನು ನಿನ್ನೆ ಸಚಿವ ಸಂತೋಷ್ ಲಾಡ್ ಜೋಶಿಯ ಈ ಹೇಳಿಕೆ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅದರ ಬಗ್ಗೆ ಜೋಶಿ ಪ್ರತಿಕ್ರಿಯಿಸಿದ್ದು, ಮಂತ್ರಿಗಿರಿ ಉಳಿಯಬೇಕಲ್ಲಾ ಅದಕ್ಕೆ ಈ ರೀತಿ ಬೈಯ್ಯುತ್ತಿದ್ದಾರೆ. ಬಿಜೆಪಿಯವರಿಗೆ, ಮೋದಿಗೆ ಬೈದರೆ, ಕಾಂಗ್ರೆಸ್ನವರ ಮಂತ್ರಿಗಿರಿ ಉಳಿಯುತ್ತದೆ. ಹಾಗಾಗಿ ಮಂತ್ರಿಗಿರಿ ಉಳಿಯಲಿ ಎಂದು ಮಾತಾಡ್ತಾರೆ ಮಾತಾಡಲಿ ಬಿಡಿ ಎಂದು ಜೋಶಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ಅಕ್ಕಿ ಕೊಡುತ್ತಿದ್ದೇವೆ. ಆ ರಸೀದಿ ಕೊಡೋಕೆ ಹೇಳಿದ್ದೇವೆ. ಯಾಕಂದ್ರೆ ಎಷ್ಟು ಕೆಜಿ ಏನೂ ಅನ್ಮೋ ರೆಕಾರ್ಡ್ ಉಳಿಯಲ್ಲ. ಹಾಗೆ ಕೊಡೋದ ಆದ್ರೆ ಯಾರ ಅಕ್ಕಿ ಕೊಡ್ತಾರೆ ಅನ್ನೋದ ಹೇಗೆ ಗೊತ್ತಾಗಬೇಕು. ನಾವು ರಸೀದಿ ಕೊಡಲ್ಲ ಅಂದ್ರಲ್ಲ ಅಂದರೆ ಏನರ್ಥ. ಇದು ಸಂಪೂರ್ಣ ಕೇಂದ್ರ ಬೊಕ್ಕಸದಿಂದ ಕೊಡ್ತೀರೋ ಯೋಜನೆ. ನಾವು 10 ಕೆಜಿ ಅಕ್ಕಿ ಕೊಡ್ತೀವಿ ಅಂದಿದ್ರಿ.10 ಕೆಜಿ ಅಕ್ಕಿ ಕೊಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ಸಿಗರಿಗೆ ಸವಾಲ್ ಹಾಕಿದ್ದಾರೆ.
‘ಸರ್ಕಾರದ ಹಿಂದೂ ವಿರೋಧಿ ಧೋರಣೆ ಅತೀ ಆಯ್ತು. ಹೀಗೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ’
ಬಿಜೆಪಿ ಅನಾಗರಿಕ ವರ್ತನೆ”- ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಧಾರವಾಡದಲ್ಲಿ ಪ್ರತಿಭಟನೆ
‘ನಾನಂತೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ನನಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ಆಗಿಲ್ಲ’