- Advertisement -
Political News: ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರ ಈ ಬಾರಿ ಗಣರಾಜ್ಯೋತ್ಸವದ ಪರೇಡ್ಗೆ ಅವಕಾಶ ಕೊಡಲಿಲ್ಲವೆಂಬ ಕಾರಣಕ್ಕೆ, ಆಕ್ರೋಶ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದರು. ಇದೀಗ ಸಿಎಂ ಟ್ವೀಟ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಟ್ವೀಟ್ ಮಾಡಿದ್ದು, ವಾಗ್ದಾಳಿ ನಡೆಸಿದ್ದಾರೆ.. ಅವರ ಟ್ವೀಟ್ ಹೀಗಿದೆ..
ಮಾನ್ಯ ಸಿದ್ದರಾಮಯ್ಯನವರೇ, ರಾಜಕೀಯ ಮಾಡಬೇಕು ನಿಜ, ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಅದೂ ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ ನಿಮ್ಮ ಸ್ಥಾನಕ್ಕಾಗಲಿ ಶೋಭೆ ತರುವುದಿಲ್ಲ.
2015 ರಿಂದ 2023 ವರೆಗೆ ಕರ್ನಾಟಕವು ಪ್ರತಿ ವರ್ಷವೂ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ. 26 ಜನವರಿ 2024 ರ ವರೆಗೆ ಕರ್ನಾಟಕಕ್ಕೆ ಪ್ರದರ್ಶಿಸುವ 14 ಅವಕಾಶಗಳಿದ್ದವು, ಅಂದರೆ ಕೇಂದ್ರದಲ್ಲಿ ಬಿಜೆಪಿ ಇದ್ದಾಗಲೇ 10 ಬಾರಿ ಕರ್ನಾಟಕದ ಸ್ರಬ್ಧಚಿತ್ರ ಪ್ರದರ್ಶನವಾಗಿದೆ. 2007, 2009 ಹಾಗೂ 2010 ರಲ್ಲಿ ಅವಕಾಶ ಸಿಗಲಿಲ್ಲವಲ್ಲ, ಆಗ ಎಲ್ಲಿ ಹೋಗಿತ್ತು ನಿಮ್ಮ ನಾಡಪ್ರೇಮ? ಆಗ ಯಾಕೆ ಪ್ರಶ್ನಿಸಿ ಟ್ವೀಟ್ ಮಾಡಲಿಲ್ಲ, ಯಾಕೆ ಮಾಧ್ಯಮದಲ್ಲಿ ಯಾವ ಹೇಳಿಕೆಯೂ ನೀಡಲಿಲ್ಲ, ಓಹ್ ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು ಅಂತಲೇ? ಆಗ ಕರ್ನಾಟಕಕ್ಕೆ ಅವಮಾನ ಆಗಿರಲಿಲ್ಲವೇ?
ಈ ಅವಕಾಶ ಕೊಡುವುದು ನಮ್ಮ ಕೈಲಿಲ್ಲ, ಎಲ್ಲವೂ ನ್ಯಾಯ ಬದ್ಧವಾಗಿ ನಡೆದಿದೆ ಹಾಗೂ ಆಯ್ಕೆಗಾಗಿ ಆಯಾ ಕ್ಷೇತ್ರದ ಹೆಸರಾಂತ ಕಲಾವಿದರನ್ನು ಹೊಂದಿದ ಸಮಿತಿ ರಚಿಸಲಾಗಿತ್ತು.
ಕೇಂದ್ರ ರಾಜ್ಯಗಳ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡಲಾಗುವುದಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ನಮ್ಮ ಸ್ತಬ್ಧಚಿತ್ರವನ್ನು ಮೊದಲು ಪ್ರದರ್ಶನ ಮಾಡಲು ಬಿಡಲಿಲ್ಲ, ಅವಮಾನವಾಯಿತು ಎಂದು ಹೇಳುವುದು ತರವಲ್ಲ.
ರೀ ಸಿದ್ದರಾಮಯ್ಯನವರೇ, ಉಚಿತ ಕೊಡುತ್ತೇವೆ ಎಂದು ಸುಳ್ಳು ಹೇಳಿ ಕರ್ನಾಟಕ ಜನತೆಯ ದಿಕ್ಕು ತಪ್ಪಿಸಿದ್ದು ಸಾಲದು ಅಂತ ಈಗ ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡಿ ಮತ್ತದೇ ಚಾಳಿ ಹಿಡಿದಿದ್ದೀರಿ ಎಂದು ಜೋಶಿ ಟ್ವೀಟ್ ಮಾಡಿದ್ದಲ್ಲದೇ, ಸುಳ್ಳು ಸಿದ್ದರಾಮಯ್ಯ ಎಂದು ಹ್ಯಾಷ್ಟ್ಯಾಗ್ ಹಾಕಿದ್ದಾರೆ.
https://twitter.com/JoshiPralhad/status/1745075680763650084
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್ ನಿರ್ಧಾರ
‘ನಮ್ಮ ಗ್ಯಾರಂಟಿ ಕಾಪಿ ಮಾಡಿ, ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿಯವರು ಅಷ್ಟು ನಿರ್ಲಜ್ಜರಾಗಿದ್ದಾರೆ’
‘ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುವುದಕ್ಕೆ ಕಾಂಗ್ರೆಸ್ ನೀಡಿರುವ ಕಾರಣವೇ ಹಾಸ್ಯಾಸ್ಪದ’
- Advertisement -