Wednesday, August 20, 2025

Latest Posts

ಕಿರಾತಕ ನಿರ್ದೇಶಕ, ಪ್ರದೀಪ್ ರಾಜ್ ಇನ್ನಿಲ್ಲಾ..!

- Advertisement -

ಪ್ರದೀಪ್ ರಾಜ್ ಸ್ಯಾಂಡಲ್ ವುಡ್‌ನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರು. ಯಶ್ ಅಭಿನಯದ “ಕಿರಾತಕ” ಮತ್ತು ದುನಿಯಾ ವಿಜಯ್ ಅಭಿನಯದ ರಜಿನಿಕಾಂತ ಸಿನಿಮಾಗಳನ್ನು ನಿರ್ದೇಶಿಸಿದ್ದರು.

ಪ್ರದೀಪ್ ರಾಜ್ ಇಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಪ್ರದೀಪ್ ಅವರಿಗೆ ಕೇವಲ 46 ವರ್ಷ. ಕಳೆದ 15 ವರ್ಷಗಳಿಂದ ಡಯಾಬಿಟಿಸ್ ನಿಂದ ಬಳಲುತ್ತಿದ್ದರು ಹಾಗೂ ಅವರಿಗೆ ಕಳೆದ ಆರು ತಿಂಗಳ ಹಿಂದಷ್ಟೇ ಕರೋನಾ ಸೋಂಕು ತಗುಲಿತ್ತು. ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಅವರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದವು ಎಂದು ಅವರ ಸಹೋದರ ಮಾಹಿತಿಯನ್ನು ನೀಡಿದ್ದಾರೆ.

ಪ್ರದೀಪ್ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ಪಾಂಡೀಚೆರಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರದೀಪ್ ರಾಜ್ ಸ್ಯಾಂಡಲ್‌ವುಡ್‌ನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ, ನಿರ್ದೇಶಕ, ಮತ್ತು ನಿರ್ಮಾಪಕನಾಗಿಯು ಕಾರ್ಯನಿರ್ವಹಿಸಿದ್ದಾರೆ. ಯಶ್ ಅಭಿನಯದ ಕಿರಾತಕ ಸಿನಿಮಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಯಶ್ ಅಭಿನಯದ ಕಿರಾತಕ ಸಿನಿಮಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಇದಲ್ಲದೆ, ಪ್ರದೀಪ್ ರಾಜ್ ಮಿಸ್ಟರ್ 420, ರಜನಿಕಾಂತ್, ಬೆಂಗಳೂರು-23, ಸೇರಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

- Advertisement -

Latest Posts

Don't Miss