Friday, June 20, 2025

Latest Posts

ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಇತಿಹಾಸ ಬಿಚ್ಚಿಟ್ಟ ಸಂತೋಷ್ ಲಾಡ್

- Advertisement -

Hubli News: ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿ ಆಯೋಜಿಸಿದ್ದ ಶಿವಾಜಿ ಮಹಾರಾಜರ 397ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಶಿವಾಜಿಯ 36 ಬಾಡಿಗಾರ್ಡ್ಗಳ ಪೈಕಿ 13 ಜನರು ಮುಸ್ಲಿಮರಿದ್ದರು ಎಂದು ಹೇಳಿದ್ದಾರೆ. ಛತ್ರಪತಿ ಶಿವಾಜಿ ಸೈನ್ಯದಲ್ಲಿ 60,000 ಸೈನಿಕರು ಮುಸ್ಲಿಮರಿದ್ದರು. ಇತಿಹಾಸವನ್ನು ಇವತ್ತು ಎಲ್ಲರೂ ತಮಗೆ ಬಂದಂತೆ ಹೇಳಬಹುದು ಎಂದಿದ್ದಾರೆ.

ಛತ್ರಪತಿ ಶಿವಾಜಿ ಮಹರಾಜರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಬಾಡಿಗಾರ್ಡ್ಗಳಿದ್ದರು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ನಗರದ ಮರಾಠಾ ಗಲ್ಲಿಯಲ್ಲಿ ನಡೆದ ಶಿವಾಜಿ ಮಹರಾಜರ 397 ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹರಾಜರು ಮುಸ್ಲಿಂ ವಿರೋಧಿ ಅಲ್ಲ. ಇತಿಹಾಸವನ್ನು ಇವತ್ತು ಯಾರ ಹೇಗೆ ಬೇಕಾದರೂ ಹೇಳಬಹುದು. 60 ಸಾವಿರ ಮುಸ್ಲಿಂರು ಶಿವಾಜಿ ಸೈನ್ಯದಲ್ಲಿ ಇದ್ದರು. ಭಗವಾ ಕಲರ್ ಶಿವಾಜಿ ಮಹರಾಜರದು. ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇರುವಾಗಲೇ ಭಗವಾ ಕಲರ್ ಯಾರದೂ ಅಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ನಾನೊಬ್ಬ ಮರಾಠಾ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ನನಗೆ ಬಸವಣ್ಣ ಬೇಕು, ರಾಮ ಬೇಕು, ರಹೀಮ್ ಬೇಕು. ಮರಾಠರು ಶೈಕ್ಷಣಿಕವಾಗಿ ಮುಂದೆ ಬರಬೇಕು. ಝಿರೋದಿಂದ ಇಂತಹ ಎಂಪೈರ್ ಕಟ್ಟಿದ್ದು ಶಿವಾಜಿ‌ ಮಹರಾಜರು. ನಾವು ಛತ್ರಪತಿ ವಂಶದವರು. ಯಾರಿಗೆ ತೊಂದರೆ ಆದರೂ ನಾವ ಅವರ ಜೊತೆ ನಿಲ್ಲಬೇಕು ಎಂದಿದ್ದಾರೆ.

ಯುಗಾದಿ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ-ಮಳೆ, ಧಾರ್ಮಿಕ ಮುಖಂಡನ ಸಾವಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ

ವಿದ್ಯಾರ್ಥಿನಿಯರ ರೀಲ್ಸ್‌ಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸಿದ ನಟ ವಿಜಯ್ ದೇವರಕೊಂಡ

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ರಿವಾಬಾಗೆ ಅರ್ಪಿಸಿದ ರವೀಂದ್ರ ಜಡೇಜಾ..

- Advertisement -

Latest Posts

Don't Miss