Monday, May 12, 2025

Latest Posts

ಕುಡುಪುವಿನಲ್ಲಿ ಸಾಕ್ಷಿ ಇಲ್ಲದೇ 22 ಜನ ಅರೆಸ್ಟ್, ಸುಹಾಸ್ ಕೇಸ್‌ನಲ್ಲಿ ಕೇವಲ 8 ಜನ ಅರೆಸ್ಟ್..?: ಹಿಂದೂ ಮಹಾಸಭಾ

- Advertisement -

Mangaluru News: ಕುಡುಪುವಿನಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ಇಲ್ಲದಿದ್ದರೂ 22 ಜನರನ್ನು ಬಂಧಿಸಿದ್ದೀರಿ. ಆದರೆ ಸುಹಾಸ್ ಕೇಸ್‌ನಲ್ಲಿ ಬರೀ 8 ಜನರನ್ನು ಬಂಧಿಸಲಾಗಿದೆ. ಹೀಗೆ ಯಾಕೆ ಎಂದು ಹಿಂದೂ ಮಹಾಸಭಾ ಪ್ರಶ್ನಿಸಿದೆ.

ಮಂಗಳೂರಿನಲ್ಲಿ ನಡೆದ Press Meetನಲ್ಲಿ ಮಾತನಾಡಿದ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಂದ್ರ ಪವಿತ್ರನ್, ಕುಡುಪುವಿನಲ್ಲಿ ಸಾಕ್ಷಿ ಇಲ್ಲದಿದ್ದರೂ 22 ಜನರನ್ನು ಬಂಧಿಸಿದ್ದಾರೆ. ಆದರೆ ಸುಹಾಸ್ ಕೇಸ್‌ನಲ್ಲಿ ಹಲವು ಸಾಕ್ಷಿಗಳಿಗೆ ಆದರೂ ಬರೀ 8 ಜನರನ್ನು ಮಾತ್ರ ಬಂಧಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಹಾಸ್ ಕೇಸ್‌ನಲ್ಲಿ ಹಣಕಾಸಿನ ನೆರವು ನೀಡಿದವರು, ಬೆಂಬಲಿಸಿದವರು ಹೀಗೆ ಹಲವರನ್ನು ಬಂಧಿಸುವುದು ಬಾಕಿ ಇದೆ. ಹಾಗಾದ್ರೆ ಕಾಂಗ್ರೆಸ್ ನಾಯಕರುಿ ಹೇಳಿದಂತೆ ಪೋಲೀಸರು ನಡೆದುಕ“ಳ್ಳುತ್ತಿದ್ದಾರೆಯೇ ಎಂದು ರಾಜೇಂದ್ರ ಪ್ರಶ್ನಿಸಿದ್ದಾರೆ. ಸುಹಾಸ್ ಹಿಂದೂ ಸಂಘ”ನೆ ಕಾರ್ಯಕರ್ತ. ಆದರೆ ಕಾಂಗ್ರೆಸ್ ನಾಯಕರನ್ನು ಆತನನ್ನು ಕೇವಲ ಓರ್ವ ರೌಡಿಶೀ”ರ್ ಅಂತಾ ಹೇಳುತ್ತಿದ್ದಾರೆ. ಹಿಂದುತ್ವಕ್ಕಾಗಿ ಕೆಲಸ ಮಾಡಿದ್ದಕ್ಕೆ ಆತನಿಗೆ ರೌಡಿ ಅನ್ನೋ ಹೆಸರು ನೀಡಲಾಗಿದೆ ಎಂದು ರಾಜೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಸುಹಾಸ್‌ನನ್ನು ಫಾಜಿಲ್ ಸಾವಿಗೆ ಸರ್ಕಾರ ನೀಡಿದ್ದ ಪರಿಹಾರ ಹಣ ನೀಡಿಯೇ ಹತ್ಯೆ ಮಾಡಿಸಲಾಗಿದೆ. ಸರ್ಕಾರ ಆ ಹಣವನ್ನು ಕೂಡಲೇ ವಾಪಸ್ ಪಡೆಯಬೇಕು. ಕಾಂಗ್ರೆಸ್‌ಗೆ ಸರ್ಕಾರಕ್ಕೆ ಹಿಂದೂಗಳು ಬೇಡ, ಮುಸ್ಲಿಂಮರು ಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಮತ ಹಾಕಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಹಾಕಿದ ಹಿಂದೂಗಳನ್ನು ಹುಡುಕಿ ಹುಡುಕಿ ಬಂಧಿಸುತ್ತಿದ್ದಾರೆ. ಆದರೆ ಯಾಕೆ ಮುಸ್ಲಿಂರನ್ನು ಬಂಧಿಸುತ್ತಿಲ್ಲವೆಂದು ರಾಜೇಂದ್ರ ಪ್ರಶ್ನಿಸಿದ್ದಾರೆ.

ಅಲ್ಲದೇ, ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ಇಂಥವರ ರಕ್ಷಣೆ ಮಾಡುತ್ತಿದೆ. ಬಿಜೆಪಿಗೆ ಹಿಂದುತ್ವ ಅನ್ನೋದು ರಾಾಜಕೀಯಕ್ಕೆ ಮಾತ್ರ. ಎರಡೂ ಪಕ್ಷಗಳು ರಾಜಕೀಯ ಲಾಭ ಮಾಡುತ್ತಿದೆ ಎಂದು ರಾಜೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss