Hassan News : ಮಧ್ಯಾಹ್ನದ ಊಟ ಸೇವಿಸಿ, 35 ಮಂದಿ ಸೈನಿಕರು ಅಸ್ವಸ್ಥರಾಗಿದ್ದು, ಸೈನಿಕನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕುಡುಗರ ಹಳ್ಳಿ ಬಳಿ ಕ್ಯಾಂಪ್ನಲ್ಲಿ ಸಾನಿಕರು ವಾಸಿಸುತ್ತಿದ್ದು, ಇವರೆಲ್ಲ ಚಾಲನಾ ತರಬೇತಿಗೆ ಬಂದಿದ್ದರು. ಈ ವೇಳೆ ಮಧ್ಯಾಹ್ನ ಕ್ಯಾಂಪ್ನಲ್ಲೇ ತಯಾರಾದ ಆಹಾರವನ್ನ ಸೇವಿಸಿದ್ದರು.
ಆದರೆ ಊಟ ಸೇವಿಸಿದ ಬಳಿಕ, 35 ಸೈನಿಕರು ಅಸ್ವಸ್ಥರಾಗಿದ್ದಾರೆ. ಎಲ್ಲಾ ಸೈನಿಕರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರಣಕ್ಕೆ ಶಾಸಕ ಸಿಮೆಂಟ್ ಮಂಜು, ಆಸ್ಪತ್ರೆಗೆ ಭೇಟಿ ನೀಡಿ, ಸೈನಿಕರ ಆರೋಗ್ಯ ವಿಚಾರಿಸಿದ್ದಾರೆ.
ವಿದ್ಯುತ್ ದರ ಹೆಚ್ಚಳಕ್ಕೆ ಬಿಜೆಪಿ ವಿರೋಧ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ..!
ಬೇಕರಿಯಲ್ಲಿ ಸಿಲೆಂಡರ್ ಸ್ಪೋಟ: ಗಾಯಾಳುವಿಗೆ ವೇತನವೂ ಇಲ್ಲ, ಮಾಲೀಕನಿಂದ ಸೌಜನ್ಯದ ಭೇಟಿಯೂ ಇಲ್ಲ.