Bigg boss News: ಕನ್ನಡ ಬಿಗ್ಬಾಸ್ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಈ ಮೊದಲು ಸ್ವರ್ಗ-ನರಕ ಅನ್ನೋ ಕಾನ್ಸೆಪ್ಟ್ ಇದ್ದು, ಅದು ಕೂಡ ಕ್ಯಾನ್ಸಲ್ ಆಗಿ, ಈಗ ಎಲ್ಲರೂ ಒಂದೇ ಮನೆಯಲ್ಲಿದ್ದಾರೆ. ಆದರೆ ಮನೆಯಲ್ಲಿ ಲಾಯರ್ ಜಗದೀಶ್ ವರ್ತನೆ ಹಲವರಿಗೆ ಕಿರಿಕಿರಿಯುಂಟು ಮಾಡಿದೆ. ಅಲ್ಲದೇ, ದಿನದಿಂದ ದಿನಕ್ಕೆ ಲಾಯರ್ ಜಗದೀಶ್ ಬಿಗ್ಬಾಸ್ ಬಗ್ಗೆ ನಾಲಿಗೆ ಹರಿಬಿಟ್ಟು ಮಾತನಾಡುತ್ತಿದ್ದು, ಕೆಲವು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಜಗದೀಶ್ ಮತ್ತು ರಂಜೀತ್ ಹೊಡೆದಾಡಿಕೊಂಡಿರುವ ಕಾರಣಕ್ಕೆ, ಇಬ್ಬರನ್ನೂ ಬಿಗ್ಬಾಸ್ ಮನೆಯಿಂದ ಹೊರದಬ್ಬಿದ್ದಾರೆ. ಯಾಕಂದ್ರೆ ಇವರಿಬ್ಬರೂ ಕೈ ಕೈ ಮಿಲಾಯಿಸಿ ಫೈಟ್ ಮಾಡಿದ್ದಾರೆ. ಅಲ್ಲದೇ, ಜಗದೀಶ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಜಗದೀಶ್ ಬಿಗ್ಬಾಸ್ ಬಗ್ಗೆಯೂ ಮಾತನಾಡಿದ್ದು, ನಾನು ಲಕ್ಷ ಲಕ್ಷ ಜನಕ್ಕೆ ಊಟ ಹಾಕಿದವನು. ಇಲ್ಲಿ ಊಟ ಮಾಡಲಿಕ್ಕೂ ರೂಲ್ಸ್ ಇದೆ. ನನಗೆ ಬಿಗ್ಬಾಸ್ ಮನೆಯೂ ಬೇಡ, ಶೋನೂ ಬೇಡ, ಅದರಿಂದ ಸಿಗುವ 50 ಲಕ್ಷನೂ ಬೇಡ ಎಂದಿದ್ದರು.
ಇನ್ನು ಇಂಥ ಮಾತುಗಳನ್ನು ಕೇಳಿಸಿಕೊಂಡ ರಂಜೀತ್ ಕೋಪಗೊಂಡು ಜಗದೀಶ್ ಹೀಗೆ ಮಾತನಾಡುತ್ತಿದ್ದರೆ, ನಾನು ಅವರ ಎದೆಯ ಮೇಲೆ ಕಾಲಿಟ್ಟು ಹೋಗುತ್ತೇನೆ ಎಂದಿದ್ದರು. ಇದರಿಂದ ಇಬ್ಬರ ನಡುವೆ ಫೈಟ್ ಶುರುವಾಗಿ, ಇಬ್ಬರು ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗಿದೆ. ಸತ್ಯವೇನು ಎಂಬ ವಿವರಣೆ ತಿಳಿಯಲು ಕಾದು ನೋಡಬೇಕಿದೆ.