Friday, June 20, 2025

Latest Posts

ರಾಜಕೀಯಕ್ಕೆ ಬಂದು ಜಾತಿ ಮಾಡಿದ್ರೆ, ಅವರು ನಾಲಾಯಕ್: ಜಮೀರ್ ಅಹಮದ್

- Advertisement -

Hubli: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್,  ಬೆಂಗಳೂರಲ್ಲಿ ಮೂರು ದಿನದಿಂದ ನನ್ನ ಜೊತೆಗೆ ಇದ್ದಾರೆ. ಟಿಕೆಟ್ ಕೊಟ್ಟಿಲ್ಲ ಅಂತ ಎಲ್ಲೋ ಒಂದು ಕಡೆ ಅಸಮಾಧಾನ ಇತ್ತು. ಅಭಿಮಾನಿಗಳು ನಾಮಪತ್ರ ಕೊಡಲೇ ಬೇಕು ಅಂತ ಮಾಡಿಸಿದ್ದಾರೆ. ಈಗ ಒಪ್ಪಿಕೊಂಡು ನಾಳೆ ನಾಮಪತ್ರ ಹಿಂದೆ ಪಡೆಯುತ್ತಾರೆ. ಖಾದ್ರಿ ನಾಲ್ಕು ಬಾರಿ ಸೊತ್ತಿದ್ದಾರೆ, ಕಳೆದ ಬಾರಿ ಪಠಾನ್‌ಗೆ ಕೊಟ್ಟಿದ್ವಿ. ಸಿಂಪತಿ ಇದೆ ಅಂತ ಕೊಡಿ ಅಂದ್ರು ಕೊಡೋಕೆ ಆಗಿಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಪಣ ತೊಟ್ಟಿದ್ದೇನೆ ಅಂತ ಅವರೇ ಸ್ವಇಚ್ಛೆಯಿಂದ ಹಿಂದೆ ಪಡೆಯುತ್ತಿದ್ದಾರೆ. ಟಿಕೆಟ್ ಕೇಳೋದು ತಪ್ಪೇನಿಲ್ಲ, ಸಿಕ್ಕಿಲ್ಲ ಅಷ್ಟೇ. ಟಿಕೆಟ್ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತೆ. ನೂರಕ್ಕೆ ನೂರು ನಾವೇ ಗೆಲ್ತಿವೆ ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯಕ್ಕೆ ಬಂದು ಜಾತಿ ಮಾಡಿದ್ರೆ,ಅವರು ನಾಲಾಯಕ್. ನಾವು ಜಾತಿ ನೋಡಿದ್ರೆ ನಿರ್ಣಾಮ ಆಗ್ತೀವಿ. ಯಾವಾಗ ಯಾವಾಗ ಚುನಾವಣೆ ಆಗತ್ತೆ ಅವಾಗ ನಾವ ಸಾಧನೆ ಹೇಳತೀವಿ. ಬಿಜೆಪಿಯವರದು ಬರೀ ಹಿಂದೂ ಮುಸ್ಲಿಂ. ಸಾಧನೆ ಸೊನ್ನೆ. ರಾಜಕೀಯ ಬೇಳೆ ಬೇಯಸೋಕೆ ಇವರಲ್ಲಿ ಮಾತಾಡತೀದಾರೆ. ನಾವ ಯಾವ ರೈತರಿಗೂ ಇಲ್ಲೀಗಲ್ ನೋಟಿಸ್ ಕೊಟ್ಟಿದ್ರೆ‌ ನಿಲ್ಲಸ್ತೀನಿ. ನೋಟಿಸ್ ಕೊಟ್ಟವರ ಮೇಲೆ ಕ್ರಮ ಕೈಗೊಳ್ತಿನಿ. ಬಿಜೆಪಿಯವರ ಬೆಕ್ಕಿನ ತರಹ. ಹಾಲ ಕುಡಿಯೋಕೆ ಬೆಕ್ಕು ತರಹ ಕಾಯುತ್ತಿರತ್ತೆ. ಅದೇ ರೀತಿ ಬಿಜೆಪಿ ಕಾಯತೀದೆ.
ಇದು ಬಿಜೆಪಿಯ ಹುನ್ನಾರ. ಬಿಜೆಪಿಯವರ ಕಾಲದಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾನು ದಾಖಲೆ ಕೊಡತೀನಿ. ಇದಕ್ಕೆ ಮಾನ್ಯ ಯತ್ನಾಳ ಏನ ಹೇಳತಾರೆ. ಮುಜಾರಾಯಿ ವಕ್ಫ್ ಎರಡು ಒಂದೆ. ಮುಜರಾಯಿ ಇಲಾಖೆ ಅಸ್ತಿ ಕೂಡಾ ಒತ್ತುವರಿ ಆಗಿದೆ. ಅದನ್ನು ಉಳಸೋಣ ನಡೀ ಎಂದ ಜಮೀರ್ ಅಹಮ್ಮದ್ ಖಾನ್. ನನಗೆ ಹಿಂದೂ ಬ್ರದರ್ಸ್‌ ವೋಟ್ ಕೊಟ್ಟಿದ್ದಾರೆ. ನನಗೆ ಎಲ್ಲ ಸಮಾಜ ಒಂದೇ. ಎಲ್ಲ ಸಮಾಜ ಜೊತೆ ತಗೆದುಕೊಂಡು ಹೋಗೋರೆ ರಾಜಕಾರಣಿ ಎಂದದು ಜಮೀರ್ ಅಹಮಮದ್ ಹೇಳಿದ್ದಾರೆ.

ಇನ್ನು ವಕ್ಫ್ ಗೊಂದಲ ವಿಚಾರದ ಬಗ್ಗೆ ಮಾತನಾಡಿರುವ ಜಮೀರ್, ಬಿಜೆಪಿಯವರು ಈ ತರಹ ರಾಜಕಾರಣ ಮಾಡಬಾರದು. ವಿಜಯಪುರ ಜಿಲ್ಲೆಯಲ್ಲಿ 1200 ಎಕರೆ ಇಲ್ಲವೇ ಇಲ್ಲ. ಕೇವಲ ಇರೋದು ಕೇವಲ 12 ಎಕರೆ. ಅಲ್ಲಿ 11 ಎಕರೆ ಸ್ಮಶಾನ ಇದೆ. ನಾವು ಒಂದಿಂಚೂ ಜಾಗ ತಗೆದುಕೊಂಡಿಲ್ಲ. ನಮಗೆ ದಾನ ಮಾಡಿರೋದು. ಒಂದು ಲಕ್ಷ 12 ಸಾವಿರ ಎಕರೆ ದಾನ ಮಾಡಿದ್ದಾರೆ. ನಾನು 11 ಜಿಲ್ಲೆಯಲ್ಲಿ ವಕ್ಫ ಅದಾಲತ್ ಮಾಡಿದ್ದೇನೆ. ಅಧಿಕಾರಿಗಳ ಸಭೆ ಮಾಡಿದ್ದೇನೆ.

ವಿಜಯಪುರ ಜಿಲ್ಲೆಯಲ್ಲಿ ಸಭೆ ಮಾಡಿದಾಗ ಯತ್ನಾಳ ಗೆ ಅಹ್ವಾನ‌ ಕೊಟ್ಟಿದ್ವೀ. ರೈತರಿಗೆ ಅನ್ಯಾಯ ಆದ್ರೆ ಯತ್ನಾಳ ಯಾಕೆ ಸಭೆಗೆ ಬರಲಿಲ್ಲ..? ರೈತರ ಆಸ್ತಿ ತಗೋಳೊಕೆ ಸಾಧ್ಯನಾ..? ಅಧಿಕಾರಿ ಅಷ್ಟು ಸುಲಭವಾಗಿ ಮಾಡ್ತಾರಾ.? ರೈತರ ಆಸ್ತಿಯನ್ನು ಮುಟ್ಟೋಕೆ ಆಗಿಲ್ಲ. ಇದೊಂದು ರಾಜಕೀಯ ಪಿತೂರಿ. ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಬೇರೆಯವರು ಆಸ್ತಿ ತಗೋಳೋಕೆ ನಾವ ಯಾರೂ.? ರೈತರ ಆಸ್ತಿ ಮುಟ್ಟೋಕೆ ಸಾಧ್ಯ ಇಲ್ಲ. ರೈತರು ಅನ್ನದಾತರು ನಾವ ಅವರ ಆಸ್ತಿ ಮುಟ್ಟಿಸೋಕೆ ಸಾಧ್ಯನಾ.? ವಕ್ಫ ಆಸ್ತಿ ಒಂದು ಲಕ್ಷ 12 ಸಾವಿರ ಎಕರೆ ಇದೆ. ನಮ್ಮ ಬಳಿ ದಾಖಲೆ ಇದೆ. ಮುಜರಾಯಿ ವಕ್ಫ ಎರಡು ಒಂದೇ. ನಾವ ಅಲ್ಲ ಅಂತೀವಿ,ನೀವು ದೇವರ ಅಂತೀವಿ. ಅಲ್ಲ ನಮ್ಮ ನಂಬಿಕೆ. ಜೋಶಿ ಏನಾದರೂ ಹೇಳಿ,ನಾನು ಮೊದಲು ಹಿಂದೂಸ್ತಾನಿ. ಆಮೇಲೆ ಮುಸ್ಲಿಂ ಎಂದು ಜಮೀರ್ ಅಹಮದ್ ಹೇಳಿದ್ದಾರೆ.

- Advertisement -

Latest Posts

Don't Miss